ಹಳಿಯಾಳ: ವೀರಶೈವ-ಲಿಂಗಾಯತ ಸಮಾಜ ಬುದ್ಧಿವಂತ, ಕ್ರಿಯಾಶೀಲ, ಸಮಾಜವಾಗಿದ್ದು ರಾಜ್ಯದ ಅಭಿವೃದ್ಧಿಗಾಗಿ ಹಲವಾರು ನಾಯಕರು ಶ್ರಮಿಸಿದ್ದಾರೆ. ಕಾಂಗ್ರೇಸ ಜಾತ್ಯಾತೀತ ವ್ಯವಸ್ಥೆಯಲ್ಲಿ ವಿಶ್ವಾಸ ಇಟ್ಟ ಪಕ್ಷವಾಗಿದ್ದು ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಒಂದಾಗಿ ಶ್ರಮಿಸಿದರೆ ಸಮಾಜದ, ರಾಜ್ಯದ, ರಾಷ್ಟ್ರದ ಪ್ರಗತಿ ಸಾಧ್ಯ ಎಂದು ಸಚಿವ ಆರ್.ವಿ.ದೇಶಪಾಂಡೆ ಅಭಿಪ್ರಾಯಪಟ್ಟರು.
ಪಟ್ಟಣದ ಖಾಜಿಗಲ್ಲಿಯಲ್ಲಿರುವ ಶ್ರೀ ದುರುದುಂಡೆಶ್ವರ ಮಟ್ಟಕ್ಕೆ ಪ್ರವಾಸೋದ್ಯಮ ಇಲಾಖೆ ಯೋಜನೆ ಅಡಿ 50 ಲಕ್ಷ ರೂ ವೆಚ್ಚದಲ್ಲಿ ಸುಸಜ್ಜಿತವಾದ ಯಾತ್ರಿ ನಿವಾಸ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರೆವೆರಸಿ ಮಾತನಾಡಿದರು.
ಕಾಂಗ್ರೇಸ ಸರ್ಕಾರ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ನೂರಾರು ಕೋಟಿ ವೆಚ್ಚದಲ್ಲಿ ಹಳಿಯಾಳ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಮಾಡುತ್ತಿದ್ದು ಪ್ರವಾಸಿಗರಿಗಾಗಿ ಹಲವಾರು ಪ್ರವಾಸಿಸ್ಥಾನಗಳನ್ನು ಪ್ರವಾಸೊದ್ಯಮ ಇಲಾಖೆ ಅಭಿವೃದ್ಧಿಪಡಿಸಿ ಆರ್ಕರ್ಷಣಿಯವಾದ ಸ್ಥಾನಗಳಿಂದ ಉತ್ತರ ಕನ್ನಡ ಜಿಲ್ಲೆಯು ಪ್ರವಾಸೋಧ್ಯಮದಲ್ಲಿ ಹೊಸ ಮೈಲಿಗಲ್ಲು ರೂಪಿಸುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭೆ ಅಧ್ಯಕ್ಷ ಉಮೇಶ ಬೊಳಶೆಟ್ಟಿ ವಹಿಸಿ ಮಾತನಾಡಿದರು. ಸಮಾರಂಭದಲ್ಲಿ ಜಿ.ಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಸದಸ್ಯ ಕೃಷ್ಣಾ ಪಾಟೀಲ, ಎ.ಪಿ.ಎಮ್.ಸಿ ಅಧ್ಯಕ್ಷ ಶ್ರೀನಿವಾಸ ಘೋಟ್ನೆಕರ, ಪುರಸಭೆ ಸದಸ್ಯ ಶಂಕರ ಬೆಳಗಾಂವಕರ, ಸತ್ಯಜೀತ ಗಿರಿ, ಪರಶುರಾಮ ಹರ್ಲಿ, ಶ್ರೀ ದುರುದುಂಡೇಶ್ವರ ಮಠದ ಅಧ್ಯಕ್ಷ ರಾಮನಗೌಡಾ ಹಟ್ಟಿಹೊಳಿ, ಸಮಾಜದ ಮುಖಂಡರಾದ ಶಂಕ್ರಯ್ಯಾ ಬೆಂಡಿಗೇರಿಮಠ, ಶಿವಪುತ್ರಪ್ಪಾ ನುಚ್ಚಂಬ್ಲಿ, ಎಮ್ ಎನ್ ತಳವಾರ, ಗುರುಪಾದ ರವಾಟೆ, ಸಂತೋಷ ಹುಂಡೆಕರ, ಬಸವರಾಜ ಉಪ್ಪಿನ, ರವಿ ತೋರನಕಟ್ಟಿ, ಬಸವರಾಜ ಬೆಂಡಿಗೇರಿಮಠ, ಜಿ.ಎಸ್.ಮಠಪತಿ ಇತರರು ಇದ್ದರು.
Leave a Comment