ಕಾರವಾರ: ಹಣಕೋಣದ ಪ್ರದೀಪ ನಾಯ್ಕ ಎಂಬಾತರ ಮನೆ ಆವರಣದಲ್ಲಿ ಕಾಣಿಸಿಕೊಂಡ 13 ಅಡಿ ಹೆಬ್ಬಾವನ್ನು ಗೋಪಿಶೆಟ್ಟಾ ವಲಯ ಅರಣ್ಯಾಧಿಕಾರಿಗಳು ಹಿಡಿದು ಕಾಡಿಗೆ ಬಿಟ್ಟರು.
ಉರಗ ರಕ್ಷಕ ರಮೇಶ್ ಬಡಿಗೇರ್ ಹಾಗೂ ಪ್ರಶಾಂತ ಸೇರಿ ಹಾವನ್ನು ಹಿಡಿದರು. ಅಳಿವಿನ ಅಂಚಿನಲ್ಲಿರುವ ಸರಿಸೃಪಗಳು ಕಾಣಿಸಿಕೊಂಡರೆ ಅದನ್ನು ಕೊಲ್ಲುವ ಬದಲು ಅರಣ್ಯ ಇಲಾಖೆ ಮೂಲಕ ರಕ್ಷಣೆ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
Leave a Comment