ಹೊನ್ನಾವರ. ಹಿಂದೂಗಳ ಶ್ರದ್ಧಾಸ್ಥಾನಗಳ ಘೋರ ಅವಮಾನ ಮಾಡುವ ಹಾಗೂ ಸಮಾಜದ ಶಾಂತಿಯನ್ನು ಕದಡುವ ಪ್ರೊ. ಭಗವಾನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಹಶೀಲ್ದಾರರ ಮೂಲಕ ಕೇಂದ್ರೀಯ ಗೃಹಮಂತ್ರಿಗಳಿಗೆ ಮನವಿ¸ಸಲ್ಲಿಸಿದರು.
ರೋಹಿಂಗ್ಯಾ ಮುಸಲ್ಮಾನರು ಮ್ಯಾನ್ಮಾರಿನಲ್ಲಿ ಹಿಂದೂ ಹಾಗೂ ಬೌದ್ಧರ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆ ಹಾಗೂ ಅವರಿಗೆ ಭಯೋತ್ಪಾದನೆ ಸಂಘಟನೆಯಾದ `ಅಲ್ ಕಾಯದಾ’ದೊಂದಿಗೆ ಸಂಬಂಧವಿದೆ. ಆದ್ದರಿಂದ , ಭಾರತಕ್ಕೆ ನುಗ್ಗಿ ಬಂದಿರುವ ರೋಹಿಂಗ್ಯಾ ಮುಸಲ್ಮಾನರನ್ನು ತಕ್ಷಣ ದೇಶದಿಂದ ಹೊರಗೆ ಹಾಕಬೇಕು ಹಾಗೂ ಅವರು ಮತ್ತೆ ಭಾರತದೊಳಗೆ ಪ್ರವೇಶಿಸುವುದನ್ನು ತಡೆಯಬೇಕು, ಮತ್ತು ಹಿಂದೂಗಳ ಶ್ರದ್ಧಾಸ್ಥಾನಗಳ ಮೇಲೆ ಘೋರ ಅವಮಾನ ಮಾಡುವ ಹಾಗೂ ಸಮಾಜದ ಶಾಂತಿಯನ್ನು ಕದಡುವ ಪ್ರೊ. ಭಗವಾನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೇವಿದಾಸ ಮಡಿವಾಳ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಮ್ಯಾನ್ಮಾರ್ನಲ್ಲಿ ಸ್ಥಾಪಿತಗೊಂಡಿರುವ ರೋಹಿಂಗ್ಯಾ ಮುಸಲ್ಮಾನರು ಜಮ್ಮುವಿನಿಂದ ದೆಹಲಿ, ಬಂಗಾಲ, ಬಿಹಾರ, ತೆಲಂಗಾಣಾ ಹೀಗೆ ಹಲವಾರು ರಾಜ್ಯಗಳಲ್ಲಿ ಕಾನೂನು ಬಾಹಿರವಾಗಿ ವಾಸಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬಾಂಗ್ಲಾದೇಶದಲ್ಲಿನ ರೋಹಿಂಗ್ಯಾ ಮುಸಲ್ಮಾನರು ಹಿಂದೂಗಳ ಮೇಲೆ ಅತ್ಯಾಚಾರ ನಡೆಸಿ, ಅವರ ಮತಪರಿವರ್ತನೆ ಮಾಡಲು ಪ್ರಯತ್ನಿಸಿದ್ದರು ಹಾಗೂ ನಮಾಜ್ ಪಠಿಸುವುದನ್ನು ಕಡ್ಡಾಯ ಮಾಡಿದ್ದರು. ಆದ್ದರಿಂದ ಸಂಪೂರ್ಣ ದೇಶದಲ್ಲಿ ಸಾಮಾನ್ಯ ನಾಗರಿಕರಿಗೆ ರೋಹಿಂಗ್ಯಾ ಮುಸಲ್ಮಾನರ ಮೇಲೆ ರೋಷವಿದೆ. ಆದ್ದರಿಂದ ಅವರಿಗೆ ದೇಶದಲ್ಲಿ ಎಲ್ಲಿಯೂ ವಾಸಿಸಲು ಬಿಡಬಾರದು, ಎಂಬುದು ಸಾಮಾನ್ಯ ನಾಗರಿಕರ ಅಭಿಪ್ರಾಯವಾಗಿದೆ. ಮತ್ತೊಂದು ಸಮಾಚಾರಕ್ಕೆ ಅನುಸಾರವಾಗಿ ರೋಹಿಂಗ್ಯಾ ಮುಸಲ್ಮಾನರು ಮ್ಯಾನ್ಮಾರಿನಲ್ಲಿ ಹಿಂದೂ ಹಾಗೂ ಬೌದ್ಧರ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆ ಹಾಗೂ ಅವರಿಗೆ ಭಯೋತ್ಪಾದನೆ ಸಂಘಟನೆಯಾದ `ಅಲ್ ಕಾಯದಾ’ದೊಂದಿಗೆ ಸಂಬಂಧವಿದೆ. ಆದ್ದರಿಂದ , ಭಾರತಕ್ಕೆ ನುಗ್ಗಿ ಬಂದಿರುವ ರೋಹಿಂಗ್ಯಾ ಮುಸಲ್ಮಾನರನ್ನು ತಕ್ಷಣ ದೇಶದಿಂದ ಹೊರಗೆ ಹಾಕಬೇಕು ಹಾಗೂ ಅವರು ಮತ್ತೆ ಭಾರತದೊಳಗೆ ಪ್ರವೇಶಿಸುವುದನ್ನು ತಡೆಯಬೇಕು, ಎಂದು ಹಿಂದೂತ್ವವಾದಿ ಸಂಘಟನೆಗಳ ವತಿಯಿಂದ `ರಾಷ್ಟ್ರೀಯ ಹಿಂದೂ ಆಂದೋಲನೆ’ದಲ್ಲಿ ದೇವಿದಾಸ ಮಡಿವಾಳ ಮಾತನಾಡಿದರು.
