ಹೊನ್ನಾವರ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡ್ಕಾರ್ದಲ್ಲಿ ಎಸ್.ಡಿ.ಎಮ್.ಸಿ. ಹಾಗೂ ಶ್ರೀ ಶಂಭುಲಿಂಗೇಶ್ವರ ಹಳೇ ವಿದ್ಯಾರ್ಥಿ ಸಂಘ ಸಹಯೋಗದೊಂದಿಗೆ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ವಿದ್ಯಾರ್ಥಿ ಕು|| ಹóರ್ಷಿತ್ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿದರು, ಮುಖ್ಯ ಅತಿಥಿಗಳಾಗಿ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷÀ ವಿನಾಯಕ ನಾಯ್ಕ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಲು ಪಾಲಕರ ಪಾತ್ರ ಮುಖ್ಯವಾಗಿರುತ್ತದೆ. ಈ ದಿಶೆಯಲ್ಲಿ ಪಾಲಕರು ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾರ್ಥಿನಿ ಕು|| ಭಾಗ್ಯಶ್ರೀ ನಾಯ್ಕ ವಹಿಸಿದ್ದರು.
್ಲ ಎಸ್. ಡಿ.ಎಮ್. ಸಿ ಅಧ್ಯಕ್ಷರಾದ ರಾಜು ನಾಯ್ಕ ಮಾತನಾಡಿ ಮಕ್ಕಳ ಪ್ರಗತಿ ಸಾಧಿಸಲು ಪಾಲಕರು ಪ್ರತೀ ತಿಂಗಳು ಶಾಲೆಗೆ ಬಂದು ವಿದ್ಯಾರ್ಥಿಯ ಶಿಕ್ಷಣದ ಗುಣಮಟ್ಟ ತಿಳಿದುಕೊಳ್ಳಬೇಕೆಂದು ಹೇಳಿದರು. ವೇದಿಕೆಯಲ್ಲಿ ಮುಖ್ಯ ಶಿಕ್ಷಕರಾದ ಶ್ರೀಧರ್ ದೀಕ್ಷಿತ್, ಶಿಕ್ಷಕರಾದ ಜಯಾ ಶಾನಭಾಗ, ಎಸ್.ಎಮ್,ಭಟ್, ಎಮ್.ಎಮ್.ನಾಯ್ಕ, ವಿದ್ಯಾ ಹೆಗಡೆ ಉಪಸ್ಥಿತರಿದ್ದರು.
ಕುಮಾರಿ ಸಂಜನಾ ಸ್ವಾಗತಿಸಿದರು, ಕುಮಾರಿ ರಿಯಾ ಫರ್ನಾಂಡಿಸ್ ವಂದಿಸಿದರು, ಕುಮಾರಿ ಮಾನಸಾ ನಾಯ್ಕ ನಿರೂಪಿಸಿದರು.
Leave a Comment