ಹೊನ್ನಾವರ . ಅರಣ್ಯ ಭೂಮಿ ಸಾಗುವಳಿದಾರರ ತಾಲೂಕಾ ಹೋರಾಟ ಸಮಿತಿಯವರು ಹೊನ್ನಾವರ ತಹಶೀಲ್ದಾರ ಕಛೇರಿಯ ಮುಂದೆ 36 ತಾಸುಗಳ ಅಹೋರಾತ್ರಿ ಧರಣಿ ನಡೆಸಿ ತಾಲೂಕು ಆಡಳಿತದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅರಣ್ಯ ಭೂಮಿ ಸಾಗುವಳಿದಾರರ ಪರವಾಗಿ ಚಂದ್ರಕಾಂತ ಕೊಚರೇಕರ್ ನೇತ್ರತ್ವದಲ್ಲಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ತಹಶೀಲ್ದಾರರಾದÀ ವಿ. ಆರ್. ಗೌಡ ಮನವಿ ಸ್ವೀಕರಿಸಿ ಅರಣ್ಯ ಭೂಮಿ ಸಾಗುವಳಿದಾರರ ಬೇಡಿಕೆಗಳನ್ನು ಸರ್ಕಾರದ ಗಮನ ಸೆಳೆಯುವುದಾಗಿ ಧರಣಿ ನಿರತರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ತಾ.ಪಂ. ಸದಸ್ಯ ಲೋಕೇಶ ನಾಯ್ಕ, ಕರ್ನಾಟಕ ಪ್ರಾಂತ ರೈತ ಸಂಘದ ತಿಮ್ಮಪ್ಪ ಗೌಡ, ಹೆರಂಗಡಿ ಗ್ರಾ.ಪಂ. ಉಪಾಧ್ಯಕ್ಷ ಲೋಕೇಶ ನಾಯ್ಕ, ಉಪ್ಪೋಣಿ ಗ್ರಾ.ಪಂ. ಸದಸ್ಯ ಗಣೇಶ ಜಿ. ನಾಯ್ಕ ಮತ್ತು ನಾರಾಯಣ ಮರಾಠಿ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Leave a Comment