ಹೊನ್ನಾವರ .ಕನ್ನಡ ಅಭಿಮಾನಿ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವದ ನಿಮಿತ್ತ “ಕನ್ನಡ ಹಬ್ಬ 2017” ಇದರ ಪ್ರಥಮ ದಿನದ ಕಾರ್ಯಕ್ರಮವು ಶ್ರೀ ಶ್ರೀ ಸಚ್ಚಿದಾನಂದ ಜ್ನಾನೇಶ್ವರಿ ಭಾರತಿ ಮಹಾಸ್ವಾಮಿಜಿಯವರ ದಿವ್ಯ ಉಪಸ್ಥಿತಿಯಲ್ಲಿ ಲೋಕ ಕಲ್ಯಾಣಾರ್ಥವಾಗಿ 1018 ಕಳಸ ಶ್ರೀ ಸತ್ಯನಾರಾಯಣ ಕಥೆಯನ್ನು ಹೊನ್ನಾವರದ ಪೋಲಿಸ್ ಪರೆಡ ಮೈದಾನದಲ್ಲಿ ನೆರವೆರಿಸಲಾಯಿತು,
ಕನ್ನಡ ಅಭಿಮಾನಿ ಸಂಘದ ಕಾರ್ಯಾಧ್ಯಕ್ಷರಾದ ಸತ್ಯಾ ಜಾವಗಲರವರು ಮಾತನಾಡಿ ಶ್ರೀಗಳವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಶ್ರೀಗಳವರನ್ನು ಸಂಘದ ಸದಸ್ಯರು ಫಲತಾಂಬುಲವಿತ್ತು ಸ್ವಾಗತಿಸಿದರು.
ಶ್ರೀ ಶ್ರೀ ಸಚ್ಚಿದಾನಂದ ಜ್ನಾನೆಶ್ವರಿ ಭಾರತಿ ಮಹಾಸ್ವಾಮಿಗಳು ಮಾತನಾಡಿ ಕನ್ನಡ ಅಭಿಮಾನಿ ಸಂಘದ ವತಿಯಿಂದ ಕಳೆದ 22ವರ್ಷಗಳಿಂದ ಕನ್ನಡ ಹಬ್ಬವನ್ನು ಆಚರಣೆ ಮಾಡುತ್ತಾ ಬಂದಿದೆ, ಇದಿಗ 23ನೇ ವರ್ಷದಂದು ವಿಶಿಷ್ಟವಾಗಿ ಲೋಕಕಲ್ಯಾಣಾರ್ಥವಾಗಿ 1108 ಸತ್ಯನಾರಾಯಣ ಕಥೆಯನ್ನು ಆಚರಣೆ ಮೂಲಕ ಸಮಾಜಕ್ಕಾಗಿ ಉತ್ತಮ ಕಾರ್ಯವನ್ನು ಮಾಡಲು ಮುಂದಾಗಿದೆ. ನಾವು ಜಿವನದಲ್ಲಿ ಪರರಿಗೆ ಕೆಡುಕನ್ನು
ನಮಗು ಕೆಡುಕುಂಟಾಗುತ್ತದೆ, ಹಾಗಾಗಿ ನಾವು ಜಿವನದಲ್ಲಿ ಯಾರಿಗು ಕೆಟ್ಟದನ್ನು ಮಾಡದೆ ಜಿವನದಲ್ಲಿ ಆನಂದವನ್ನು ಅನುಭವಿಸಬಹುದು ಎಂದು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು,
ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಉದಯರಾಜ ಮೆಸ್ತ, ಗೌರವಾಧ್ಯಕ್ಷ ಜಿ. ಜಿ. ಶಂಕರ,
ಗೌರವ ಕಾರ್ಯದ್ಯಕ್ಷ ಸತ್ಯ ಜಾವಗಲ್, ಕಾರ್ಯಾಧ್ಯಕ್ಷ ಸುಧಾಕರ ಹೊನ್ನಾವರ,
ಉಪಾಧ್ಯಕ್ಷ ಗಣಪತಿ. ಜಿ. ಮೆಸ್ತ, ಉಪಾಧ್ಯಕ್ಷ ಮಾರುತಿ ಸಂಕೊಳ್ಳಿ, ಪ್ರಧಾನ ಕಾರ್ಯದರ್ಶಿ ವಿನಾಯಕ ಆಚಾರಿ, ಕಾರ್ಯದರ್ಶಿ ಭಾಸ್ಕರ ತಾಂಡೆಲ,
ಸಹ ಕಾರ್ಯದರ್ಶಿ ಕೆ. ಆರ್. ಅಜಿತ, ಖಜಾಂಚಿ ಶೇಖರ ವಗ್ಗರ,
ಸಹ ಸಂಚಾಲಕ ಆನಂದ ಅಂಬಿಗ, ವಕ್ತಾರರಾದ ರಾಘವ ಮೆಸ್ತ ಸಹ ವಕ್ತಾರರಾದ ಆರ್. ಕೆ. ಗೌಡ ಹಾಗೂ ಕಾನೂನು ಸಲಹೆಗಾರ ವಿ. ಎಮ್. ಭಂಡಾರಿ ಹಾಗು ಸಾರ್ವಜನಿಕರು ಉಪಸ್ಥಿತರಿದ್ದರು,
Leave a Comment