ಹೊನ್ನಾವರ : ಹೊನ್ನಾವರ ಪಟ್ಟಣ ಪಂಚಾಯತನಲ್ಲಿ ಒಟ್ಟೂ 18 ಸದಸ್ಯರಿದ್ದು ಅದರಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರದ್ದೇ ಸಿಂಹಪಾಲು. ಕಾಂಗ್ರೆಸ್ನ ‘ಕೈ’ ಚಿಹ್ನೆಯಡಿಯಲ್ಲಿ ಒಟ್ಟೂ ಒಂಬತ್ತು ಸದಸ್ಯರು ಆಯ್ಕೆಯಾಗಿದ್ದು ಮೊದಲನೇ ಅವಧಿಯಲ್ಲಿ ಕಾಂಗ್ರೆಸ್ನ ಜೋಸ್ಪಿನ್ ಡಯಾಸ ‘ಬ’ ವರ್ಗದ ಮಿಸಲಾತಿಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಆದರೆ ಎರಡನೇ ಅವಧಿಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಲ್ಲಿ ಮಾತ್ರ ಅತ್ಯಂತ ತುರುಸಿನಿಂದ ನಡೆದು ಕಾಂಗ್ರೆಸ್ ಪಕ್ಷದ ಸದಸ್ಯರಲ್ಲಿ ಒಮ್ಮತಾಭಿಪ್ರಾಯ ಮೂಡದೇ ಕಾಂಗ್ರೆಸ್ ಪಕ್ಷದವರೇ ಆದ ಶ್ರೀಮತಿ ಜೈನಾಬಿ ಇಸ್ಮಾಯಿಲ್ ಸಾಬರವರು ಕಾಂಗ್ರೆಸ್ ಪಕ್ಷದ ನಾಲ್ಕು, ಜೆ.ಡಿ.ಎಸ್. ಪಕ್ಷದ ನಾಲ್ಕು, ಬಿ.ಜೆ.ಪಿ. ಪಕ್ಷದ ಎರಡು ಸದಸ್ಯರ ಬೆಂಬಪ ಪಡೆದು ಮುಂದಿನ ಮೂವತ್ತು ತಿಂಗಳ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ ಅದನ್ನ ಪೂರ್ಣಗೊಳಿಸಲು ಇನ್ನು ಕೆಲವೇ ತಿಂಗಳು ಬಾಕಿ ಇರುವಾಗ ಸ್ವ ಪಕ್ಷೀಯ ಐದು ಸದಸ್ಯರೊಂದಿಗೆ, ಬಿ.ಜೆ.ಪಿ., ಜೆ.ಡಿ.ಎಸ್. ಮತ್ತು ಪಕ್ಷೇತರ ಒಟ್ಟೂ 14 ಸದಸ್ಯರು ದಿ : 24-10-2017 ರಂದು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದಾರೆ. ಆದರೆ ಅವಿಶ್ವಾಸ ಮಂಡನೆ ಸಲ್ಲಿಕೆಯಾದ ಒಂದು ವಾರದಲ್ಲೇ ಪುನಃ ಮೂರು ಸದಸ್ಯರು ಚಂದ್ರಹಾಹ ಜಿ. ನಾಯ್ಕ, ದಾಮೋದರ ವಾಯ್. ಮೇಸ್ತ, ಮಹಾಲಕ್ಷ್ಮೀ ಹರಿಜನ ತಾವು ಅಧ್ಯಕ್ಷರ ವಿರುದ್ಧ ಯಾವುದೇ ಅವಿಶ್ವಾಸ ವ್ಯಕ್ತ ಪಡಿಸದೇ ಅಧ್ಯಕ್ಷರ ಮೇಲೆ ತುಂಬಾ ವಿಶ್ವಾಸವಿರಿಸಿರುವುದಾಗಿ ಲಿಖಿತ ಸಹಿಯೊಂದಿಗೆ ಮುಖ್ಯಾಧಿಕಾರಿಗಳಿಗೆ ಮನವಿಪತ್ರ ತಲುಪಿಸಿದ್ದಾರೆ.ಹೊನ್ನಾವರ : ಹೊನ್ನಾವರ ಪಟ್ಟಣ ಪಂಚಾಯತನಲ್ಲಿ ಒಟ್ಟೂ 18 ಸದಸ್ಯರಿದ್ದು ಅದರಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರದ್ದೇ ಸಿಂಹಪಾಲು. ಕಾಂಗ್ರೆಸ್ನ ‘ಕೈ’ ಚಿಹ್ನೆಯಡಿಯಲ್ಲಿ ಒಟ್ಟೂ ಒಂಬತ್ತು ಸದಸ್ಯರು ಆಯ್ಕೆಯಾಗಿದ್ದು ಮೊದಲನೇ ಅವಧಿಯಲ್ಲಿ ಕಾಂಗ್ರೆಸ್ನ ಜೋಸ್ಪಿನ್ ಡಯಾಸ ‘ಬ’ ವರ್ಗದ ಮಿಸಲಾತಿಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಆದರೆ ಎರಡನೇ ಅವಧಿಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಲ್ಲಿ ಮಾತ್ರ ಅತ್ಯಂತ ತುರುಸಿನಿಂದ ನಡೆದು ಕಾಂಗ್ರೆಸ್ ಪಕ್ಷದ ಸದಸ್ಯರಲ್ಲಿ ಒಮ್ಮತಾಭಿಪ್ರಾಯ ಮೂಡದೇ ಕಾಂಗ್ರೆಸ್ ಪಕ್ಷದವರೇ ಆದ ಶ್ರೀಮತಿ ಜೈನಾಬಿ ಇಸ್ಮಾಯಿಲ್ ಸಾಬರವರು ಕಾಂಗ್ರೆಸ್ ಪಕ್ಷದ ನಾಲ್ಕು, ಜೆ.ಡಿ.ಎಸ್. ಪಕ್ಷದ ನಾಲ್ಕು, ಬಿ.ಜೆ.ಪಿ. ಪಕ್ಷದ ಎರಡು ಸದಸ್ಯರ ಬೆಂಬಪ ಪಡೆದು ಮುಂದಿನ ಮೂವತ್ತು ತಿಂಗಳ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ ಅದನ್ನ ಪೂರ್ಣಗೊಳಿಸಲು ಇನ್ನು ಕೆಲವೇ ತಿಂಗಳು ಬಾಕಿ ಇರುವಾಗ ಸ್ವ ಪಕ್ಷೀಯ ಐದು ಸದಸ್ಯರೊಂದಿಗೆ, ಬಿ.ಜೆ.ಪಿ., ಜೆ.ಡಿ.ಎಸ್. ಮತ್ತು ಪಕ್ಷೇತರ ಒಟ್ಟೂ 14 ಸದಸ್ಯರು ದಿ : 24-10-2017 ರಂದು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದಾರೆ. ಆದರೆ ಅವಿಶ್ವಾಸ ಮಂಡನೆ ಸಲ್ಲಿಕೆಯಾದ ಒಂದು ವಾರದಲ್ಲೇ ಪುನಃ ಮೂರು ಸದಸ್ಯರು ಚಂದ್ರಹಾಹ ಜಿ. ನಾಯ್ಕ, ದಾಮೋದರ ವಾಯ್. ಮೇಸ್ತ, ಮಹಾಲಕ್ಷ್ಮೀ ಹರಿಜನ ತಾವು ಅಧ್ಯಕ್ಷರ ವಿರುದ್ಧ ಯಾವುದೇ ಅವಿಶ್ವಾಸ ವ್ಯಕ್ತ ಪಡಿಸದೇ ಅಧ್ಯಕ್ಷರ ಮೇಲೆ ತುಂಬಾ ವಿಶ್ವಾಸವಿರಿಸಿರುವುದಾಗಿ ಲಿಖಿತ ಸಹಿಯೊಂದಿಗೆ ಮುಖ್ಯಾಧಿಕಾರಿಗಳಿಗೆ ಮನವಿಪತ್ರ ತಲುಪಿಸಿದ್ದಾರೆ.
ಸಾರ್ವಜನಿಕರಲ್ಲಿ ಕುತೂಹಲ : ಕಾರಣ ನಾಳೆ ದಿನಾಂಕ : 18 ರಂದು ಅವಿಶ್ವಾಸ ಗೊತ್ತುವಳಿಯ ಕುರಿತು ಪಟ್ಟಣ ಪಂಚಾಯತ ವಿಶೇಷ ಸಭೆ ಕರೆಯಲಾಗಿದ್ದು, ಕಾಂಗ್ರೇಸ್ ಪಕ್ಷದವರೇ ಆದ ಉಪಾಧ್ಯಕ್ಷೆ ಶ್ರೀಮತಿ ಶರಾವತಿ ಸುರೇಶ ಮೇಸ್ತ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರಣ ಅತ್ಯಂತ ಕುತೂಹಲಕ್ಕೆ ಎಡೆಮಾಡಿದ ಈ ವಿಶೇಷ ಸಭೆಯಲ್ಲಿ ಹಾಲೀ ಅಧ್ಯಕ್ಷೆ ಶ್ರೀಮತಿ ಜೈನಾಬಿ ಸಾಬ ಅಗ್ನಿಪರೀಕ್ಷೆಯಲ್ಲಿ ಪಾರಾಗುವರೋ ಎಂಬುದು ಎಲ್ಲವೂ ಕೂಡಾ ಪುನಃ ಅಧ್ಯಕ್ಷರ ಮೇಲೆ ವಿಶ್ವಾಸ ವ್ಯಕ್ತಪಡಿಸಿದ ಮೂರು ಸದಸ್ಯರ ನಿಲುವಿನ ಮೇಲೆ ಅವಲಂಭಿತವಾಗಿದೆ. ಇದು ನಗರದ ಜನತೆಯನ್ನು ತುದಿಗಾಲ ಮೇಲೆ ನಿಲ್ಲಿಸಿ ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ.
Leave a Comment