ಹಳಿಯಾಳ: ಕಳೆದ ಹಲವು ತಿಂಗಳಿನಿಂದ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ರಾಜಾರೋಷವಾಗಿ ಹಾಗೂ ಪೋಲಿಸರ ಹದ್ದಿನ ಕಣ್ಣು ತಪ್ಪಿಸಿ ನಡೆದಿದ್ದ ಅಕ್ರಮ ಜೂಜಾಟ, ರಮ್ಮಿ ಆಟಕ್ಕೆ ಬ್ರೇಕ್ ಹಾಕಲಾಗಿದ್ದರೂ ಸಹ ಕಾರ್ತಿಕ ಹೇಸರಿನಲ್ಲಿ ಮತ್ತೇ ಗ್ರಾಮಾಂತರ ಭಾಗದಲ್ಲಿ ಅಂದಾದುಂದಿ ಅಂದರಬಾಹರ ಶುರುವಾಗಿದ್ದು ಹಲವು ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.ಹಳಿಯಾಳ: ಕಳೆದ ಹಲವು ತಿಂಗಳಿನಿಂದ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ರಾಜಾರೋಷವಾಗಿ ಹಾಗೂ ಪೋಲಿಸರ ಹದ್ದಿನ ಕಣ್ಣು ತಪ್ಪಿಸಿ ನಡೆದಿದ್ದ ಅಕ್ರಮ ಜೂಜಾಟ, ರಮ್ಮಿ ಆಟಕ್ಕೆ ಬ್ರೇಕ್ ಹಾಕಲಾಗಿದ್ದರೂ ಸಹ ಕಾರ್ತಿಕ ಹೇಸರಿನಲ್ಲಿ ಮತ್ತೇ ಗ್ರಾಮಾಂತರ ಭಾಗದಲ್ಲಿ ಅಂದಾದುಂದಿ ಅಂದರಬಾಹರ ಶುರುವಾಗಿದ್ದು ಹಲವು ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ದೀಪಾವಳಿ ಹಬ್ಬದ ಬಳಿಕ ಜೂಜಾಟಕ್ಕೆ ಸಂಪೂರ್ಣ ಕಡಿವಾಣ ಹಾಕಿರುವ ಪೋಲಿಸ್ ಇಲಾಖೆಯ ದಾರಿ ತಪ್ಪಿಸಿ ಕಾರ್ತಿಕ ಹೆಸರಿನಲ್ಲಿ ಬೃಹತ್ ಪ್ರಮಾಣದಲ್ಲಿ ಕೆಲವು ಗ್ರಾಮಾಂತರ ಭಾಗದಲ್ಲಿ ಲಕ್ಷಾಂತರ ರೂ. ತೊಡಗಿಸಿ ಅಂದರ ಬಾಹರ ಆಡಿಸಲಾಗುತ್ತಿರುವ ಬಗ್ಗೆ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಇತ್ತೀಚೆಗಷ್ಟೇ ಹಳಿಯಾಳ ಬಿಜೆಪಿ ಘಟಕ ತಾಲೂಕಿನ ಪಟ್ಟಣ, ಗ್ರಾಮೀಣ ಭಾಗದಲ್ಲಿ ಹಾಗೂ ರಿಕ್ರೇಶನ್ ಕ್ಲಬ್ಗಳಲ್ಲಿ ಮೀತಿ ಮೀರಿ ರಾಜಾರಾಷೋವಾಗಿ ನಡೆದಿರುವ ಗ್ಯಾಂಬ್ಲಿಂಗ್(ಜೂಜು) ಹಾವಳಿಯನ್ನು ಕೂಡಲೇ ತಡೆಗಟ್ಟಬೇಕು ಇಲ್ಲವಾದಲ್ಲಿ ಸಂಬಂಧಿಸಿದ ಇಲಾಖೆಗಳ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ತಹಸೀಲ್ದಾರ ವಿದ್ಯಾಧರ ಗುಳಗುಳೆ ಹಾಗೂ ಸಿ.ಪಿ.ಐ ಸುಂದ್ರೇಶ ಹೊಳೆಣ್ಣನವರ ಅವರಿಗೆ ಮನವಿ ಸಲ್ಲಿಸಿ ಎಚ್ಚರಿಕೆ ನೀಡಿತ್ತು. ಸದ್ಯ ಮತ್ತೇ ಕಾರ್ತಿಕ ದೀಪ ಹಚ್ಚುವ ನೆಪದಲ್ಲಿ ಕೆಲವು ಗ್ರಾಮೀಣ ಭಾಗದಲ್ಲಿ ಅಂದರ ಬಾಹರ ಜೂಜಾಟ ಮತ್ತೇ ಪ್ರಾರಂಭವಾಗಿರುವುದಕ್ಕೆ ಮಾಜಿ ಶಾಸಕ ಸುನೀಲ್ ಹೆಗಡೆ, ಬಿಜೆಪಿ ಘಟಕ, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ದಲಿತ ಸಂಘರ್ಷ ಸಮೀತಿ ಅಂಬೇಡ್ಕರ ಧ್ವನಿ(ಚಂದ್ರಕಾಂತ ಕಾದ್ರೋಳ್ಳಿ)ಬಣ, ಕೆಂಪು ಸೆನೆ, ಜೀಜಾಮಾತಾ ಮಹಿಳಾ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ತಮ್ಮ ವಿರೋಧ ವ್ಯಕ್ತಪಡಿಸಿದ್ದು ಕೂಡಲೇ ಪೋಲಿಸ್ ಇಲಾಖೆ ಜಾಗೃತಗೊಂಡು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿದ್ದಾರೆ.
Leave a Comment