ಕಾರವಾರ:
ಜಿಲ್ಲಾ ಲೀಡ್ ಬ್ಯಾಂಕ ಕಚೇರಿಯು ನವ್ಹಂಬರ 16 ರಂದು ಬೆಳಗ್ಗೆ 11 ಗಂಟೆಗೆ ಕಾರವಾರ ಜಿಲ್ಲಾ ರಂಗಮಂದಿರದಲ್ಲಿ ಪ್ರಧಾನ ಮಂತ್ರಿ ಮುದ್ರಾ ಸಾಲ ಶಿಬಿರವನ್ನು ಆಯೋಜಿಸಿದೆ.
ಶಿಬಿರದಲ್ಲಿ ಪ್ರಮುಖ ಬ್ಯಾಂಕುಗಳು ಭಾಗವಹಿಸಲಿದ್ದು ಆಸಕ್ತ ಉದ್ಯಮಿಗಳು ಮತ್ತು ಸಾರ್ವಜನಿಕರು ಭಾಗವಹಿಸಿ ಮುದ್ರಾ ಯೋಜನೆಯಡಿ ದೊರೆಯುವ ಸಾಲ ಸೌಲಭ್ಯಗಳ ಮಾಹಿತಿ ಪಡೆಯಬಹುದಾಗಿದೆ. ಶಿಶು ಸ್ಕೀಮ್ನಲ್ಲಿ 50 ಸಾವಿರವರೆಗೆ, ಕಿಶೋರ ಸ್ಕೀಮ್ನಲ್ಲಿ 5 ಲಕ್ಷದವರೆಗೆ, ಮತ್ತು ತರುಣ ಸ್ಕೀಮ್ನಲ್ಲಿ 10 ಲಕ್ಷದವರೆಗೆ ಸಾಲ ಸೌಲಭ್ಯಕ್ಕೆ ಅವಕಾಶವಿರುತ್ತದೆ. ಆಸಕ್ತ ಗ್ರಾಹಕರು ಮುದ್ರಾ ಸಾಲ ಶಿಬಿರದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಶಿಬಿರದ ಸದುಪಯೋಗವನ್ನು ಪಡೆಯಬೇಕೆಂದು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment