ಹೊನ್ನಾವರ : ಕೇಂದ್ರದ ಬಿ.ಜೆ.ಪಿ. ನೇತ್ರತ್ವದ ಮೋದಿ ಸರಕಾರ ನೋಟ ಅಮಾನ್ಯೀಕರಣ ಮಾಡಿ ಇಂದಿಗೆ ಒಂದು ವರುಷ ತುಂಬುತ್ತಿರುವ ಸಂದರ್ಭದಲ್ಲಿ ದೇಶಾದ್ಯಂತ ಕಾಂಗ್ರೆಸ್ ಪಕ್ಷ ಕರೆ ಕೊಟ್ಟಂತೆ ಇಂದು ಹೊನ್ನಾವರದಲ್ಲೂ ಕೂಡಾ ಬ್ಲಾಕ್ ಕಾಂಗ್ರೆಸ್ ಕೈಗೆ ಕಪ್ಪು ಪಟ್ಟಿ ಧÀರಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ ಕರಾಳದಿನ ಆಚರಿಸಿತು. ಹೊನ್ನಾವರ : ಕೇಂದ್ರದ ಬಿ.ಜೆ.ಪಿ. ನೇತ್ರತ್ವದ ಮೋದಿ ಸರಕಾರ ನೋಟ ಅಮಾನ್ಯೀಕರಣ ಮಾಡಿ ಇಂದಿಗೆ ಒಂದು ವರುಷ ತುಂಬುತ್ತಿರುವ ಸಂದರ್ಭದಲ್ಲಿ ದೇಶಾದ್ಯಂತ ಕಾಂಗ್ರೆಸ್ ಪಕ್ಷ ಕರೆ ಕೊಟ್ಟಂತೆ ಇಂದು ಹೊನ್ನಾವರದಲ್ಲೂ ಕೂಡಾ ಬ್ಲಾಕ್ ಕಾಂಗ್ರೆಸ್ ಕೈಗೆ ಕಪ್ಪು ಪಟ್ಟಿ ಧÀರಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ ಕರಾಳದಿನ ಆಚರಿಸಿತು.
ಇಂದು ಮುಂಜಾನೆ ಹೊನ್ನಾವರದ ಶರಾವತಿ ವೃತ್ತದ ಬಳಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಮಾತನಾಡಿÀ ಯಾವುದೇ ಪೂರ್ವಾಪರ ಆಲೋಚನೆ ನಡೆಸದೆ ಏಕಾಏಕಿ ನೋಟ ಅಮಾನ್ಯೀಕರಣ ಕೈಗೊಂಡ ಪ್ರಧಾನ ಮಂತ್ರಿ ಮೋದಿಯವರ ನಿಲುವನ್ನು ಖಂಡಿಸಿದರು. ದೇಶದಲ್ಲಿ ಬೃಷ್ಟಾಚಾರ ನಿಲ್ಲಿಸಲು, ಭಯೋತ್ಪಾದನೆ ಚಟುವಟಿಕೆ ಹತ್ತಿಕ್ಕಲೂ ಮತ್ತು ಕಾಳಧನಿಕರನ್ನು ನಿಯಂತ್ರಿಸಲು ನೋಟ ಬ್ಯಾನ್ ಕ್ರಮಕೈಗೊಂಡಿರುವುದಾಗಿ ಹೇಳಿದ್ದ ಮೋದಿ ಇದೆಲ್ಲವನ್ನೂ ತಡೆಯಲು ಈ ಒಂದು ವರ್ಷದಲ್ಲಿ ವಿಫಲರಾಗಿದ್ದಾರೆ ಆದರೆ ಇದಾವುದು ನಿಯಂತ್ರಣಕ್ಕೆ ಬಾರದೇ ಗಡಿಯಲ್ಲಿ ದಿನದಿಂದ ದಿನಕ್ಕೆ ಸೈನಿಕರು ಭಯೋತ್ಪಾದಕರ ದಾಳಿಯಲ್ಲಿ ಸಾವನ್ನಪ್ಪುತ್ತಿದ್ದಾರೆ. ದೇಶದಲ್ಲಿ ಭೃಷ್ಟಾಚಾರ ಇನ್ನೂ ಹೆಚ್ಚಿನ ಮಟ್ಟದಲ್ಲಿ ತಾಂಡವಾಡುತ್ತಿದ್ದು, ಕಾಳಧನಿಕರು ಯಾವುದೇ ಅಳುಕಿಲ್ಲದೇ ತಮ್ಮ ವೈಭವೋಹಿತ ಜೀವನ ಮುಂದುವರಿಸಿದ್ದಾರೆ ಆದರೆ ನೋಟ್ ಬ್ಯಾನ್ನಿಂದ ನಿಜವಾಗಿ ಬಡವರು, ರೈತಾಪಿ ವರ್ಗದವರು ತತ್ತರಿಸಿ ಹೋಗಿದ್ದಾರೆ. ಯಾವುದೇ ಸಣ್ಣ ಸಣ್ಣ ಉದ್ದಿಮೆಗಳಿಗೆ ಆರ್ಥಿಕ ಭದ್ರತೆ ಇಲ್ಲವಾಗಿದೆ. ಸುಮಾರು ಎರಡೂ ನೂರಕ್ಕೂ ಹೆಚ್ಚು ಮಂದಿ ಎ.