ಕಾರವಾರ: 2017-18 ನೇ ಸಾಲಿನಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರತಿ ವರ್ಷದಂತೆ ನಡೆಸುವ ಇಲಾಖಾ ಕಾರ್ಯಕ್ರಮಗಳ ಜಯಂತಿ ಉತ್ಸವಗಳ ಮೆರವಣಿಗೆಯಲ್ಲಿ ಭಾಗವಹಿಸಲು ಕಲಾವಿದರರಿಗೆ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲಾಡಳಿತ, ಹಾಗೂ ವಿವಿಧ ಇಲಾಖೆಗಳ ವತಿಯಿಂದ ಆಚರಿಸುವ ಜಯಂತಿ ಉತ್ಸವಳಿಗೆ ಮೆರವಣಿಗೆಯಲ್ಲಿ ಭಾಗವಹಿಸಲು ಜಿಲ್ಲೆಯಲ್ಲಿರುವ ವಿವಿಧ ಸಂಘಟಿತ ಹಾಗೂ ಅಸಂಘಟಿತ ಕಲಾವಿದರರಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೊನೆಯ ದಿನಾಂಕ ನವೆಂಬರ 20 ಸಂಜೆ 5 ರೊಳಗೆ ಸಲ್ಲಿಸಬೇಕು. ಇಲ್ಲಿಯವರೆಗೆ ಯುವ ಸೌರಭ, ಸಾಂಸ್ಕøತಿಕ ಸೌರಭ, ಚಿಗುರು ಸುಗಿ-ಹುಗ್ಗಿ ಮತ್ತು ಜನಪರ ಉತ್ಸವಗಳಾದ ಗಿರಿಜನ ಉತ್ಸವ, ಜನಪದ ಉತ್ಸವ ಕಾಯ್ಕ್ರಮಗಳನ್ನು ಹಮ್ಮಿಕೂಳ್ಳುತ್ತಾ ಬಂದಿದೆ.
ಆಸಕ್ತರು ತಮ್ಮ ಸ್ವ-ವಿವರಗಳೊಂದಿಗೆ ಹೆಸರು,ವಿಳಾಸ ಪ್ರದರ್ಶಿಸುವ ಕಲಾ ಪ್ರಕಾರ, ತಂಡದಲ್ಲಿರುವ ಕಲಾವಿದರ ಸಂಖ್ಯೆ ಪ್ರತಿ ಕಲಾವಿದರ ದೂರವಾಣಿ ಸಂಖ್ಯೆ, ಪ್ರದರ್ಶನ ನೀಡಿರುವ ಛಾಯಾಚಿತ್ರಗಳು ಪೂರ್ಣ ವಿವರದೂಂದಿಗೆ ಸ್ವ-ಲಕೋಟಿಯಲ್ಲಿ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜಿಲ್ಲಾ ರಂಗ ಮಂದಿರ ಮುಖ್ಯ ರಸ್ತೆ, ಕಾರವಾರ ಉತ್ತರ ಕನ್ನಡ 581301 ಮತ್ತು ಹೆಚ್ಚಿನ ಮಾಹಿತಿಗಾಗಿ 08382-227084 ನ್ನು ಸಂಪರ್ಕಿಸಬಹುದು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಾರವಾರ, ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment