ಹೊನ್ನಾವರ: ತಾಲೂಕಿನ ಮಾವಿನಕುರ್ವೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವೈಕುಂಠ ಚತುದರ್ಶಿ ವನಭೋಜನದ ಉತ್ಸವ ನವೆಂಬರ್ 03 ಶುಕ್ರವಾರ ನಡೆಯಲಿದೆ. ಬೆಳಿಗ್ಗೆ 10 ಘಂಟೆಗೆ ಶ್ರೀ ದೇವರ ಪ್ರಾರ್ಥನೆಯೊಂದಿಗೆ ಆರಂಭವಾಗಿ ವನದಲ್ಲಿ ಧಾತ್ರಿ ಹವನ, ಮಹಾ ನೈವೇದ್ಯ ಹಾಗೂ ಅನ್ನಸಂತರ್ಪಣೆ ತದನಂತರ ಶ್ರೀ ನವದುರ್ಗಾ ಸಂಸ್ಥಾನದಲ್ಲಿ ಭವ್ಯ ಸ್ವಾಗತದೊಂದಿಗೆ ಶ್ರೀ ದೇವರ ಆಗಮನ ಅಷ್ಟಾವಧಾನ ಸೇವೆ ಕಾರ್ತಿಕ ದೀಪೋತ್ಸವ ಬಳಿಕ ಶರಾವತಿ ನದಿಯಲ್ಲಿ ಭವ್ಯ ದೀಪಾಲಂಕೃತ ತೆಪ್ಪದಲ್ಲಿ ಶ್ರೀ ದೇವರ “ಜಲಕ್ರೀಡೋತ್ಸವ” ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment