ಕಾರವಾರ:
ಸಮಾಜದಲ್ಲಿ ಬೇರೂರಿದ್ದ ಜಾತಿ ಪದ್ದತಿಯನ್ನು ಸೈದ್ದಾಂತಿಕ ನೆಲೆಗಟ್ಟಿನ ಮೂಲಕ ಹೊಸ ಸಂಚಲನ ಮೂಡಿಸಿದ ಕನಕದಾಸರ ಆದರ್ಶಗಳನ್ನು ಅನುಸರಿಸಬೇಕು ಎಂದು ಸಿದ್ದರ ಮಲ್ಲಿಖಾರ್ಜುನ ಕಾಲೇಜಿನ ಉಪನ್ಯಾಸಕ ಜಿ.ಡಿ ಮನೋಜ ಹೇಳಿದರು.
ತಾಲೂಕಾ ಆಡಳಿತದಿಂದ ಹಮ್ಮಿಕೊಂಡ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಸಾಮಾಜಿಕ ನ್ಯಾಯ ಎತ್ತಿ ಹಿಡಿದ ದಾರ್ಶನಿಕ, ಮಹಾನ್ ಕವಿ ಹಾಗೂ ಭಕ್ತಿಯ ಸಾಮ್ರಾಜ್ಯ ಕಟ್ಟಿದ ಕನಕದಾಸರು ವಚನ ಹಾಗೂ ದಾಸ ಸಾಹಿತ್ಯದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಕನ್ನಡ ಸಾಹಿತ್ಯದ ಶ್ರೀಮಂತಿಕೆ ಹೆಚ್ಚಿಸಿರುವ ದಾಸರನ್ನು ಸ್ಮರಿಸಬೇಕಿದೆ ಎಂದರು. ಜನರನ್ನು ಜಾಗೃತಿಗೊಳಿಸಲು ಸಾಹಿತ್ಯ ಬಳಸಿಕೊಂಡವರು ಕನಕದಾಸರು. ವರ್ಗರಹಿತ ಸಮಾಜ ಕಟ್ಟಲು ಅವರು ಶ್ರಮಿಸಿದವರು ಎಂದು ಹೇಳಿದರು.
ನಗರಸಭೆ ಪೌರಾಯುಕ್ತ ಎಸ್.ಯೋಗೇಶ್ವರ ಮಾತನಾಡಿ, ಕನಕದಾಸರು ಯಾವದೇ ವರ್ಗಕ್ಕೆ ಸೀಮಿತವಾಗಿಲ್ಲ. ಅವರ ಆದರ್ಶಗಳನ್ನು ಎಲ್ಲರೂ ಅಳವಿಡಿಕೊಳ್ಳಬೇಕು. ಜಾತಿ ವರ್ಗಗಳನ್ನು ಮೀರಿನ ಮಹಾನ್ ವ್ಯಕ್ತಿ ಅವರು ಎಂದು ಹೇಳಿದರು. ತಹಶೀಲ್ದಾರ್ ಜಿ.ಡಿ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಶ್ರೀಕಾಂತ ಹೆಗಡೆ, ಉಪ ತಹಶೀಲ್ದಾರ್ ಪರಶುರಾಮ ನಾಯಿಕ, ಶಿಕ್ಷಕ ಮಾಧವ ರಾಣೆ ಇದ್ದರು.
Leave a Comment