ಟಿ.ಎಮ್. ಸರದಿ ಸಾಲಿನಲ್ಲಿ ನಿಂತು ಪ್ರಾಣ ತೆತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ನಂತರ ಎಲ್ಲರೂ ಸೇರಿ ಎ.ಟಿ.ಎಮ್. ಸರದಿ ಸಾಲಿನಲ್ಲಿ ಮೃತಪಟ್ಟಿ ಅಮಾಯಕರಿಗಾಗಿ ಒಂದು ನಿಮಿಷ ಮೌನಾಚರಣೆ ಮಾಡಿ ಶೃದ್ದಾಂಜಲಿ ಸಲ್ಲಿಸಲಾಯಿತು. ನಂತರ ಮೆರವಣಿಗೆಯಲ್ಲಿ ಮೋದಿ ಸರಕಾರಕ್ಕೆ ದಿಕ್ಕಾರ ಕೂಗುತ್ತಾ ತಹಶೀಲ್ದಾರ ಕಛೇರಿಗೆ ಆಗಮಿಸಿ ನೋಟ್ ಅಮಾನ್ಯೀಕರಣದಿಂದಾದ ತೊಂದರೆಯ ಕುರಿತು ವಿವರವಾದ ಪ್ರತಿಭಟನಾ ಮನವಿ ಪತ್ರವನ್ನು ಹೊನ್ನಾವರ ತಹಶೀಲ್ದಾರ ವಿ. ಆರ್. ಗೌಡರ ಮೂಲಕ ರಾಷ್ಟ್ರಪತಿಗಳಿಗೆ ರವಾನಿಸಲಾಯಿತು. ಪ್ರತಿಭಟನೆಯಲ್ಲಿ ಹೊನ್ನಾವರ ಪಟ್ಟಣ ಪಂಚಾಯತ ಅಧ್ಯಕ್ಷೆ ಜೈನಾಬಿ ಸಾಬ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವಿನಾಯಕ ಶೇಟ್, ದಾಮೋದರ ನಾಯ್ಕ ಹಳದೀಪುರ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೇತ್ರಾವತಿ ಹೆಗಡೆ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹುಸೇನ್ ಬಾದ್ರಿ, ನಗರ ಘಟಕದ ಅಧ್ಯಕ್ಷ ಕೇಶವ ಮೇಸ್ತ, ಪಟ್ಟಣ ಪಂಚಾಯತ ಉಪಾಧ್ಯಕ್ಷೆ ಶರಾವತಿ ಮೇಸ್ತ, ಪ್ರದೀಪ ಶೆಟ್ಟಿ, ರಾಜೇಶ ನಾಯ್ಕ, ರಮೇಶ ಶೆಟ್ಟಿ, ಜನಾರ್ಧನ ನಾಯ್ಕ, ನಾರ್ಣಪ್ಪ ಗೌಡ, ಮಂಜುನಾಥ ಖಾರ್ವಿ, ಮುಸ್ಸಾ ಅಣ್ಣಿಗೇರಿ, ರಾಜೇಶ ಗುನಗಾ, ಕೃಷ್ಣ ಅಂಬಿಗಾ, ಮೋಹನ ಮೇಸ್ತ, ಶ್ರೀರಾಮ ಜಾದುಗಾರ, ಗಜು ನಾಯ್ಕ ಮತ್ತು ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
Leave a Comment