ಕಾರವಾರ:
ಪೂರ್ವಾಗೃಹ ಪೀಡಿತವಾಗಿರುವ ರಾಜ್ಯ ಸರ್ಕಾರ ವೈದ್ಯರ ಮೇಲೆ ನಿಯಂತ್ರಣ ಹೇರುವ ಕಾಯಿದೆಯನ್ನು ಜಾರಿಗೆ ತಂದರೆ ಕರ್ನಾಟಕ ತೊರೆದು ಇತರೆ ರಾಜ್ಯದಲ್ಲಿ ವೃತ್ತಿ ಜೀವನ ನಡೆಸುವದಾಗಿ ಭಾರತೀಯ ವೈದ್ಯಕೀಯ ಸಂಘದವರು ಎಚ್ಚರಿಸಿದ್ದಾರೆ.
ಬುಧವಾರ ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಸುರೇಶ್ ಭಟ್ಟ, ಕರ್ನಾಟಕ ಸರ್ಕಾರವೂ ಖಾಸಗಿ ವೈದ್ಯರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದು ದೂರಿದರು. ಖಾಸಗಿ ವೈದ್ಯರನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಯತ್ನಿಸಿರುವ ಸರ್ಕಾರ ವಿವಿಧ ಕಾಯ್ದೆಗಳನ್ನು ಜಾರಿಗೆ ತರಲು ಮುಂದಾಗಿದೆ. ವೈದ್ಯರ ಮೇಲೆ ಐದು ಬಗೆಯ ಸಮಿತಿಗಳನ್ನು ರಚಿಸಿ ಸ್ವಂತಂತ್ರ್ಯವಾಗಿ ಕೆಲಸ ನಿರ್ವಹಿಸಲು ಅಡ್ಡಿ ಪಡಿಸುವ ಯೋಜನೆ ರೂಪಿಸಿದೆ. ಕೆ.ಪಿ.ಎಂ.ಇ ಕಾಯ್ದೆ ತಿದ್ದುಪಡಿಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರೂ ತಮ್ಮ ಅಹವಾಲು ಆಲಿಸಿಲ್ಲ ಎಂದು ದೂರಿದರು. ಖಾಸಗಿ ವೈದ್ಯರು ನಡೆಸುವ ಆಸ್ಪತ್ರೆಗಳಿಗೆ ಬರುವ ರೋಗಿಗಳ ಚಿಕಿತ್ಸೆಗೆ ಸರ್ಕಾರ ದರ ನಿಗದಿ ಮಾಡುವದು ಸರಿಯಲ್ಲ. ಯಾವ ವೃತ್ತಿಯವರಿಗೂ ದರ ನಿಗದಿ ಮಾಡದ ಸರ್ಕಾರ ವೈದ್ಯ ವೃತ್ತಿಯ ಮೇಲೆ ದರ ನಿಗದಿ ಮಾಡಲು ಮುಂದಾಗಿರುವದು ಖಂಡನೀಯ ಎಂದರು.
ಈಗಾಗಲೇ ಗ್ರಾಹಕ ನ್ಯಾಯಾಲಯ ಹಾಗೂ ಮೆಡಿಕಲ್ ಕೌನ್ಸಿಲ್ಗಳು ವೈದ್ಯರ ಮೇಲಿನ ದೂರುಗಳನ್ನು ಪರಿಗಣಿಸಿ ಪರಿಹಾರ ಒದಗಿಸುತ್ತಿವೆ. ಹೀಗಿರುವಾಗ ಜಿಲ್ಲಾ ಮಟ್ಟದಲ್ಲಿ ಕುಂದು ಕೊರತೆ ಪರಿಹಾರ ಸಮಿತಿಯನ್ನು ರಚಿಸುವ ಅವಷ್ಯಕತೆ ಸರ್ಕಾರಕ್ಕಿಲ್ಲ ಎಂದು ಹೇಳಿದರು. ವೈದ್ಯರ ಮೇಲೆ ಸಾರ್ವಜನಿಕ ದೂರುಗಳು ಹೆಚ್ಚಾದಲ್ಲಿ ನ್ಯಾಯಾಲಯ ಹಾಗೂ ಕಚೇರಿ ಅಲೆದಾಟವೇ ಹೆಚ್ಚಾಗುತ್ತದೆ. ರೋಗಿಗಳ ಆರೈಕೆಗೆ ಸಮಯದ ಕೊರತೆ ಎದುರಾಗುತ್ತದೆ ಎಂದರು. ಕಾಯ್ದೆ ತಿದ್ದುಪಡೆ ಮಾಡಿ ವೈದ್ಯರ ಮೇಲೆ ನಿಯಂತ್ರಣ ತರಲು ಸರ್ಕಾರ ಮುಂದಾದರೆ ಕರ್ನಾಟಕ ತೊರೆದು ಇತರೆ ರಾಜ್ಯಗಳಲ್ಲಿ ವೃತ್ತಿ ಜೀವನ ನಡೆಸುವದು ಅನಿವಾರ್ಯ ಎಂದು ಹೇಳಿದರು.
* ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದ ವೈದ್ಯರು
ರಾಜ್ಯ ಸರ್ಕಾರದ ವಿರುದ್ದ ಜಿಲ್ಲೆಯ ಖಾಸಗಿ ವೈದ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕಾಯ್ದೆ ತಿದ್ದುಪಡೆಯ ದುಷ್ಪರಿಣಾಮಗಳ ಕುರತು ಮನವರಿಕೆ ಮಾಡಿದರೂ ಈ ಬಗ್ಗೆ ಕಾಳಜಿ ವಹಿಸದ ಆರೋಗ್ಯ ಸಚಿವರ ವಿರುದ್ದ ದಿಕ್ಕಾರ ಕೂಗಿದರು. ಸರ್ಕಾರ ಮೊದಲು ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಶೇ. 80 ರಷ್ಟು ಜನ ಖಾಸಗಿ ಆಸ್ಪತ್ರೆಗೆ ಬರುತ್ತಾರೆ. ಅಂತವರ ದಿಕ್ಕು ತಪ್ಪಿಸಲು ಸರ್ಕಾರ ವೈದ್ಯರಿಗೆ ತೊಂದರೆ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಖಾಸಗಿ ವೈದ್ಯರನ್ನು ಸರ್ಕಾರಿ ಸೇವೆಗೆ ಆಗಮಿಸುವಂತೆ ಒತ್ತಡ ಹೇರಲಾಗುತ್ತಿದೆ. ಸರ್ಕಾರಿ ಸೇವೆಗೆ ಸೇರಿದ ವೈದ್ಯರಿಗೆ ಸೂಕ್ತ ಸವಲತ್ತುಗಳನ್ನು ನೀಡುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವ ಸರ್ಕಾರಿ ವೈದ್ಯರಿಗೆ ಯೋಗ್ಯ ವೇತನ, ವಸತಿ ಹಾಗೂ ಇನ್ನಿತರ ವ್ಯವಸ್ಥೆ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು. ಬುಧವಾರ ಉತ್ತರ ಕನ್ನಡ ಜಿಲ್ಲೆಯ 534
Leave a Comment