ಕಾರವಾರ: ಆಕಾಶವಾಣಿ ಕೇಂದ್ರದ ಕೊಡುಗೆಯಾದ ‘ಕಾಡ ಕತ್ತಲೆಯಲ್ಲಿ ಸುಳಿದ ಬೆಳಕು’ ರೂಪಕಕ್ಕೆ ಆಕಾಶವಾಣಿಯ ಸ್ಥಳೀಯ ವಾರ್ಷಿಕ ಸ್ಪರ್ದೆ 2017ರ ಎಲ್ಆರ್ಎಸ್ (ಸ್ಥಳೀಯ ರೇಡಿಯೋ ನಿಲಯಗಳ) ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಬಹುಮಾನ ಲಭಿಸಿದೆ.
ಉತ್ತರ ಕನ್ನಡದ ಸಿದ್ದಿ ಜನಾಂಗದ ಕಥೆ-ವ್ಯಥೆ ಹಾಗೂ ಜೀವನದ ಕುರಿತಾದ ಈ ರೂಪಕವನ್ನು ಕಾರವಾರ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕರಾದ ಫೆÇ್ಲೀರಿನ್ ರೋಶ್ ನಿರ್ಮಿಸಿದ್ದರು. ಈ ರೂಪಕವು ರಾಜ್ಯಾಂದ್ಯಂತ ಎಲ್ಲ ಬಾನುಲಿಕೇಂದ್ರಗಳಿಂದ ಪ್ರಸಾರವಾಗಲಿದ್ದು, ಸಿದ್ದಿ ಜನಾಂಗದ ಬದುಕಿನ ಒಟ್ಟೂ ಚಿತ್ರಣದ ನೀಡಲಿದೆ. ಸಿದ್ದಿಗಳ ಜೀವನದ ಬಗ್ಗೆ ರಾಜ್ಯದ ಜನರಿಗೆ ಪೂರ್ತಿ ಚಿತ್ರಣ ಈ ರೂಪಕದಿಂದ ದೊರೆಯಲಿದೆ. ಇತ್ತೀಚಿನ ವರ್ಷಗಳಲ್ಲಿ ಕಾರವಾರ ಆಕಾಶವಾಣಿ ಕೇಂದ್ರಕ್ಕೆ ದೊರೆತಿರುವ ಮೂರನೇ ಪ್ರಥಮ ಬಹುಮಾನ ಇದಾಗಿದ್ದು, ಆಕಾಶವಾಣಿ ಕೇಂದ್ರಕ್ಕೆ ಹಲವು ಕೇಳುಗರು ಹಾಗೂ ಸಾಹಿತ್ಯಾಸಕ್ತರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
Leave a Comment