ಕಾರವಾರ: ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಸಮುದ್ರದಲ್ಲಿಯೇ ಕೆಟ್ಟುನಿಂತ ಘಟನೆ ಬೈತಖೋಲ್ ಸಮೀಪ ನಡೆದಿದೆ. ಅಪಾಯದಲ್ಲಿದ್ದ 8 ಮೀನುಗಾರರನ್ನು ತಟರಕ್ಷಕ ಪಡೆ ಅಧಿಕಾರಿಗಳು ರಕ್ಷಿಸಿದರು. ಸಮುದ್ರ ಮದ್ಯೆ ಮೀನುಗಾರಿಕೆ ನಡೆಸುತ್ತಿದ್ದ ಫಾಲಾಕ್ಷ ಎಂಬ ದೋಣಿಯ ಇಂಜಿನ್ ಏಕಾಏಕಿ ಸ್ಥಗಿತಗೊಂಡಿತು. ಇದರಿಂದ ಅದಲ್ಲಿದ್ದ ಮೀನುಗಾರರು ಭಯಗೊಂಡಿದ್ದರು. ಒಬ್ಬರು ಕೋಸ್ಟಗಾರ್ಡ ಸಿಬ್ಬಂದಿಗೆ ಕರೆ ಮಾಡಿ ಸಹಾಯ ಯಾಚಿಸಿದರು. ತುರ್ತಾಗಿ ಆಗಮಿಸಿದ ತಟರಕ್ಷಕ ಪಡೆಯವರು … [Read more...] about ಮೀನುಗಾರಿಕೆಗೆ ತೆರಳಿದ್ದ ದೋಣಿ ; ಸಮುದ್ರ ಮದ್ಯೆ ಇಂಜಿನ್ ಸ್ಥಗಿತ
ಘಟನೆ
ಬೈಕ್ ಸ್ಕಿಡ್: ಸವಾರ ಸಾವು
ಕಾರವಾರ: ಬೈಕ್ ಸ್ಕಿಡ್ ಆದ ಪರಿಣಾಮ ಸಹ ಸವಾರ ಮೃತಪಟ್ಟ ಘಟನೆ ಅಮದಳ್ಳಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಅಂಕೋಲಾ ಹೊಸಗದ್ದೆಯ ಅಕಿಲಾ ಅಣ್ವೇಕರ್ (49) ಮೃತರು. ತಮ್ಮ ಪತಿ ಶಂಕರ್ ಅಣ್ವೇಕರ್ ಜೊತೆ ಬೈಕ್ನಲ್ಲಿ ಬರುತ್ತಿದ್ದ ವೇಳೆ ಬೈಕ್ ನೆಲಕ್ಕೆ ಅಪ್ಪಳಿಸಿದ್ದು, ಹಿಂಬದಿ ಸವಾರರಾಗಿದ್ದ ಅಕಿಲಾ ಗಾಯಗೊಂಡಿದ್ದರು. ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಅವರು ಮೃತಪಟ್ಟರು. ಶಂಕರ್ರ ಕೈ ಮೂಳೆ ಮುರಿದಿದೆ. ಗಾಯಾಳವುನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. … [Read more...] about ಬೈಕ್ ಸ್ಕಿಡ್: ಸವಾರ ಸಾವು
ಜಲಪಾತ ವೀಕ್ಷಣೆಗೆ ಬಂದಿದ್ದ ಗೋವಾದ ಆರು ಪ್ರವಾಸಿಗರು ನೀರುಪಾಲು
ಕಾರವಾರ:ಜಲಪಾತ ವೀಕ್ಷಣೆಗೆ ಬಂದಿದ್ದ ಗೋವಾದ ಆರು ಪ್ರವಾಸಿಗರು ನೀರುಪಾಲಾದ ಘಟನೆ ಚೆಂಡಿಯಾ ಸಮೀಪದ ನಾಗರಮುಡಿ ನಡೆದಿದೆ. ಭಾನುವಾರ ಬೆಳಗ್ಗೆ ಗೋವಾ ಮಡಗಾಂವ್, ವಾಸ್ಕೋ ಹಾಗೂ ಪೋಂಡಾದಿಂದ 50ಕ್ಕೂ ಅಧಿಕ ಮಂದಿ 3 ತಂಡಗಳನ್ನು ರಚಿಸಿಕೊಂಡು ಪ್ರತ್ಯೇಕ ವಾಹನಗಳಲ್ಲಿ ಚಂಡಿಯಾಗೆ ಆಗಮಿಸಿದ್ದರು. ಚೆಂಡಿಯಾದಿಂದ ಕಾಲ್ನಡಿಗೆ ಮೂಲಕ ನಾಗರಮುಡಿ ಜಲಪಾತಕ್ಕೆ ತೆರಳಿದ ಪ್ರವಾಸಿಗರು ಅಲ್ಲಿಯೇ ಲಘು ಉಪಹಾರ ಸೇವಿಸಿದ್ದಾರೆ. ನಂತರ ನೀರಿನಲ್ಲಿ ಆಟವಾಡಿದ್ದು, ಈ ವೇಳೆ ಮಳೆ … [Read more...] about ಜಲಪಾತ ವೀಕ್ಷಣೆಗೆ ಬಂದಿದ್ದ ಗೋವಾದ ಆರು ಪ್ರವಾಸಿಗರು ನೀರುಪಾಲು
ಕ್ಷುಲ್ಲಕ ಕಾರಣಕ್ಕಾಗಿ ಕಚ್ಚಾಟ
ಕಾರವಾರ: ಕ್ಷುಲ್ಲಕ ಕಾರಣಕ್ಕಾಗಿ ಸಚಿವರ ಮುಂದೆಯೇ ಶಾಸಕ ಸತೀಶ್ ಸೈಲ್ ಹಾಗೂ ಎನ್ಎಸ್ಯುಐ ವಿದ್ಯಾರ್ಥಿ ಸಂಘಟನೆಯ ಸಿದ್ದಾರ್ಥ ನಾಯ್ಕ ಕಚ್ಚಾಟ ನಡೆಸಿದ ಘಟನೆ ಮಾಜಾಳಿಯಲ್ಲಿ ಮಂಗವಾರ ನಡೆಯಿತು. ನಗರದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಳೆದ ಕೆಲ ವರ್ಷಗಳಿಂದ ನಡೆಯುತ್ತಿರುವ ಎಂಜಿನಿಯರಿಂಗ್ ತರಗತಿಗಳಿಗೆ ಸೂಕ್ತ ಸ್ಥಳವಕಾಶವಿಲ್ಲದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿರುವ ಬಗ್ಗೆ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಮಂಗಳವಾರ ಕಾಲೇಜು ಕಟ್ಟಡಕ್ಕೆ ತೆರಳಿ ಸಚಿವರು … [Read more...] about ಕ್ಷುಲ್ಲಕ ಕಾರಣಕ್ಕಾಗಿ ಕಚ್ಚಾಟ
ಬೋಟ್ಗೆ ಡಿಕ್ಕಿ ಹೊಡೆದು ಡಾಲ್ಪಿನ್ ಮರಿ ಸಾವು
ಕಾರವಾರ: ಯಾಂತ್ರಿಕೃತ ಬೋಟ್ಗೆ ಡಿಕ್ಕಿ ಹೊಡೆದು ಡಾಲ್ಪಿನ್ ಮರಿ ಸಾವನಪ್ಪಿದ್ದ ಘಟನೆ ಅರಬ್ಬಿ ಸಮುದ್ರದಲ್ಲಿ ನಡೆದಿದೆ. ಡಾಲ್ಪಿನ್ ಮರಿಯ ಮೃತ ದೇಹ ಭಾನುವಾರ ರವೀಂದ್ರನಾಥ್ ಕಡಲತೀರದಲ್ಲಿ ಪತ್ತೆಯಾಗಿದೆ. ಅರಣ್ಯ ಇಲಾಖೆಯವರು ಪಂಚನಾಮೆ ನಡೆಸಿದ್ದು, ಮೃತ ದೇಹವನ್ನು ವಿಜ್ಞಾನಕೇಂದ್ರಕ್ಕೆ ಕೊಂಡೊಯ್ದರು. ಸೋಮವಾರ ಮರಣೋತ್ತರ ಪರೀಕ್ಷೆ ನಡೆಯಲಿದೆ. ಬೋಟ್ ಡಿಕ್ಕಿ ಹೊಡೆದ ಸಾಕ್ಷಿಗೆ ಡಾಲ್ಬನ್ ದೇಹದಲ್ಲಿ ಗುರುತುಗಳು ಪತ್ತೆಯಾಗಿವೆ. ಬೋಟ್ನ ಪಂಕ ತಗುಲಿರುವ ಶಂಕೆಯಿದೆ. … [Read more...] about ಬೋಟ್ಗೆ ಡಿಕ್ಕಿ ಹೊಡೆದು ಡಾಲ್ಪಿನ್ ಮರಿ ಸಾವು