ಹೊನ್ನಾವರ ಪ್ರಭಾತನಗರದ ಸರಕಾರಿ ಪ್ರೌಢ ಶಾಲೆಯಲ್ಲಿ ಲಾಯನ್ಸ್ ಕ್ಲಬ್ನಿಂದ ವಿಶ್ವ ಸಂಸ್ಥೆ ದಿನಾಚರಣೆ ಪ್ರಯುಕ್ತ ಉಪನ್ಯಾಸ ಕಾರ್ಯಕ್ರಮ ನಡೆಯಿತು.
2ನೇ ಮಹಾಯುದ್ಧದಲ್ಲಿ ಅನೇಕ ರಾಷ್ಟ್ರಗಳು ಅನುಭವಿಸಿದ ಜೀವ, ಆಸ್ತಿ ಪಾಸ್ತಿಗಳ ಹಾನಿ ಮನಗಂಡ ವಿಶ್ವ ಪ್ರಮುಖ ರಾಷ್ಟ್ರಗಳು ವಿಶ್ವ ಶಾಂತಿಗಾಗಿ ಸ್ಥಾಪಿಸಿದ ವಿಶ್ವ ಸಂಸ್ಥೆಯ ಧ್ಯೇಯ, ಉದ್ದೇಶ ಕಾರ್ಯಕಗಳನ್ನು ಉಪನ್ಯಾಸಕರಾದÀ ಎಸ್.ಡಿ.ಎಮ್ ಕಾಲೇಜಿನ ಪ್ರಾಧ್ಯಾಪಕರಾದ ಪ್ರೋ|| ಡಿ.ಎಲ್.ಹೆಬ್ಬಾರ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಾಯನ್ಸ್ ಕ್ಲಬ್ ಅಧ್ಯಕ್ಷರಾದ ಲಾ.ದೇವಿದಾಸ ಮಡಿವಾಳ ಪ್ರಾಸ್ತಾವಿಕ ಮಾತನಾಡಿ ಉಪನ್ಯಾಸಕರನ್ನು ಪರಿಚಯಿಸಿದರು. ಲಾ.ಎಸ್.ಜಿ.ಕೈರೆನ್ನ ಹಿತವಚನ ತಿಳಿಸಿದರು. ಶಾಲೆಯ ಮುಖ್ಯಾಧ್ಯಾಪಕರಾದ ಜಿ.ಎ.ನಾಯ್ಕ ಸ್ವಾಗತಿಸಿದರು. ಖಜಾಂಚಿ ಲಾ.ಎಂ.ವಿ.ನಾಯ್ಕ ವಂದಿಸಿದರು.
ಶಿಕ್ಷಕರಾದ ಎಸ್.ಬಿ.ನಾಯಕ ನಿರ್ವಹಿಸಿದರು. ಲಾ.ಆರ್.ಡಿ.ನಾಯ್ಕ, ಲಾ.ಎನ್.ಜಿ.ಭಟ್ಟ, ಲಾ.ಎಸ್.ಟಿ.ನಾಯ್ಕ, ಲಾ.ಮಂಜು ಆಚಾರ ,್ಯ ಉಪಸ್ಥಿತರಿದ್ದರು
. ಶಾಲೆಯ 9 ಮತ್ತು 10ನೇ ತರಗತಿಯ 110 ಮಕ್ಕಳು ಇದರ ಉಪಯೋಗವನ್ನು ಪಡೆದರು.
Leave a Comment