ದಾಂಡೇಲಿ : ಬೆಳಗಾಂವ ಜಿಲ್ಲೆಯ ಖಾನಾಪುರ ವ್ಯಾಪ್ತಿಯ ಖಾನಾಪುರದಲ್ಲಿ ಅಕ್ರಮವಾಗಿ ವನ್ಯ ಪ್ರಾಣಿಗಳ ಬೇಟೆಯಾಡಿ ಅದರ ಚರ್ಮ ಹಾಗೂ ಕೋಡುಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯನ್ನು ಖಚಿತ ಮಾಹಿತಿ ಮೇರೆಗೆ ದಾಂಡೇಲಿ ಪೊಲೀಸ ಅರಣ್ಯ ಸಂಚಾರಿದಳದವರು ಬಂದಿಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಗೆ ಎ.ಸಿ.ಎಫ್. ಖಾನಾಪುರವರಿಗೆ ಒಪ್ಪಿಸಿದ್ದಾರೆ.
ಖಾನಾಪುರದ ಶ್ರೀಧರ ಬಸವರಾಜ ಅಂಕಲಗಿ(28) ಬಂದಿತ ಆರೋಪಿಯಿಂದ ಜಿಂಕೆ ಚರ್ಮ, ಕಾಡುಕುರಿ ಚರ್ಮ ಹಾಗೂ ಕೋಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು ಸಿಐಡಿ ಅರಣ್ಯ ಘಟಕ ಅಧಿಕಾರಿಗಳ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ ದಾಂಡೇಲಿ ಪೊಲೀಸ ಅರಣ್ಯ ಸಂಚಾರಿದಳದ ಪಿ.ಎಸ್.ಐ ವಿಠಲ ಪಾಟನಕರ ಸಿಬ್ಬಂದಿಗಳಾದ ರಾಮಾ ನಾಯ್ಕ, ಸುನೀಲ ಹೂಲಿ, ನಾಗರಾಜ ನಾಯ್ಕ, ಗಜಾನನ ನಾಯ್ಡು, ಸತೀಶ ಗುಡೆ ಹಾಗೂ ಸಿಐಡಿ ಅರಣ್ಯ ಘಟಕ ಬೆಂಗಳೂರು ಹಾಗೂ ಅರಣ್ಯ ಸಂಚಾರಿದಳ ಬೆಳಗಾಂವ ಸಿಬ್ಬಂದಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.
Leave a Comment