ಕಾರವಾರ:
ಕೋಡಿಬಾಗ ಸಾಯಿಕಟ್ಟಾದ ಶಿರಡಿ ಸಾಯಿಬಾಬಾ ದೇವಸ್ಥಾನದ ಸುವರ್ಣ ಮಹೋತ್ಸವ ಕಾರ್ಯಕ್ರಮ ಅ. 20 ರಿಂದ 22 ರವರೆಗೆ ಜರುಗಲಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದದೇವಸ್ಥಾನದ ವ್ಯವಸ್ಥಾಪಕ ಶಿವಾನಂದ ಮೇತ್ರಿ, ಸತ್ಯ ಸಾಯಿಬಾಬಾ ಅವರ ಅಮೃತ ಹಸ್ತದಿಂದ ಪ್ರತಿಷ್ಠಾಪನೆಗೊಂಡ ಶಿರಡಿ ಸಾಯಿಬಾಬಾ ಅವರ ವಿಶ್ವದ ಮೂರನೇ ಮಂದಿರ ಇದಾಗಿದೆ. 1968 ಅಕ್ಟೋಬರ್ 24 ರಂದು ಕಾರವಾರಕ್ಕೆ ಆಗಮಿಸಿದ್ದ ಅವರು ಪಂಚರತ್ನಗಳನ್ನು ಸ್ವತಃ ಸೃಷ್ಟಿಸಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ಅಲ್ಲಿ ಇರಿಸಲಾಗಿದ್ದ ಆಸನದಲ್ಲಿ ವಿರಾಜಮಾನರಾಗಿದ್ದರು. ಪ್ರತಿಷ್ಠಾಪನೆ ಕಾರ್ಯ ನಡೆದು 50 ವರ್ಷ ಕಳೆದ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.
ಅ. 20 ರಂದು ಬೆಳಗ್ಗೆ 10 ಗಂಟೆಗೆ ಸ್ನಾನ ಶುದ್ಧಿ ಶರೀರ ಶುದ್ಧಿಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಸಂಜೆ 5.30 ಕ್ಕೆ ರಾಮಕೃಷ್ಣ ಆಶ್ರಮದ ಭವೇಶಾನಂದಜೀ ಸುವರ್ಣ ಮಹೋತ್ಸವಕ್ಕೆ ಚಾಲನೆ ನೀಡುವರು. ಸಂಜೆಯೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಅ.21 ರಂದು ಬೆಳಗ್ಗೆ 9 ಗಂಟೆಯಿಂದ ಕಾಜುಬಾಗದ ಮಾರುತಿ ದೇವಸ್ಥಾನದಿಂದ ಶೋಭಾಯಾತ್ರೆ ನಡೆಯಲಿದೆ. ನಂತರ ಗೃಹಶಾಂತಿ, ಮೃಂತ್ಯುಂಜಯ ಹೋಮ ಕಲಾಭಿವೃದ್ಧಿ ಹೋಮ , ನಡೆಯಲಿದೆ. ಮಧ್ಯಾಹ್ನ 12 ರಿಂದ ಅನ್ನ ಸಂತರ್ಪಣೆ, ಸಂಜೆ 4.30 ರಿಂದ ರುದ್ರ ಪಠಣ, 5 ರಿಂದ ನಾಮ ಸಂಕೀರ್ತನೆ ನಡೆಯಲಿದೆ. ಸಂಜೆ 5.30 ಕ್ಕೆ ಸಭಾ ಕಾರ್ಯಕ್ರಮ ಜರುಗಲಿದ್ದು, ಜಿಲ್ಲಾ ನ್ಯಾಯಾಧೀಶರಾದ ವಿಠ್ಠಲ್ ಎಸ್.ಧಾರವಾಡಕರ್ ಉದ್ಘಾಟಿಸುವರು. ಪತ್ರಕರ್ತ ಗಂಗಾಧರ ಹಿರೇಗುತ್ತಿ ಅತಿಥಿಯಾಗಿರುವರು. ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ದೇವಿದಾಸ ನಾಯ್ಕ ಅಧ್ಯಕ್ಷತೆ ವಹಿಸುವರು. ಮೈಸೂರಿನ ಮಂಜುನಾಥ ಎಂ.ಕೆ.ಉಪನ್ಯಾಸ ನೀಡುವರು. ರಾತ್ರಿ 8.30 ರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಅ. 22 ರಂದು ಬೆಳಗ್ಗೆ 5 ರಿಂದ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು, ಸಾಯಿ ಗಾಯತ್ರಿ ಮಹಾಯಾಗ ನಡೆಯಲಿದೆ. ಮಧ್ಯಾಹ್ನ 12ರಿಂದ ಪ್ರಧಾನ ಕಲಷಾಭಿಷೇಕ, 12.30 ರಿಂದ ಸಾರ್ವಜನಿಕ ಅನ್ನ ಸಂತರ್ಪಣೆ, ಸಂಜೆ 4 ರಿಂದ ಸತ್ಸಂಗ ಕಾರ್ಯಕ್ರಮ ಜರುಗಲಿದೆ. ಮುz್ದÉೀನಹಳ್ಳಿ ಸತ್ಯಸಾಯಿ ಸೇವಾ ಸಮಿತಿಯ ಬಿ.ಎನ್.ನರಸಿಂಹಮೂರ್ತಿ ಅತಿಥಿಯಾಗಿರುವರು. ಅಮೃತವಾಹಿನಿ ಮಾಸಪತ್ರಿಕೆಯ ಸಂಪಾದಕ ಕೆ.ಸಂಜೀವ ಶೆಟ್ಟಿ ಉಪನ್ಯಾಸ ನೀಡುವರು. ರಾತ್ರಿ 9.30 ರಿಂದ ದೀಪಕ್ ದೇಸಾಯಿ ವಿರಚಿತ `ಯೋಗಿಯಾಂಚಾ ರಾಜಾ ಸಾಯೀಶ್ವರ’ ಎಂಬ ಮರಾಠಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು. ದೇವಿದಾಸ ನಾಯ್ಕ, ಮಾಧವ ನಾಯ್ಕ, ಡಿ.ಆರ್.ನಾಯ್ಕ ಇದ್ದರು.
Leave a Comment