ಹೊನ್ನಾವರ.ತಾಲೂಕಿನ ಕಾಸರಕೋಡನ ಜನತಾ ವಿದ್ಯಾಲಯ ಶಾಲೆಯಲ್ಲಿ 10 ನೇ ವರ್ಗದಲ್ಲಿ ವ್ಯಾಸಂಗ ಮಾಡುತ್ತಿರುವ ಶ್ರೀಧರ ಹನುಮಂತ ಗೌಡ, ಹಾಗೂ 9 ನೇ ವರ್ಗದಲ್ಲಿ ವ್ಯಾಸಂಗ ಮಾಡುತ್ತಿರುವ ಯೊಗೇಶ ಮಂಜುನಾಥ ಗೌಡ, ನವೀನ ಮಾಬ್ಲು ಗೌಡ, ಮಣಿಕಂಠ ಕನ್ಯಾ ಗೌಡ, ಸುಮಂತ ಚಂದ್ರಕಾಂತ ನಾಯ್ಕ ಈ 5 ವಿದ್ಯಾರ್ಥಿಗಳು ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಪ್ರಗತಿ ನಗರ ಉಡುಪಿಯಲ್ಲಿ ನಡೆದ ಸ್ಕೌಟ್ಸ್ ಮತ್ತು ಗೈಡ್ಗಳಿಗೆ ರಾಜ್ಯ ಪುರಸ್ಕಾರ ಪದಕ ರಾಜ್ಯಮಟ್ಟದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ರಾಜ್ಯ ಪುರಸ್ಕಾರಕ್ಕೆ ಆಯ್ಕೆಯಾಗಿರುತ್ತಾರೆ. ಈ ವಿದ್ಯಾರ್ಥಿನಿಗೆ ಶಾಲೆಯ ಆಡಳಿತ ಮಂಡಳಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಸ್ಕೌಟ್ಸ್ನ ತಾಲೂಕಾ ಕಾರ್ಯದರ್ಶಿಯಾದ ಜನಾರ್ಧನ ನಾಯ್ಕ, ಮುಖ್ಯಾಧ್ಯಾಪಕರು, ಶಿಕ್ಷಕರು ಹಾಗೂ ಊರ ನಾಗರಿಕರು ಅಭಿನಂದಿಸಿದ್ದಾರೆ
ಯೊಗೇಶ ಮಂಜುನಾಥ ಗೌಡ ಸುಮಂತ ಚಂದ್ರಕಾಂತ ನಾಯ್ಕ
ಶ್ರೀಧರ ಹನುಮಂತ ಗೌಡ ನವೀನ ಮಾಬ್ಲು ಗೌಡ
Leave a Comment