ಹೊನ್ನಾವರ ‘ತಾಲೂಕಿನ ಕರ್ಕಿಯ ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ 10 ದಿನಗಳ ಉಚಿತ ಎನ್.ಟಿ.ಎಸ್.ಇ ಮತ್ತುಎನ್.ಎಮ್.ಎಮ್.ಎಸ್. ಪರೀಕ್ಷಾ ಪೂರ್ವತರಬೇತಿ ಶಿಬಿರವು ಸಮರ್ಪಣಾತರಬೇತಿಕೇಂದ್ರದಆಶ್ರಯದಲ್ಲಿ ಮತ್ತು ಸೇತುಬಂಧಟ್ರಸ್ಟ್ಕರ್ಕಿಇದರ ಪ್ರಯೋಜಕತ್ವದಲ್ಲಿಉದ್ಘಾಟನೆಗೊಂಡಿತು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ ಸೃಜನ ಶೀಲತೆ,ಅರ್ಪಣಾ ಮನೋಭಾವ ಮತ್ತು ನಿರಂತರ ಪ್ರಯತ್ನಇದ್ದಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸುಗಳಿಸಲು ಸಾಧ್ಯಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಸಮರ್ಪಣಾತರಬೇತಿಕೇಂದ್ರದ ಸ್ಥಾಪಕ ಸಂಚಾಲಕರಾದ ಆನಂದ ನಾಯ್ಕ ಮಾತನಾಡಿ, ಶಿಸ್ತು, ಸಮಯಪ್ರಜ್ಞೆ, ಮತ್ತು ಪ್ರಯತ್ನಶೀಲತೆಯನ್ನು ಮೈಗೂಡಿಸಿಕೊಂಡು ಯಶಸ್ಸನ್ನು ತಮ್ಮದಾಗಿಸಿಕೊಂಡಲ್ಲಿ ಸಮಾಜ ನಿಮ್ಮನ್ನುಗೌರವಿಸುತ್ತದೆಎಂದರು.
ಸಭಾಧ್ಯಕ್ಷತೆಯನ್ನು ವಹಿಸಿದ ಸೇತುಬಂಧಟ್ರಸ್ಟ್ನ ಕಾರ್ಯದರ್ಶಿ ಜಿ,ಹೆಚ್,ನಾಯ್ಕ ಮಾತನಾಡಿ, ಸ್ಪರ್ದಾತ್ಮಕಯುಗದಲ್ಲಿ ವಿದ್ಯಾರ್ಥಿಗಳ ಪಾತ್ರ, ಪರೀಕ್ಷಾ ಸಿದ್ಧತೆ, ಮತ್ತು ವ್ಯಕ್ತಿತ್ವ ವಿಕಸನದ ಬಗ್ಗೆ ವಿವರಿಸಿದರು. ಸೇತುಬಂಧಟ್ರಸ್ಟ್ನ ದ್ಯೆಯೋದ್ಧೇಶಗಳ ಬಗ್ಗೆ ತಿಳಿಸಿದರು.
ಶಾಲೆಯ ಮುಖ್ಯಾಧ್ಯಾಪಕರಾದ ಎಲ್.ಎಮ್ ಹೆಗಡೆಂ ಪರೀಕ್ಷಾ ಪೂರ್ವತರಬೇತಿಯ ಮಹತ್ವವನ್ನು ತಿಳಿಸುತ್ತಾ, ಪ್ರಾಸ್ತಾವಿಕ ನುಡಿಗೈದು ಸರ್ವರನ್ನೂ ಸ್ವಾಗತಿಸಿದರು. ಶ್ರೀಕಾಂತ ಹಿಟ್ನಳ್ಳಿ ಮದನಾರ್ಪಣೆ ಮಾಡಿದರು.ತಾಲೂಕಿನ ವಿವಿಧ ಪ್ರೌಢಶಾಲೆಗಳ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡು ಶಿಬಿರದಲ್ಲಿ ಪಾಲ್ಗೊಂಡರು. ಎಮ್.ಹೆಚ್ ನಾಯ್ಕ ಮತ್ತು ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು. ವಿನಾಯಕಅವಧಾನಿ ಕಾರ್ಯಕ್ರಮ ನಿರೂಪಣೆ ಮಾಡಿದರು.
Leave a Comment