ಈ ಸಮಯದಲ್ಲಿ `ರೋಹಿಂಗ್ಯಾ ಮುಸಲ್ಮಾನರನ್ನು ಓಡಿಸಿ, ದೇಶವನ್ನು ಕಾಪಾಡಿರಿ’, ಪೀಡಿತ ರೋಹಿಂಗ್ಯಾ ಹಿಂದೂಗಳಿಗೆ ನ್ಯಾಯ ಒದಗಿಸಿಕೊಡಿ’ ಇತ್ಯಾದಿ ಘೋಷಣೆಗಳನ್ನು ಮಾಡಲಾಯಿತು .
ರೋಹಿಂಗ್ಯಾ ಹಿಂದೂಗಳ ಸುರಕ್ಷೆಗೋಸ್ಕರ ಭಾರತ ಸರಕಾರವು ಕೆಲಸ ಮಾಡಲಿ !
ಮ್ಯಾನ್ಮಾರಿನಲ್ಲಿ ರೋಹಿಂಗ್ಯಾ ಭಯೋತ್ಪಾದಕರು 88 ಹಿಂದೂಗಳನ್ನು ಕೊಲೆ ಮಾಡಿದ್ದು `ಆರಾಕಾನ್ ರೋಹಿಂಗ್ಯಾ ಸಾಲ್ವೇಶನ್ ಆರ್ಮೀ’ಯು ರಖಾಯಿನ್ ಪ್ರಾಂತ್ಯದಲ್ಲಿ 28 ಹಿಂದೂಗಳ ಸಾಮೂಹಿಕ ಕೊಲೆ ನಡೆಸಿತು. ಆಗಸ್ಟ್ ತಿಂಗಳಿನಲ್ಲಿ ರಖಾಯಿನ್ ಪ್ರಾಂತ್ಯದಲ್ಲಿ ನಡೆದ ಹಿಂಸಾಚಾರದಿಂದ ಅಲ್ಲಿಂದ ಸಾವಿರಾರು ಹಿಂದೂಗಳು ಓಡಿ ಹೋಗಿ, ಬಾಂಗ್ಲಾದೇಶದಲ್ಲಿನ ಶರಣಾರ್ಥಿಗಳ ಶಿಬಿರದಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿ ರೋಹಿಂಗ್ಯಾ ಮುಸಲ್ಮಾನರು ಬಲವಂತವಾಗಿ ಹಿಂದೂ ಮಹಿಳೆಯರ ಮತಾಂತರವನ್ನು ಮಾಡುತ್ತಿದ್ದಾರೆ ಹಾಗೂ ನಮಾಜ್ ಪಠಿಸಲು ಒತ್ತಾಯ ಪಡಿಸುತ್ತಿದ್ದಾರೆ. ರೋಹಿಂಗ್ಯಾ ಮುಸಲ್ಮಾನರ ಮೇಲೆ ಮ್ಯಾನ್ಮಾರದಲ್ಲಿ ನಡೆಯುತ್ತಿರುವ ತಥಾಕಥಿತ ಹಿಂಸೆಯನ್ನು ವಿಶ್ವದ ಎದುರು ತರಲು ಅನೇಕ ಮುಸಲ್ಮಾನ ದೇಶಗಳು ಮುಂದೆ ಬರುತ್ತಿವೆ, ಆದ್ದರಿಂದ ಭಾರತ ಹಾಗೂ ಇತರ ದೇಶಗಳಲ್ಲಿರುವ ಮುಸಲ್ಮಾನರು ಅವರಿಗೆ ಬೆಂಬಲ ನೀಡುತ್ತಿದ್ದಾರೆ. ವಿಶ್ವದ ಹಿಂದೂಗಳಿಗೆ ಏಕಮೇವ ಭಾರತವಷ್ಟೇ ಆಶಾಕಿರಣವಾಗಿದೆ. ಆದ್ದರಿಂದ ಭಾರತ ಸರಕಾರವು ರೋಹಿಂಗ್ಯಾ ಹಿಂದೂಗಳ ಸುರಕ್ಷೆಯಂತಹ ಗಂಭೀರ ವಿಷಯವನ್ನು ವಿಶ್ವದ ಮುಂದೆ ತರಲು `ಸಂಯುಕ್ತ ರಾಷ್ಟ್ರ ಸಂಘದಲ್ಲಿ ತನ್ನ ಪ್ರಸ್ತಾಪವನ್ನು ಮುಂದಿಡಲಿ, ಎಂಬ ಬೇಡಿಕೆಯನ್ನು ಇದೇ ಸಮಯದಲ್ಲಿ ಮಾಡಲಾಯಿತು.
