ಕಾರವಾರ: ಇಲ್ಲಿನ ಸದಾಶಿವಗಡ ಪಂಡಿತ ಬಾಬುರಾವ್ ಬಾನಾವಳಿ ಮತ್ತು ಪಂಡಿತ್ ವಿಶ್ವನಾಥ ಗಡಕರ ಸಂಗೀತ ಪ್ರತಿಷ್ಠಾನದವತಿಯಿಂದ ಉತ್ತರಕನ್ನಡ ಜಿಲ್ಲಾ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಸಂಗೀತ ಸ್ಪರ್ಧೆಯು ನ,19 ರಂದು ಮಹಾಮಾಯಾ ದೇವಸ್ಥಾನದ ಸಭಾಭವನದಲ್ಲಿ ಏರ್ಪಡಿಸಲಾಗಿದೆ.
ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ 5 ನಿಮಿಷ ಕಾಲಾವಕಾಶವಿದ್ದುಮ ವಿಜೇತರಿಗೆ ಪ್ರಥಮ ಬಹುಮಾನ 3 ಸಾವಿರ, ದ್ವಿತೀಯ ಬಹುಮಾನ 2 ಸಾವಿರ ಹಾಗೂ ತೃತೀಯ ಬಹುಮಾನ 1 ಸಾವಿರ ನಗದು ಬಹುಮಾನ ನೀಡಲಾಗುತ್ತಿದೆ. ಅದೇ ರಿತಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 11 ನಿಮಿಷ ಕಾಲಾವಕಾಶವಿದ್ದು, ಅನುಕ್ರಮವಾಗಿ ಮೂರು ಸ್ಥಾನ ಪಡೆಯಲಿರುವ ವಿದ್ಯಾರ್ಥಿಗಳಿಗೆ 5 ಸಾವಿರ, 3 ಸಾವಿರ ಹಾಗೂ 2 ಸಾವಿರ ನಗದು ಬಹುಮಾನ ನೀಡಲಾಗುತ್ತಿದೆ. ಇದಲ್ಲದೆ ಎರಡು ವಿಭಾಗದಲ್ಲಿ ಪ್ರತಿ ಮೂರು ಸ್ಪರ್ಧಿಗಳಿಗೆ ರು. 500 ಬಹುಮಾನ ನೀಡಲಾಗುವುದು.
ಸ್ಪರ್ಧಾಳುಗಳಿಗೆ ಬೇಕಾಗಿರುವ ವಾದ್ಯದ ಉಪಕರಣಗಳನ್ನು ಆಯೋಜಕರಿಂದ ವ್ಯವಸ್ಥೆ ಮಾಡಲಾಗುತ್ತಿದ್ದು, ಸ್ವಂತವಾಗಿಯೂ ಮಾಡಿಕೊಳ್ಳಬಹುದಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ಸ್ಪರ್ಧಾಳುಗಳು ನ.15ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಪ್ರತಿಷ್ಠಾನದ ಅಧ್ಯಕ್ಷ ಪ್ರಸಾದ ಮಡಕಯಿಕರ್ ಮೊ: 9448407537, ಉಪಾಧ್ಯಕ್ಷ ಚಂದ್ರಕಾಂತ ಗಡಕರ ಮೊ: 9964093683 ಈ ನಂಬರ್ಗೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.
Leave a Comment