ಕಾರವಾರ: ಅಸ್ನೋಟಿಯ ಭಗತವಾಡಾದ ಹಿಪ್ಪಳಗಿರಿಯಲ್ಲಿ ವಾಲಿಬಾಲ್ ಪಂದ್ಯಾವಳಿ ನಡೆಯಿತು.
ಸ್ವಾಮಿ ಶರಣಂ ಅಯ್ಯಪ್ಪ ಶ್ರೀ ಧರ್ಮ ಶಾಸ್ತ್ರ ಸೇವಾ ಸಮಿತಿ ಹಾಗೂ ವಿಠ್ಠಲ ರುಖುಮಾಯಿ ಭಜಕ ಮಂಡಳಿಯ ಸಂಯುಕ್ತಾಶ್ರಯದಲ್ಲಿ ನಾಗೇಂದ್ರ ಅಂಚೇಕರವರ ಮಾರ್ಗದರ್ಶನದಲ್ಲಿ ವಾಲಿಬಾಲ ಪಂದ್ಯಾವಳಿ ಆಯೋಜಿಸಲಾಗಿತ್ತು. ಅಂತಿಮ ಪಂದ್ಯದಲ್ಲಿ ಡಿ.ಕೆ.ಹೊಸಾಳಿ ತಂಡವು ಸಾತೇರಿ ಬಾಯ್ಸ್ ತಂಡವನ್ನು ಸೋಲಿಸಿ ಪ್ರಶಸ್ತಿ ಪಡೆದುಕೊಂಡಿತು. ಉತ್ತಮ ಹೊಡೆತಗಾರರಾಗಿ ಕಮಲೇಶ ಆಚಾರಿ ಹಾಗೂ ಉತ್ತಮ ಎಸೆತಗಾರರಾಗಿ ಕಿರಣ ಬಾನಾವಳಿಯವರಿಗೆ ಬಹುಮಾನ ಪಡೆದರು. ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕಾರಿ ಸಮಿತಿ ಸದಸ್ಯೆ ರೂಪಾಲಿ ನಾಯ್ಕ ಬಹುಮಾನ ವಿತರಿಸಿದರು. ಪ್ರಮುಖರಾದ ಸೈರು ಭಗತ, ರಾಮದಾಸ ಭಗತ, ಶ್ಯಾಮ್ ಗೋವೆಕರ, ಸುನೀಲ್ ಗೋವೆಕರ, ಶ್ರೀಧರ ಕಾಣಕೋಣಕರ, ಶ್ಯಾಮ್ ಚಂಡೇಕರ, ಗಜಾನನ ನಾಯ್ಕ, ನಾರಾಯಣ ಚಂಡೇಕರ, ದಿನೇಶ ಕಾಣಕೋಣಕರ ಹಾಗೂ ದರ್ಶನ ನಾಯ್ಕ ಇತರರಿದ್ದರು.
Leave a Comment