ಕಾರವಾರ: ಸರ್ಕಾರದಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ನೀಡುವ ಅಡುಗೆ ಅನಿಲ ಹಾಗೂ ವನ್ಯಜೀವಿಗಳಿಂದ ಹಾನಿಯಾದವರಿಗೆ ಪರಿಹಾರ ವಿತರಣೆ ಕಾರ್ಯಕ್ರಮ ಕದ್ರಾದ ಕೆ.ಪಿ.ಸಿ ಭವನದಲ್ಲಿ ನಡೆಯಿತು.
ಶಾಸಕ ಸತೀಶ್ ಸೈಲ್ ಪಲಾನುಭವಿಗಳಿಗೆ ಪರಿಕರಗಳನ್ನು ವಿತರಿಸಿದರು. ಅರಣ್ಯ ಸಮಿತಿಗಳು ಅರಣ್ಯ ಸಂರಕ್ಷಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದಕ್ಕೆ ಲಾಭಾಂಶದ ಒಂದು ಪಾಲನ್ನು ಅರಣ್ಯ ಸಮಿತಿಯವರಿಗೆ ಹಂಚಿಕೆ ಮಾಡಲಾಯಿತು. ಜಿಲ್ಲಾ ಪಂಚಾಯತ ಸದಸ್ಯ ಶಾಂತಾ ಬಾಂದೇಕರ್, ತಾ.ಪಂ ಅಧ್ಯಕ್ಷೆ ಪ್ರಮೀಳಾ ನಾಯ್ಕ, ಅರಣ್ಯಾಧಿಕಾರಿ ಮಂಜುನಾಥ ಜಿ. ನಾವಿ, ಎಂ.ಆರ್. ಅಶೋಕ, ರಾಘವೇಂದ್ರ ನಾಯ್ಕ ಇತರರಿದ್ದರು.
Leave a Comment