ಹಿಂದೂಗಳ ಶ್ರದ್ಧಾಸ್ಥಾನಗಳ ಘೋರ ಅವಮಾನ ಮಾಡುವ ಹಾಗೂ ಸಮಾಜದ ಶಾಂತಿಯನ್ನು ಕದಡುವ ಪ್ರೊ. ಭಗವಾನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿರಿ !
“ಶ್ರೀರಾಮ ದೇವರಲ್ಲ, ಕವಿ ವಾಲ್ಮೀಕಿಯೂ ಸಹ ಅವರನ್ನು ದೇವರೆಂದು ಹೇಳಿಲ್ಲ, ಶ್ರೀರಾಮ ಜಾತಿವಾದಿ” ಎಂಬಿತ್ಯಾದಿ ಹೇಳಿಕೆಯನ್ನು ಕೊಟ್ಟು ಪ್ರೊ.ಕೆ.ಎಸ್.ಭಗವಾನರು ಕೋಟಿ ಕೋಟಿ ಹಿಂದೂಗಳ ಭಾವನೆಯನ್ನು ನೋಯಿಸಿದ್ದಾರೆ. ಹೀಗೆ ಅವರಿಂದ ಪದೇ ಪದೇ ಇಂತಹ ಹೇಳಿಕೆಗಳು ಬರುತ್ತಲೇ ಇರುತ್ತವೆ. ಅಷ್ಟೇ ಅಲ್ಲದೇ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂಗಳ ದೇವತೆಗಳ ಅನಾದರವನ್ನು ಮಾಡಿ ಸಾಮಾಜಿಕ ಶಾಂತಿಯನ್ನು ಭಂಗಗೊಳಿಸುವ ಪ್ರಯತ್ನವನ್ನೂ ಮಾಡಿದ್ದಾರೆ. ಆದುದರಿಂದ ಪ್ರೊ.ಭಗವಾನರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಸಹ ಮನವಿಯನ್ನು ಆಗ್ರಹಿಸಿದ್ದಾರೆ.
ಆ ಸಮಯದಲ್ಲಿ ಮಾಡಲಾದ ಅನ್ಯ ಬೇಡಿಕೆಗಳು ……………:
“ಭಾರತದಲ್ಲಿ ಯಾವೆಲ್ಲಾ ಸಂಘಟನೆಗಳು, ವ್ಯಕ್ತಿ ಅಥವಾ ಧಾರ್ಮಿಕ ಮುಖಂಡರು ರೋಹಿಂಗ್ಯಾ ಮುಸಲ್ಮಾನರ ಪರ ವಹಿಸುವರೋ, ಅವರಿಗೆ ಆಂದೋಲನೆ ಅಥವಾ ಸಭೆ ನಡೆಸಲು ಅನುಮತಿ ನೀಡಬಾರದು. ಮುಂಬೈನಲ್ಲಿನ ಆಝಾದ ಮೈದಾನದಲ್ಲಿ ನಡೆದ ಗಲಭೆಯು ಪುನಾರಾವರ್ತನೆಗೊಳ್ಳದಂತೆ ಎಚ್ಚರಿಕೆ ವಹಿಸಬೇಕು.
ಜಮ್ಮುವಿನಲ್ಲಿ ರೋಹಿಂಗ್ಯಾ ಮುಸಲ್ಮಾನರಿಗೋಸ್ಕರ ತಯಾರು ಮಾಡುತ್ತಿರುವ ವಸತಿಗಳ ಮೇಲೆ ಕಾರ್ಯಾಚರಣೆ ನಡೆಸಬೇಕು !”
ಈ ಸಂಧರ್ಭದಲ್ಲಿ ಹಿಂದುತ್ವವಾದಿ ಸಂಘಟನೆಗಳ ಸೌ. ವಾಸಂತಿ ಮುರ್ಡೇಶ್ವರ, ಸೌ. ರತ್ನಾ ಭಟ್, ಶ್ರೀ. ಸಂಜು ಶೇಟ, ವಿಜು ಕಾಮತ್,, ಜಿ.ಟಿ.ಭಟ್, ಮುರಳೀಧರ ಗಾಯತೊಂಡೆ, ಚಂದ್ರಶೇಖರ ಮೇಸ್ತ, ಸೌ. ಜಯಲಕ್ಷ್ಮೀ ಕಲ್ಗಲ್, ಸೌ. ಮೋಹಿನಿ ಶೇಟ, ವಿವೇಕ ಶೇಟ ಇತರರು ಉಪಸ್ಥಿತರಿದ್ದರು.
Leave a Comment