À ಹೊನ್ನಾವರ
ಇಲ್ಲಿಯ ಪಟ್ಟಣ ಪಂಚಾಯಿತಿಯ ಅಧ್ಯಕ್ಷೆ ಜೈನಾಬಿ ಸಾಬ್ ವಿರುದ್ದ ಅವಿಶ್ವಾಸ ಗೊತ್ತುವಳಿ ಮಂಡಿಸಲು ಪ.ಪಂ.ನ 14 ಸದಸ್ಯರು ಮುಖ್ಯಾಕಾರಿಯವರಿಗೆ À ಮನವಿ ಸಲ್ಲಿಸಿದ್ದು ತೀವ್ರ ಕುತೂಹಲ ಕೆರಳಿಸಿದೆ.
ಸದಸ್ಯರುಗಳಾದ ಕಾಂಗ್ರೆಸ್ ಪಕ್ಷದ ರವೀಂದ್ರ ಶಿವಪ್ಪ ನಾಯ್ಕ, ತುಳಸೀದಾಸ ಪುಲಕರ, ರಾಜಶ್ರೀ ಬಾಲಚಂದ್ರ ನಾಯ್ಕ, ಜೊಸ್ಪೀನ್ ಡಯಾಸ್, ಮಹಾಲಕ್ಷ್ಮೀ ಹರಿಜನ, ಜಮೀಲಾಬಿ ಅಬ್ದುಲ್ಮುನಾಪ್ ಶೇಖ್, ಬಿಜೆಪಿಯ ಸುರೇಶ ವಿಶ್ವನಾಥ ಶೇಟ್, ಬಾಲಕೃಷ್ಣ ಬಾಳೇರಿ, ನಾಗೇಶ ಪುರಸಯ್ಯ ಮೇಸ್ತ, ಜೆಡಿಎಸ್ನ ನೀಲಕಂಠ ಎಂ. ನಾಯ್ಕ, ಶೀಲಾ ರಾಮದಾಸ ಹೊನ್ನಾವರ, ದಾಮೋದರ ಮೇಸ್ತ, ಚಂದ್ರಹಾಸ ಜಿ. ನಾಯ್ಕ, ಪಕ್ಷೇತರ ಅಭ್ಯರ್ಥಿ ತಾರಾ ಕೆ. ನಾಯ್ಕ ಸಹಿ ಹಾಕಿ ಮನವಿ ಸಲ್ಲಿಸಿದ್ದಾರೆ.
ಪ.ಪಂ. ಅಧ್ಯಕ್ಷೆ ಜೈನಾಬಿ ಸಾಬ್ ಇವರ ಕಾರ್ಯ ವೈಖರಿ ಮೇಲೆ ವಿಶ್ವಾಸ ಇಲ್ಲದೇ ಇರುವುದರಿಂದ ಅವಿಶ್ವಾಸ ತರಲು ನಿರ್ಣಯಿಸಿದ್ದು ಕೂಡಲೇ ಈ ಬಗ್ಗೆ ಸಭೆಯನ್ನು ಕರೆಯಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.
ಪ.ಪಂ.ದಲ್ಲಿ ಕಾಂಗ್ರೆಸ್ 10, ಜೆಡಿಎಸ್ 4 ಬಿಜೆಪಿ 3, ಪಕ್ಷೇತರ 1 ಸೇರಿದಂತೆ ಒಟ್ಟೂ 18 ಜನ ಚುನಾಯಿತ ಸದಸ್ಯರರಿದ್ದಾರೆ.
ಪ್ರಸಕ್ತ ಪಟ್ಟಣ ಪಂಚಾಯಿತಿಯ 2ನೇ ಅವಗೆ 9 ಸಪ್ಪಂಬರ 2016 ರಂದು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆದಿತ್ತು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಅಧ್ಯಕ್ಷ ಸ್ಥಾನಕ್ಕೆ ರಾಜಶ್ರೀ ಬಾಲಚಂದ್ರ ನಾಯ್ಕ, ಉಪಾಧ್ಯಕ್ಷ ಸ್ಥಾನಕ್ಕೆ ಜಮಿಲಾಬಿ ಮುನಾಪ್ ಶೇಖ್ ಸ್ರ್ಪಸಿದ್ದರು.
ಆದರೆ ಕಾಂಗ್ರೆಸ್ ಪಕ್ಷದ ಜೈನಾಬಿ ಇಸ್ಮಾಯಿಲ್ ಸಾಬ್ ಹಾಗೂ ಶರಾವತಿ ಸುರೇಶ ಮೇಸ್ತ ಇವರು ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧೆಗಿಳಿದು ಕಾಂಗ್ರೆಸ್ನ ಇಬ್ಬರು, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಸದಸ್ಯರ ಬೆಂಬಲ ಪಡೆದು ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆಯಾಗಿ ಆಯ್ಕೆಗೊಂಡಿದ್ದರು.
