ಕಾರವಾರ:
ಮೌಲ್ಯಾಧಾರಿತ ರಾಜಕಾರಣಕ್ಕೆ ದಿ. ಬಂಗಾರಪ್ಪನವರು ಮಾದರಿಯಾಗಿದ್ದರು ಎಂದು ಜೆಡಿಎಸ್ ಮುಖಂಡ ಪುರುಷೋತ್ತಮ ಸಾವಂತ ಅಭಿಪ್ರಾಯ ಪಟ್ಟರು.
ಜೆಡಿಎಸ್ ಕಚೇರಿಯಲ್ಲಿ ಭಾನುವಾರ ಬಂಗಾರಪ್ಪನವರ ಜನ್ಮದಿನಾಚರಣೆ ಕಾರ್ಯಕ್ರಮ ನಡೆಸಿ ಅವರು ಮಾತನಾಡಿದರು.
ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು. ನಾಡಿಗೆ ಅವರ ಸೇವೆ ದೊಡ್ಡದು ಎಂದು ಸ್ಮರಿಸಿದರು. ಪ್ರಮುಖರಾದ ಖಲಿಲುಲ್ಲಾ ಶೇಖ್ ಮಾತನಾಡಿ, ಮರಣಾ ನಂತರವೂ ಜನ ವ್ಯಕ್ತಿಯನ್ನು ನೆನಪಿಡಬೇಕು ಎಂದಾದರೆ ಸಾಧನೆ ಮಾಡಿರಬೇಕು. ಬಂಗಾರಪ್ಪನವರು ಅಂತಹ ಸಾಧನೆ ಮಾಡಿ ಜನ ಮಾನಸದಲ್ಲಿದ್ದಾರೆ ಎಂದರು. ಅಜಿತ ಪೊಕಳೆ ಇತರರಿದ್ದರು.
Leave a Comment