ಕಾರವಾರ: ಬೆಳಗಾವಿಯ ಚಿಕ್ಕೊಡಿಯಲ್ಲಿ ಈಚೆಗೆ ಅಮದಳ್ಳಿಯ ಬಂಟದೇವ ಯುವಕ ಸಂಘದವರು ಪ್ರದರ್ಶಿಸಿದ ಜನ ಜಾಗೃತಿ ನಾಟಕ ಗಮನ ಸೆಳೆಯಿತು.
ಸಂಗೀತ ಮತ್ತು ನಾಟಕ ವಿಭಾಗ ಬೆಂಗಳೂರು, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಬೆಳಗಾವಿ, ತಾಲೂಕಾ ಪಂಚಾಯತ ಚಿಕ್ಕೋಡಿ ಆಶ್ರಯದಲ್ಲಿ ಕಸ ನಿರ್ವಹಣೆ ಮತ್ತು ಶೌಚಾಲಯ, ಸ್ವಚ್ಚ ಭಾರತ ಅಭಿಯಾನ ಕುರಿತು “ಜನಜಾಗೃತಿ ಕಾರ್ಯಕ್ರಮ”ವನ್ನು ಸಂಘಟಿಸಲಾಗಿತ್ತು. ಚಿಕ್ಕೋಡಿ ತಾಲೂಕಿನ ಉಮರಾಣಿ, ಬೆಳಕೋಡ, ಬಂಬಲವಾಡ, ಕರಗಾಂವ, ಜೈನಾಪೂರ ಮತ್ತು ಮುಗಳಿ ಗ್ರಾಮಗಳಲ್ಲಿ ಬಂಟದೇವ ಯುವಕ ಸಂಘದವರು ನಾಟಕ ಪ್ರದರ್ಶಿಸಿದರು. ಕಲಾವಿದರಾದ ಮಂಜುನಾಥ ಮುದ್ಘೇಕರ್, ನಾಗರಾಜ ಗೌಡ, ಉಮಾಕಾಂತ ಗೌಡ, ಶ್ರೀನಿವಾಸ ಅಂಬಿಗ, ಉಲ್ಲಾಸ ಗೌಡ, ರಾಜೇಶ ಮಡಿವಾಳ, ಪುರುಷೋತ್ತಮ ಗೌಡ, ಗಜಾನನ ಅಂಬಿಗ, ಮುರಳಿ ಗೌಡ, ಅಜಯ ಮಡಿವಾಳವಿನೋದ ಗೌಡ ಕಲಾ ತಂಡದಲ್ಲಿದ್ದರು.
Leave a Comment