ಕಾರವಾರ: ಬ್ಯಾಂಕ್ ಸಿಬ್ಬಂದಿ ಸಹಕಾರದಿಂದ ಮಲ್ಲಾಪುರ ಸಿಂಡಿಕೇಟ್ ಬ್ಯಾಂಕ್ನ ಗ್ರಾಹಕರು ನಕಲಿ ಚಿನ್ನಾಭರಣಗಳ ಮೇಲೆ ಲಕ್ಷಾಂತರ ರೂ ಸಾಲ ಪಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸಿಂಡಿಕೇಟ್ ಬ್ಯಾಂಕ್ ನವರು ರಾಮಚಂದ್ರ ಶೇಟ್ ಎಂಬಾತರನ್ನು ಆಭರಣ ಪರೀಕ್ಷೆಗಾಗಿ ನೇಮಿಸಿಕೊಂಡಿದ್ದರು. ಗ್ರಾಹಕರು ಅಡವಿಡುವ ನಕಲಿ ಬಂಗಾರವನ್ನು ಕೂಡ ಅಸಲಿ ಎಂದು ಪ್ರಮಾಣಿಕರಿಸಿ ಸಾಲಕ್ಕಾಗಿ ಶಿಫಾರಸ್ಸು ಮಾಡುತ್ತಿದ್ದ ಆರೋಪ ರಾಮಚಂದ್ರ ಶೇಟ್ ಮೇಲಿದೆ. ಆರೋಪಿಯೇ ಕೆಲ ಗ್ರಾಹಕರನ್ನು ಭೇಟಿಯಾಗಿ ನಕಲಿ ಬಂಗಾರ ಅಡವಿಡುವಂತೆ ಪ್ರಚೋದಿಸುತ್ತಿದ್ದ. ಜನ ಇಡುವ ಬಂಗಾರವನ್ನು ಅಸಲಿ ಎಂದು ದೃಡಿಕರಿಸಿ ಸಾಲಕ್ಕಾಗಿ ಶಿಪಾರಸ್ಸು ಮಾಡುತ್ತಿದ್ದ. ಕಳೆದ ಹಲವು ವರ್ಷಗಳಿಂದ ಬ್ಯಾಂಕ್ನಲ್ಲಿ ಇರಿಸಿದ್ದ ಬಂಗಾರವನ್ನು ಗ್ರಾಹಕರು ಸಾಲ ತೀರಿಸದ ಕಾರಣ ಹರಾಜು ಕರೆಯಲಾಗಿತ್ತು. ಹರಾಜು ಪ್ರಕ್ರಿಯೆ ವೇಳೆ ಬಂಗಾರ ನಕಲಿ ಎಂದು ತಿಳಿದು ಬಂದಿದೆ. ಈವರೆಗೆ 6.77 ಲಕ್ಷ ವಂಚಿಸಿರುವ ಕುರಿತು ಮಾಹಿತಿ ಲಭಿಸಿದೆ. ಈ ಸಂಬಂಧ ಕದ್ರಾದ ರಾಮಚಂದ್ರ ಪೊಳಲಿ 1.37 ಲಕ್ಷ, ಸೋನಾರವಾಡದ ಸಂದೀಪ್ ರಾಯ್ಕರ್ 2.76 ಲಕ್ಷ, ಮಲ್ಲಾಪುರದ ಕಿರಣ್ ದೇವಳಿ 1.92 ಲಕ್ಷ ಹಾಗೂ ಅಂಜಲಿ ಆಚಾರಿ 72 ಸಾವಿರ ವಂಚಿಸಿದ್ದಾರೆ ಎಂದು ಮಲ್ಲಾಪುರ ಠಾಣಾ ಪೊಲೀಸರು ನಾಲ್ಕು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Leave a Comment