ನಂತರ ವಿಪ್ ಉಲ್ಲಂಘಸಿ ಪಕ್ಷ ಆಯ್ಕೆ ಮಾಡಿದ ಅಭ್ಯರ್ಥಿಗಳ ಸೋಲಿಗೆ ಕಾರಣರಾಗಿದ್ದಾರೆ ಎಂದು ಅಧ್ಯಕ್ಷೆ ಜೈನಾಬಿ ಸಾಬ್, ಉಪಾಧ್ಯಕ್ಷೆ ಶರಾವತಿ ಮೇಸ್ತ ಹಾಗೂ ಇವರನ್ನು ಬೆಂಬಲಿಸಿದ ಸ್ವ ಪಕ್ಷದ ಸದಸ್ಯರಾದ ಸುರೇಶ ಮೇಸ್ತ, ಉದಯ ಮುರ್ತು ನಾಯ್ಕ ಇವರ ವಿರುದ್ದ ಪಕ್ಷ ವಿರೋ ಚಟುವಟಿಕೆ ಮಾಡಿದ್ದಾರೆ ಎಂದು ಆರೋಪಿಸಿ ಜಿಲ್ಲಾಕಾರಿಯವರಿಗೆ ರಾಜಶ್ರೀ ನಾಯ್ಕ ಹಾಗೂ ಬ್ಲಾಕ್ ಕಾಂಗ್ರೆಸ್ ಆಗಿನ ಅಧ್ಯಕ್ಷರಾಗಿದ್ದ ಕಡತೋಕಾ ಶಿವಾನಂದ ಹೆಗಡೆ ದೂರು ಸಲ್ಲಿಸಿದ್ದರು.
ಜಿಲ್ಲಾಕಾರಿಯವರು ನಡೆಸಿದ ವಿಚಾರಣೆಯಲ್ಲಿ ಜೈನಾಬಿ ಸಾಬ್, ಶರಾವತಿ ಮೇಸ್ತ ಹಾಗೂ ಉದಯ ಮರ್ತು ನಾಯ್ಕ ಆರೋಪ ಮುಕ್ತರಾಗಿ ಹಾಗೂ ಸುರೇಶ ಮೇಸ್ತ ಅವರ ಸದಸ್ಯತ್ವವನ್ನು ರದ್ದು ಗೊಳಿಸಿ ತೀರ್ಪು ಬಂದಿತ್ತು. ಇದರಿಂದಾಗಿ ಅಧ್ಯಕ್ಷ ಸ್ಥಾನದಲ್ಲಿ ಜೈನಾಬಿ ಸಾಬ್ ಹಾಗೂ ಉಪಾಧ್ಯಕ್ಷ ಸ್ಥಾನದಲ್ಲಿ ಶರಾವತಿ ಮೇಸ್ತ ಮುಂದುವರಿದ್ದರು.
ಆದರೆ ಆಗ ಜೈನಾಬಿ ಸಾಬ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಬೆಂಬಲಿಸಿದ ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರೇ ಈಗ ಅವರ ವಿರುದ್ದ ಅವಿಶ್ವಾಸ ಮಂಡಿಸಲು ಮುಂದಾಗಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಸೃಷ್ಟಿಸಿದೆ.
——————-
ಅಧ್ಯಕ್ಷರು ಅಭಿವೃದ್ದಿ ಕಾರ್ಯ ಮಾಡುವಾಗ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಪಕ್ಷಾತೀತವಾಗಿ ಆಗ ನಾವು ಬೆಂಬಲಿಸಿದ್ದೇವು. ಆದರೆ ಅವರ ಕಾರ್ಯ ವೈಖರಿ ಬಗ್ಗೆ ನಮಗೆ ಅಸಮಾಧಾನವಿದೆ. ಅವಿಶ್ವಾಸ ಗೊತ್ತುವಳಿಗೆ ಮನವಿ ಪತ್ರ ನೀಡಿದ್ದೇವೆ.
ನೀಲಂಕಂಠ ನಾಯ್ಕ
ಪ.ಪಂ. ಸದಸ್ಯರು ಜೆಡಿಎಸ್
———————–
ಅಧ್ಯಕ್ಷೆ ಜೈನಾಬಿಯವರ ಕಾರ್ಯ ವೈಖರಿ ಬಗ್ಗೆ ನಮಗೆ ಅಸಮಾಧಾನ ಇದೆ. ಹಾಗಾಗಿ ಅವಿಶ್ವಾಸ ತರಲು ಕೋರಿ ಮನವಿ ನೀಡಿದ್ದೇವೆ.
ಬಾಲಕೃಷ್ಣ ಬಾಳೇರಿ
ಪ. ಪಂ. ಸದಸ್ಯರು. ಬಿಜೆಪಿ
————————-
ನಾನು ಎಲ್ಲ ಸದಸ್ಯರ ಅಭಿಪ್ರಾಯ ಕೇಳಿಕೊಂಡೇ ಕಾರ್ಯ ನಿರ್ವಹಿಸಿದ್ದೇನೆ. ಯಾವ ತಪ್ಪು ಫೈಲನ್ನು ಕಾರ್ಯಗತ ಮಾಡಿಲ್ಲ. ಆದರೆ ಅಚಾನಕ್ ಆಗಿ ಅವಿಶ್ವಾಸಕ್ಕೆ ಮನವಿ ನೀಡಿರುವುದು ಆಶ್ಚರ್ಯ ತಂದಿದೆ.
ಜೈನಾಬಿ ಸಾಬ್
ಪ.ಪಂ. ಅಧ್ಯಕ್ಷರು.
————————–
Leave a Comment