ಹೊನ್ನಾವರ: ,
ದೋಷಗಳನ್ನು ಕಳಚಿ ದೇಶವನ್ನು ಕಟ್ಟುವ ಕೆಲಸ ಮಾಡಬೇಕು ಎಂದು ಆದಿಚುಂಚನಗಿರಿ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಕರೆ ನೀಡಿದರು.
ತಾಲೂಕು ಒಕ್ಕಲಿಗರ ಸಂಘದವರಿಂದ ತಾಲೂಕಿನ ಕೆಳಗಿನೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಭವನ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಗುರುವಂದನೆ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.
ಅವಗುಣ ಮುಕ್ತವಾಗಿರುವ, ಸಧೃಡ ಯುವಕರಿಂದ ಸಮಾಜದ ಮತ್ತು ದೇಶದ ಉದ್ದಾರ ಸಾಧ್ಯ. ಒಕ್ಕಲಿಗರ ಸಮುದಾಯ ಇಡೀ ದೇಶಕ್ಕೆ ಅನ್ನವನ್ನು ಕೊಟ್ಟಂತ ಸಮುದಾಯ. ರಾಷ್ಟ್ರಕವಿ ಕುವೆಂಪು, ನಾಡಿನ ನಿರ್ಮಾಪ ಕ ಕಂಪೆಗೌಡ ಹಾಗೂ ಹಿರಿಯ ರಾಜಕಾರಣಿ ದೇವೇಗೌಡರು ಈ ಸಮಾಜದ ಹೆಮ್ಮೆ. ಹಿರಿಯರು ನೀಡಿದ ಕೊಡುಗೆಯನ್ನು ಸ್ಮರಿಸಿಕೊಂಡು ಅವರು ತೋರಿದ ಹಾದಿಯಲ್ಲಿ ಮುನ್ನಡೆಯಿರಿ ಎಂದು ಕರೆ ನೀಡಿದರು.
ಶಾಖಾ ಮಠಾಧೀಶರಾದ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ ಈ ಸಮುದಾಯ ಭವನ ಒಕ್ಕಲಿಗ ಸಮಾಜಕ್ಕೆ ಸಿಮೀತವಾಗದೆ ಎಲ್ಲಾ ಸಮಾಜಕ್ಕೆ ಉಪಯೋಗವಾಗುವಂತಾಗಲಿ. ನಮ್ಮಲಿರುವ ಚೈತನ್ಯವನ್ನು ಜಾಗೃತಗೊಳಿಸಿ ಜವಾಬ್ದಾರಿಯಿಂದ ಸಭಾಭವನವನ್ನು ಪೂರ್ಣಗೊಳಿಸಬೇಕು ಎಂದರು.
ಸ್ಥಳಿಯ ಶಾಸಕ ಮಂಕಾಳ ವೈದ್ಯ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಶಂಭು ಗೌಡ, ಪದ್ಮಶ್ರೀ ಪುರಸ್ಕøತೆ ಸುಕ್ರಿ ಬೊಬ್ಬ ಗೌಡ, ಜೆಡಿಎಸ್ ಮುಖಂಡ ಗಣಪಯ್ಯ ಮಂಜು ಗೌಡ, ತಾ.ಪಂ.ಸದಸ್ಯ ಗಣಪಯ್ಯ ಕನ್ಯಾ ಗೌಡ, ಜಿ.ಪಂ.ಅಧ್ಯಕ್ಷೆ ಜಯಶ್ರೀ ಮೊಗೇರ, ಜಿ.ಪಂ.ಸದಸ್ಯರಾದ ದೀಪಕ ನಾಯ್ಕ, ಸವಿತಾ ಗೌಡ, ಹಿರಿಯ ವಕೀಲ ಕೆ.ಟಿ.ಗೌಡ, ತಹಸೀಲ್ದಾರ ವಿ.ಆರ್.ಗೌಡ, ತಿಲಕ ಗೌಡ, ವಾಸು ಗೌಡ, ದೇವಿ ಗೌಡ, ಶ್ರೀಮಾಲಾ ಗೌಡ, ಸುಬ್ರಾಯ ಗೌಡ, ತಿಮ್ಮಪ್ಪ ಗೌಡ ಇತರರು ಉಪಸ್ಥಿತರಿದ್ದರು. ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಎಚ್.ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶ್ರೀಗಳಿಗೆ ತಾಲೂಕಿನ ಒಕ್ಕಲಿಗ ಸಮಾಜದವರ ಪರವಾಗಿ ಪುಷ್ಪವೃಷ್ಟಿಯೊಂದಿಗೆ ಗುರುವಂದನೆ ಸಲ್ಲಿಸಲಾಯಿತು. ತಾಲೂಕಿನ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕರಿಸಲಾಯಿತು. ಸುಕ್ರಿ ಬೊಮ್ಮು ಗೌಡ ಅವರನ್ನು ಸನ್ಮಾನಿಸಲಾಯಿತು.
Leave a Comment