ಕಾರವಾರ:
ಸಾಮಾಜಿಕ ಕೌಟುಂಬಿಕ ಹಾಗೂ ಹಾಸ್ಯ ನಾಟಕಗಳಲ್ಲಿ ಅಭಿನಯಿಸಿ ಜನ ಮೆಚ್ಚುಗೆ ಪಡೆದಿರುವ ರಂಗಭೂಮಿ ಕಲಾವಿದ ನಾಗೇಂದ್ರ ಉಮೇಶ ಅಂಚೇಕರರನ್ನು ಮಹಾದೇವಸ್ಥಾನ ನಾಟ್ಯ ಮಂಡಳಿ ವತಿಯಿಂದ ಗೌರವಿಸಲಾಯಿತು.
ಮಹಾದೇವಸ್ಥಾನ ರಂಗ ವೇದಿಕೆಯಲ್ಲಿ ನಾಗೇಂದ್ರ ಅಂಚೇಕರ್ರವರು ತಮ್ಮ 201ನೇ ನಾಟಕವಾದ “ತಂಗಿಗಾಗಿ ತವರು”ದಲ್ಲಿ ಅಭಿನಯಿಸಿದರು. 1998ರಲ್ಲಿ ಬಿಣಗಾ ಮಾಹಾಲಸಾ ನಾಟ್ಯ ಕಲಾವೃಂದದಿಂದ ಪ್ರಥಮ ನಾಟಕವಾದ “ನರಲೋಕದ ನಾಗಿಣಿ” ಯಿಂದ ಈವರೆಗೆ ಅಂಚೇಕರ್ ನಡೆದ ದಾರಿಯನ್ನು ಸ್ಮರಿಸಲಾಯಿತು. ಮಹಾದೇವಸ್ಥಾನ ನಾಟ್ಯ ಮಂಡಳಿಯ ಅಧ್ಯಕ್ಷ ವಿಠೋಬಾ ರಾಣೆ, ಕಾರ್ಯದರ್ಶಿ ಕೃಷ್ಣಾನಂದ ಎನ್. ನಾಯ್ಕ , ವ್ಯವಸ್ಥಾಪನಾ ಸಮಿತಿಯ ಸದಸ್ಯ ಜನಾರ್ಧನ ನಾಯ್ಕ ಇತರರಿದ್ದರು.
Leave a Comment