ಹೊನ್ನಾವರ:
ತಾಲೂಕಿನ ಗ್ರಾಮೀಣ ಭಾಗವಾದ ಭಾಸಗಾರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊನ್ನಾವರದ ‘ಸಾಕ್ಷಿ’ ಶಿಕ್ಷಕರ ಬಳಗವು ಎಸ್.ಡಿ.ಎಮ್.ಸಿಯವರ ಸಹಕಾರದಲ್ಲಿ ಸಂಘಟಿಸಿದ್ದ ಎರಡು ದಿನಗಳ ರಜಾ ಶಿಬಿರ ‘ಚಿಲುಮೆ-’ ಯಶಸ್ವಿಯಾಗಿ ನಡೆಯಿತು.
ಶಿಬಿರವನ್ನು ದೀಪ ಬೆಳಗಿ, ಕಾಗದದ ಹೂ ಅರಳಿಸಿ ಉದ್ಘಾಟಿಸಿದ ತಾಲೂಕು ಪಂಚಾಯತ ಅಧ್ಯಕ್ಷರಾದ ಉಲ್ಲಾಸ ನಾಯ್ಕ ಮಾತನಾಡಿ. ತಾಲೂಕು ಕೇಂದ್ರದಿಂದ ದೂರ ಇರುವ ಇಂತಹ ಗ್ರಾಮೀಣ ಭಾಗಕ್ಕೆ ಸರಕಾರಿ ಶಾಲೆಯ ಶಿಕ್ಷಕರ ಬಳಗ ಸ್ವಯಂ ಸ್ಫೂರ್ತಿಯಿಂದ ಬಂದು ಮಕ್ಕಳಿಗೆ ವಿಶೇಷ ಅವಕಾಶ ಕಲ್ಪಿಸಿಕೊಡುತ್ತಿರುವುದು ಶ್ಲಾಘನೀಯ ಎಂದರು.
ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುಧಾಕರ ನಾಯ್ಕ ಅಧ್ಯಕ್ತೆವಹಿಸಿ
ತಾಲೂಕಿನ 20 ಕ್ಕೂ ಹೆಚ್ಚು ಶಿಕ್ಷಕರು ಭಾಗವಹಿಸಿದ್ದ ಶಿಬಿರದಲ್ಲಿ ಸಂಪನ್ಮೂಲ ಶಿಕ್ಷಕರಾದ ವಿ,ಜಿ,ನಾಯ್ಕ, ರಮೇಶ ಮಲ್ಲಪ್ಪ, ಕೃಷ್ಣ ಅಂಬಿಗ, ಎಮ್.ಟಿ.ಗಣಪತಿ , ಶೈಲಾ ಚಿತ್ರಾಪುರ ಮೊದಲಾದವರು ಮಕ್ಕಳನ್ನು ಆಕಾಶಬುಟ್ಟಿ ತಯಾರಿ, ಹಾಡು ನೃತ್ಯ, ಮೋಜಿನ ಆಟಗಳು, ಪೇಪರ್ ಕ್ರಾಪ್ಟ, ಚಿತ್ರಕಲೆ… ಹೀಗೆ ವಿವಿಧ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿದರೆ ಉಳಿದವರು ಸಹಕರಿಸಿದರು. ಸಂಪನ್ಮೂಲ ಶಿಕ್ಷಕರು ಕೆಲವರು ಶಾಲೆಯಲ್ಲೇ ಉಳಿದುಕೊಂಡು ಶಿಬಿರದ ಪ್ರತಿ ಕ್ಷಣವೂ ಉಪಯೋಗವಾಗುವಂತೆ ಕಾಳಜಿವಹಿಸಿದ್ದರು. ವಿಶೇಷ ಪ್ರತಿಭೆ ಅನಿಲಗೋಡ ಪ್ರೌಢ ಶಾಲೆಯ ಕುಮಾರ ಪ್ರತೀಕ ಅಪ್ಪ ಪ್ರಕಾಶ ಹೆಗಡೆÉ ಆಗಮಿಸಿ ಗಣಿತದ ಸವಾಲುಗಳ ಮೂಲಕ ಮಕ್ಕಳನ್ನು ಚಕಿತಗೊಳಿಸಿದ್ದು ವಿಶೇಷವಾಗಿತ್ತು.
ಈ ಭಾಗದ ಸಂಶಿ, ಮಾಗೋಡ, ಹಾಡಿ, ಹೊಸಗದ್ದೆ, ಕುಂಬಾರಕೇರಿ, ಭಾಸಗಾರ, ಶಾರದಾಂಬಾ ಶಾಲೆ ಹೀಗೆ ಬೇರೆ ಬೇರೆ ಶಾಲೆಗಳ ಸುಮಾರು 50 ಮಕ್ಕಳು ಉತ್ಸಾಹದಿಂದ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದರು.
ಶಿಕ್ಷಕ ಮಂಜುನಾಥ ಹಸ್ಲರ್ ಎಲ್ಲರನ್ನು ಸ್ವಾಗತಿಸಿದರು. ಶಿಬಿರ ನಿರ್ದೇಶಕರಾದ ರಮೇಶ ಮಲ್ಲಪ್ಪ ಕಾರ್ಯಕ್ರಮ ನಿರ್ವಹಿಸಿದರು É, ಹರಿಶಚಂದ್ರ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಸಾಕ್ಷಿ ಆಶಯ ಮತ್ತು ಶಿಬಿರದ ಉದ್ದೇಶ ವಿವರಿಸಿದರು. ್ಲ ಶಿಕ್ಷಕಿ ಹೊನ್ನಿ ಮುಕ್ರಿ ವಂದಿಸಿದರು.
Leave a Comment