ಹೊನ್ನಾವರ: ಜೆ.ಡಿ.ಎಸ್ ಪಕ್ಷದ ಹೊನ್ನಾವರ ಘಟಕದ ವತಿಯಿಂದ ಪಕ್ಷದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಹಾಗೂ ಪಕ್ಷ ಸೇರ್ಪಡೆ ಹಾಗೂ ಪಟ್ಟಣದ ಸೋಶಿಯಲ್ ಕ್ಲಬ್ ಸಭಾಭವನದಲ್ಲಿ ನಡೆಯಿತು.
ತಾಲೂಕಾ ಹಿಂದುಳಿದ ವರ್ಗದ ಅಧ್ಯಕ್ಷರಾಗಿ ಗಣಪತಿ ಗೌಡ, ಯುವ ಅಧ್ಯಕ್ಷರಾಗಿ ರಾಜು ನಾಯ್ಕ ಕೆರವಳ್ಳಿ, ರೈತ ಮೋರ್ಚಾ ಅಧ್ಯಕ್ಷರಾಗಿ ಆರ್.ಎಚ್. ನಾಯ್ಕ, ಅಲ್ಪಸಂಖ್ಯಾತರ ತಾಲೂಕಾ ಅಧ್ಯಕ್ಷನಾಗಿ ಇಬ್ರಾಹಿಂ ಸಾಬ್ ವಲ್ಕಿ ಯುವ ಜನತಾದಳದ ಕಾರ್ಯದರ್ಶಿಯಾಗಿ ಗಣೇಶ ಗೌಡ, ಕ್ರಿಶ್ಚನ್ ತಾಲೂಕಾ ಅಧ್ಯಕ್ಷ ಗೋಡೆಪೈ ಫರ್ನಾಂಡಿಸ್ ಕ್ರಿಶ್ಚನ್ ಕಮೀಟಿ ಕಾರ್ಯದರ್ಶಿಯಾಗಿ ಸ್ಟಿವನ್ ಬರ್ನಾಡ್ ವೊಲ್ವೆಕರ್ ತಾಲೂಕಾ ಕಾರ್ಯದರ್ಶಿ ಗೋವಿಂದ ಗೌಡ ಆಯ್ಕೆಯಾದರು. ನಂತರ ನೂರಾರು ಜನರು ಪಕ್ಷ ಸೇರ್ಪಡೆಗೊಂಡರು.
ಜೆಡಿಎಸ್ ಮುಖಂಡ ಗಣಪಯ್ಯ ಗೌಡ, ರಾಜ್ಯ ಕಾರ್ಯದರ್ಶಿ ಜಿ.ಎನ್.ಗೌಡ, ಜಿಲ್ಲಾಧ್ಯಕ್ಷ ಬಿ.ಆರ್.ನಾಯ್ಕ, ಮುಖಂಡಾರಾದ ಇನಾಯಿತುಲ್ಲಾ ಶಾಬಂದ್ರಿ, ಜೆಡಿಎಸ್ ತಾಲೂಕು ಅಧ್ಯಕ್ಷರಾದ ರಾಜು ನಾಯ್ಕ ಮಂಕಿ, ಸುಬ್ರಾಯ ಗೌಡ, ಮಾಜಿ ಜಿ.ಪಂ ಸದಸ್ಯ ಪಿ.ಟಿ.ನಾಯ್ಕ, ಮುಖಂಡರಾದ ಟಿ.ಟಿ.ನಾಯ್ಕ, ತಿಮ್ಮಪ್ಪ ಮೇಸ್ತ, ಇಬ್ರಾಹಿಂ ಸಾಬ್ ಹಾಗೂ ಪಕ್ಷದ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು
Leave a Comment