ಕಾರವಾರ:
ಒತ್ತಡಗಳ ನಡುವೆಯೂ ಶಾಂತತೆ ಬೆಳೆಸಿಕೊಂಡು ಉತ್ತಮ ಕೆಲಸ ಮಾಡುವವ ಯಶಸ್ಸು ಪಡೆಯಲು ಸಾದ್ಯ ಎಂದು ಇಂಡಿಯನ್ ಮೆಡಿಕಲ್ ಅಸೋಶಿಯೇಶನ್ ಅಧ್ಯಕ್ಷ ಸುರೇಶ ಭಟ್ಟ ಹೇಳಿದರು.
ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬುಧವಾರ ನಡೆದ ವೃತ್ತಿ ಜೀವನ ಸಮತೋಲನದ ಜಿಲ್ಲಾ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಾನಸಿಕ ಒತ್ತಡದಿಂದ ಮಾಡುವ ಕೆಲಸವೂ ವೃತ್ತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಒತ್ತಡಗಳನ್ನು ನಿವಾರಿಸಿಕೊಂಡು ಶಾಂತತೆಯಿಂದ ಕೆಲಸ ಮಾಡಿದಲ್ಲಿ ಅದು ಪರಿಪೂರ್ಣಗೊಳ್ಳುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು. ಜರ್ಮನಿಯ ಇನ್ನೊವೇಟಿವ್ ಹೆಲ್ತ್ ಕೇರ್ ಮ್ಯಾನೇಜಮೆಂಟ್ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನಿಲ ಶರ್ಮಾ ಮಾತನಾಡಿ, ವೃತ್ತಿ ಬದುಕು ಹಾಗೂ ಕೌಟುಂಬಿಕ ಜೀವನ್ನು ಸರಿದೂಗಿಸಿಕೊಂಡು ಹೋಗುವ ಚಾಣಾಕ್ಯತೆ ಪ್ರತಿಯೊಬ್ಬರಲ್ಲಿ ಬೆಳೆಯಬೇಕು ಎಂದರು. ಕಾಲೇಜು ಪ್ರಾಚಾರ್ಯೆ ಕಲ್ಪನಾ ಕೆರವಡಿಕರ್ ಅಧ್ಯಕ್ಷತೆ ವಹಿಸಿದ್ದರು.
ಮೀನಾಕ್ಷಿ ಪಾಟೀಲ ಪ್ರಾರ್ಥಿಸಿದರು. ಪ್ರೋ. ಶಿವಾನಂದ ಭಟ್ಟ ಸ್ವಾಗತಿಸಿದರು. ಪ್ರೀತಿ ಕಲ್ಲೂರು ಪರಿಚಯಿಸಿದರು. ಪ್ರೋ. ಪ್ರಗಾಸಂ ವಂದಿಸಿದರು.
Leave a Comment