ಕಾರವಾರ: ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಸಮುದ್ರದಲ್ಲಿಯೇ ಕೆಟ್ಟುನಿಂತ ಘಟನೆ ಬೈತಖೋಲ್ ಸಮೀಪ ನಡೆದಿದೆ. ಅಪಾಯದಲ್ಲಿದ್ದ 8 ಮೀನುಗಾರರನ್ನು ತಟರಕ್ಷಕ ಪಡೆ ಅಧಿಕಾರಿಗಳು ರಕ್ಷಿಸಿದರು.
ಸಮುದ್ರ ಮದ್ಯೆ ಮೀನುಗಾರಿಕೆ ನಡೆಸುತ್ತಿದ್ದ ಫಾಲಾಕ್ಷ ಎಂಬ ದೋಣಿಯ ಇಂಜಿನ್ ಏಕಾಏಕಿ ಸ್ಥಗಿತಗೊಂಡಿತು. ಇದರಿಂದ ಅದಲ್ಲಿದ್ದ ಮೀನುಗಾರರು ಭಯಗೊಂಡಿದ್ದರು. ಒಬ್ಬರು ಕೋಸ್ಟಗಾರ್ಡ ಸಿಬ್ಬಂದಿಗೆ ಕರೆ ಮಾಡಿ ಸಹಾಯ ಯಾಚಿಸಿದರು. ತುರ್ತಾಗಿ ಆಗಮಿಸಿದ ತಟರಕ್ಷಕ ಪಡೆಯವರು ದೋಣಿಯಲ್ಲಿದ್ದವರನ್ನು ತಮ್ಮ ಬೋಟ್ನ ಒಳಭಾಗಕ್ಕೆ ತುಂಬಿಸಿಕೊಂಡರು. ನಂತರ ದೋಣಿಯನ್ನು ಎಳೆದು ತಂದು ದೇವಗಡ ದ್ವೀಪದ ಬಳಿ ಲಂಗರು ಹಾಕಿಸಲಾಯಿತು. ಐಇಜಿಎಸ್ ಅಪೂರ್ವ ತಂಡದ ಕೋಸ್ಟಗಾರ್ಡ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Leave a Comment