ಹಳಿಯಾಳ:
ತಾಲೂಕಿನ ಪಟ್ಟಣ, ಗ್ರಾಮೀಣ ಭಾಗದಲ್ಲಿ ಹಾಗೂ ರಿಕ್ರೇಶನ್ ಕ್ಲಬ್ಗಳಲ್ಲಿ ಮೀತಿ ಮೀರಿ ರಾಜಾರಾಷೋವಾಗಿ ನಡೆದಿರುವ ಗ್ಯಾಂಬ್ಲಿಂಗ್(ಜೂಜು) ಹಾವಳಿಯನ್ನು ಕೂಡಲೇ ತಡೆಗಟ್ಟಬೇಕು ಇಲ್ಲವಾದಲ್ಲಿ ಸಂಬಂಧಿಸಿದ ಇಲಾಖೆಗಳ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಹಳಿಯಾಳ ತಾಲೂಕ ಬಿಜೆಪಿ ಘಟಕ ಮನವಿ ಸಲ್ಲಿಸುವ ಮೂಲಕ ತಾಲೂಕಾಡಳಿತಕ್ಕೆ ಎಚ್ಚರಿಕೆ ನೀಡಿದೆ.
ಇಲ್ಲಿಯ ಮಿನಿ ವಿಧಾನಸೌಧಕ್ಕೆ ತೆರಳಿದ ಬಿಜೆಪಿ ಪದಾಧಿಕಾರಿಗಳ ನಿಯೋಗವು ತಹಸೀಲ್ದಾರ ವಿದ್ಯಾಧರ ಗುಳಗುಳೆ ಹಾಗೂ ಸಿ.ಪಿ.ಐ ಸುಂದ್ರೇಶ ಹೊಳೆಣ್ಣನವರರೊಂದಿಗೆ ಸಭೆ ನಡೆಸಿ ಗ್ಯಾಂಬ್ಲಿಂಗ್ ಜೂಜಾಟ, ಬೆಟ್ಟಿಂಗ್ನಿಂದ ಕುಟುಂಬದ ಮೇಲಾಗುವ ಹಾಗೂ ಸಾಮಾಜಿಕ ಸ್ವಾಸ್ಥ್ಯ ಹದಗೆಡುವುತ್ತಿರುವುದರ ಬಗೆಗೆ ಸುಧೀರ್ಘ ಚರ್ಚಿಸಿ ಬಳಿಕ ಮನವಿಯನ್ನು ಸಲ್ಲಿಸಿದರು.
ರಿಕ್ರೇಶನ್ ಕ್ಲಬ್-ಯುವಕ ಮಂಡಳಗಳ ಹೆಸರಿನಲ್ಲಿ ಪರವಾನಿಗೆ ಪಡೆದು ಅಲ್ಲಿ ಅನಧಿಕೃತವಾಗಿ ಇಸ್ಫೀಟ್ ಆಡಿಸಲಾಗುತ್ತಿದ್ದು ಇದರಿಂದ ಯುವಜನಾಂಗ ದಾರಿ ತಪ್ಪುತ್ತಿದ್ದಾರೆ. ತಾಲೂಕಿನಲ್ಲಿ ನಡೆದಿರುವ ಗ್ಯಾಂಬ್ಲಿಂಗ್ ಹಾಗೂ ದೀಪಾವಳಿಯ ನಿಮಿತ್ತ್ಯ ಆರಂಭಗೊಂಡ ಬಹಿರಂಗ ಜೂಜಾಟವನ್ನು ಕೂಡಲೇ ಬಂದ್ ಮಾಡಬೇಕೆಂದು ಗಡವು ನೀಡಿದ್ದಾರೆ, ಇಲ್ಲವಾದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಮನವಿಯಲ್ಲಿ ನೀಡಲಾಗಿದೆ.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಶಾಸಕ ಸುನೀಲ್ ಹೆಗಡೆ ಹಳಿಯಾಳ ಬಸ್ ನಿಲ್ದಾಣ ರಸ್ತೆ ಸೇರಿದಂತೆ ಪಟ್ಟಣದ ಹೃದಯ ಭಾಗದಲ್ಲಿ ರಿಕ್ರೇಶನ್ ಕ್ಲಬ್ ಹೆಸರಿನಲ್ಲಿ ರಾಜಾರೋಷವಾಗಿ ಜೂಜು ಇದಷ್ಟೇ ಅಲ್ಲದೇ ಬೆಟ್ಟಿಂಗ್, ಮಟಕಾ, ವೈಶ್ಯಾವಾಟಿಕೆ ಇನ್ನಿತರ ಅನೃತಿಕ ಹಾಗೂ ಅಕ್ರಮ ಚಟುವಟಿಕೆಗಳನ್ನು ನಡೆಸಲಾಗುತ್ತಿದ್ದು ಈ ದಂಧೆಗಳಲ್ಲಿ ಕೆಲವು ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಭಾಗಿಯಾಗಿರುವುದು ದುರದೃಷ್ಠಕರ ಎಂದಿರುವ ಅವರು ಈ ಬಗ್ಗೆ ತಾವು ಪೋಲಿಸ್ ಮಹಾನಿರ್ದೇಶಕ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅವರಿಗೆ ದೂರು ನೀಡಿದ್ದು ಈ ದಂಧೆಗಳಿಗೆ ಸಂಪೂರ್ಣ ಕಡಿವಾಣ ಹಾಕಬೇಕು ಇಲ್ಲವಾದಲ್ಲಿ ತಾಲೂಕಾಡಳಿತ, ಪೋಲಿಸ್ ಠಾಣೆ ಎದುರು ನೊಂದ ಕುಟುಂಬಗಳ ಜೊತೆ ತಮ್ಮ ಮುಂದಾಳತ್ವದಲ್ಲಿ ಹೋರಾಟ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.
ಮನವಿ ಸಲ್ಲಿಸುವಾಗ ಬಿಜೆಪಿ ಅಧ್ಯಕ್ಷ ಶಿವಾಜಿ ನರಸಾನಿ, ಮುಖಂಡರಾದ ವಿ.ಎಮ್.ಪಾಟೀಲ, ಅನಿಲ ಮುತ್ನಾಳ, ಉದಯ ಹೂಲಿ, ಉಮೇಶ ದೇಶಪಾಂಡೆ, ಅಣ್ಣಪ್ಪ ಬಂಡಿವಾಡ, ನಾರಾಯಣ ಬೆಳಗಾಂವಕರ, ಪ್ರದೀಪ ಹಿರೇಕರ, ಬಸಣ್ಣ ಕುರುಬಗಟ್ಟಿ, ಇಲಿಯಾಸ ಬಳಿಗಾರ, ರಾಘು ನಾಯ್ಕÀ, ಅಣ್ಣಪ್ಪಾ ವಡ್ಡರ ಇತರರು ಇದ್ದರು.
Leave a Comment