ಹಳಿಯಾಳ:- ಕಾಂಗ್ರೇಸ್ನ ಕೆಲವು ಕಾರ್ಯಕರ್ತರು ಹಾಗೂ ಮುಖಂಡರು ಪಟ್ಟಣದ ಶ್ರೀ ಗಣೇಶ ಕಲ್ಯಾಣ ಮಂಟಪದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸುನೀಲ್ ಹೆಗಡೆ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.ಹಳಿಯಾಳ:- ಕಾಂಗ್ರೇಸ್ನ ಕೆಲವು ಕಾರ್ಯಕರ್ತರು ಹಾಗೂ ಮುಖಂಡರು ಪಟ್ಟಣದ ಶ್ರೀ ಗಣೇಶ ಕಲ್ಯಾಣ ಮಂಟಪದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸುನೀಲ್ ಹೆಗಡೆ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ತಾಲೂಕಿನ ಸೋಮೆಶ್ವರ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ನಾಗೇಂದ್ರ ಎನ್.ಕುರಬರ ಹಾಗೂ ಸೋಮನಿಂಗ ಅಶೋಕ ಕೋಲ್ಲಾಪುರ (ವಕೀಲರು), ತಿಮಣ್ಣಾ ವಡ್ಡರ ಕಾವಲವಾಡ ಸೋಸೈಟಿ ಉಪಾಧ್ಯಕ್ಷರು ಹಾಗೂ ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾದರೆಂದು ತಾಲೂಕಾ ಅಧ್ಯಕ್ಷ ಶಿವಾಜಿ ನರಸಾನಿ ತಿಳಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜ ಕುರುಬಗಟ್ಟಿ, ವಿ.ಎಮ್.ಪಾಟೀಲ, ಅನಿಲ ಮುತ್ನಾಳ್, ಎಸ್.ಎ.ಶೇಟ್ಟನ್ನವರ, ವಾಸು ಪೂಜಾರಿ, ನಾರಾಯಣ ಬೇಳಗಾಂವಕರ, ದಾದಾಮಿಯಾ ಹವಾಲದಾರ, ರಮೇಶ ಮುಸಳಿ, ಉದಯ ನಾರ್ವೆಕರ ಇತರರು ಇದ್ದರು.
Leave a Comment