ಕಾರವಾರ: ಕೆನರಾ ವೆಲ್ಫೆರ್ ಟ್ರಸ್ಟ್ನ ದಿನಕರ ಕಲಾನಿಕತೇನ ಸಂಗೀತ ವಿದ್ಯಾಲಯದಲ್ಲಿ ಮಾಸದ ಸಂಗೀತ ಸಂಗೀತ ಬೈಠಕ್ ಕಾರ್ಯಕ್ರಮ ಸುಂದರವಾಗಿ ಮೂಡಿಬಂತು.
ಪ್ರತಿಯೊಬ್ಬ ಸಂಗೀತ ವಿದ್ಯಾರ್ಥಿಗಳಿಗೆ ವೇದಿಕೆಯನ್ನು ಒದಗಿಸುವುದು, ಸಂಗೀತದಲ್ಲಿ ಹೆಚ್ಚಿನ ಅಭ್ಯಾಸ ಮಾಡಲು ಪೆÇ್ರೀತ್ಸಾಹಿಸುವುದು ಈ ಕಾರ್ಯಕ್ರಮದ ಮುಖ್ಯ ಉz್ದÉೀಶವಾಗಿದೆ ಎಂದು ಶಿಕ್ಷಕರಾದ ಮಾರುತಿ ನಾಯ್ಕ ಹಾಗೂ ಗಣಪತಿ ಹೆಗಡೆ ತಿಳಿಸಿದರು.
ಪ್ರತಿ ತಿಂಗಳು ಈ ಕಾರ್ಯಕ್ರಮ ನಡೆಯುವುದರಿಂದ ಮಕ್ಕಳಿಗೆ ಸಂಗೀತದಲ್ಲಿ ಹೆಚ್ಚಿನ ಆಸಕ್ತಿ ಮೂಡುವುದಲ್ಲದೆ, ಎಲ್ಲರಿಗೂ ಸ್ವತ್ರಂತ್ರವಾಗಿ ಕಾರ್ಯಕ್ರಮ ನೀಡಲು ಅವಕಾಶ ದೊರೆಯುವುದು ಎಂದು ಅವರು ಅಭಿಪ್ರಾಯಪಟ್ಟರು.
10 ವಿದ್ಯಾರ್ಥಿಗಳು ಗಾಯನ ಮತ್ತು ವಾದನದಲ್ಲಿ ವೈಯಕ್ತಿಕವಾಗಿ ಕಾರ್ಯಕ್ರಮ ನೀಡಿದರು. ವಿದ್ಯಾರ್ಥಿಗಳ ಪಾಲಕರು ಪಾಲ್ಗೊಂಡು ಕಾರ್ಯಕಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರೇಮಾ ಟಿ.ಎಂ.ಆರ್ ಪ್ರಾಸ್ತಾವಿಕ ಮಾತನಾಡಿದರು. ಕವಿತಾ ಸಮೀಂದರ್ ನಿರೂಪಿಸಿದರು. ಪ್ರಭಾ ಭಂಡಾರಿ ವಂದಿಸಿದರು.
Leave a Comment