ಅಂಕೋಲಾ :
ಮಕ್ಕಳನ್ನು ಶಾಲೆಯತ್ತ ಆಕರ್ಷಿಸಲು ಸರಕಾರ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಅದೇ ಸರಕಾರದ ವ್ಯವಸ್ಥೆ ವಿದ್ಯಾರ್ಥಿಗಳಿಗೆ ನೀಡಿದ ಸೌಲಭ್ಯವನ್ನು ಕಸಿದುಕೊಳ್ಳುವ ಮೂಲಕ ನೀರ್ಲಕ್ಷ ತಾಳುವ ಉದಾರಣೆಗಳು ಸಾಕಷ್ಠಿದೆ. ಅಂತಹದರಲ್ಲಿ ಇಲ್ಲಿನ ವಿದ್ಯಾರ್ಥಿಗಳಿಗೆ ನೀಡಿದ ಬಸ್ ಸೌಲಭ್ಯವನ್ನು ಏಕಾಏಕಿ ಸ್ಥಗಿತಗೊಳಿಸಿ ವಿದ್ಯಾರ್ಥಿಗಳನ್ನು ಅಂತಂತ್ರನಾಗಿಸಿದೆ. ಸಿಕ್ಕ ಸಿಕ್ಕ ಲಾರಿಗಳನ್ನು ಏರಿ ವಿದ್ಯಾದೇಗುಲಕ್ಕೆ ಸಾಗುವ ವಿದ್ಯಾರ್ಥಿಗಳು ಭಯದಲ್ಲಿಯೇ ಕಾಲ ಕಳೆಯುವ ಪರಿಸ್ಥಿತಿ ಎದುರಾಗಿದೆ.
ಹೌದು… ಇದು ಹೊನ್ನಳ್ಳಿ, ಸರಳೇಬೈಲ, ಮಾಸ್ತಿಕಟ್ಟಾ, ಭಾಗದ ವಿದ್ಯಾರ್ಥಿಗಳ ವ್ಯಥೆಯ ಕಥೆ. ಕಳೆದ 1 ತಿಂಗಳಿಂದ ಯಲ್ಲಾಪುರದಿಂದ ಅಂಕೋಲಾಕ್ಕೆ ಬಿಡುತ್ತಿದ್ದ ಸಾಮಾನ್ಯ ದರ್ಜೆಯ ಬಸ್ನ್ನು ಸಾರಿಗೆ ಇಲಾಖೆ ಸ್ಥಗಿತಗೊಳಿಸಿದೆ. ಇದರ ಪರಿಣಮವಾಗಿ ಸುವIÁಉÀು 125 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಸ್ನ ಸಮರ್ಪಕ ವ್ಯವಸ್ಥೆ ಇಲ್ಲದ ಪರಿಣಾಮ ಪರದಾಡುವಂತಾಗಿದೆ.
ರಾಷ್ಟ್ರೀಯ ಹೆದ್ದಾರಿ 63ಕ್ಕೆ ಹೊಂದಿಕೊಂಡಿರುವ ಹೊನ್ನಳ್ಳಿ, ಸರಳೇಬೈಲ, ಮಾಸ್ತಿಕಟ್ಟಾ, ಭಾಗಗಳಿಂದ ವಿದ್ಯಾರ್ಥಿಗಳು ಅಗಸೂರು ಹಾಗೂ ಅಂಕೋಲಾದ ಶಾಲಾ- ಕಾಲೇಜುಗಳಿಗೆ ಸಾಗುತ್ತಾರೆ. ವಾಹನಕ್ಕೆ ದರ ಕೊಟ್ಟು ಪ್ರಯಾಣಿಸುವದಾದರೆ ಒಂದೆಡೆ ಪ್ರಯಾಣಕ್ಕೆ 27 ರೂ ಕೊಡಬೇಕು. ವಿದ್ಯಾರ್ಥಿಗಳು ಬಸ್ ಮೇಲೆ ಸಂಚಾರಕ್ಕೆ ಪಾಸ್ನ್ನು ಮಾಡಿಕೊಂಡಿದ್ದಾರೆ. ಆದರೆ ಬಸ್ನ್ನು ಸ್ಥಗಿತಗೊಳಿಸಿದ ಪರಿಣಾಮವಾಗಿ ನೀಡಿದ ಬಸ್ ಪಾಸ್ ಕೂಡ ಉಪಯೋಗಕ್ಕೆ ಬಾರದಂತಾಗಿದೆ.
ಇನ್ನು ಇಲ್ಲಿನ ಗ್ರಾಪಂ ಉಪಾಧ್ಯಕ್ಷ ಯಶ್ವಂತ ತಿಮ್ಮಾ ಗೌಡ ನೇತ್ರತ್ವದಲ್ಲಿ ಗ್ರಾಮದ ಯುವಕರು ಪ್ರತಿ ನಿತ್ಯ ಲಾರಿಗಳನ್ನು ತಡೆದು ವಿದ್ಯಾರ್ಥಿಗಳನ್ನು ಶಾಲೆಗೆ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಅಂಕೋಲಾ ಹಾಗೂ ಯಲ್ಲಾಪುರ ಘಟಕಕ್ಕೆ ಬಸ್ ಪ್ರಾರಂಬಿಸುವಂತೆ ಮನವಿ ನೀಡಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಪ್ರತಿನಿತ್ಯ ಭಯದಲ್ಲಿಯೆ ಅಪರಿಚಿತ ಲಾರಿಯನ್ನು ಏರುವದು ಅಭದ್ರತೆಗೆ ಕಾರಣವಾಗಿದೆ.
ಕೂಡಲೇ ಬಸ್ ಪ್ರಾರಂಬಿಸುವಂತೆ ಅಗಸೂರು ಗ್ರಾ.ಪಂ. ಉಪಾದ್ಯಕ್ಷ ಯಶ್ವಂತ ತಿಮ್ಮಾ ಗೌಡ, ಸದಸ್ಯೆ ರತ್ನಾ ಬುದ್ದು ಗೌಡ, ಪ್ರಮುಖರಾದ ತಿಮ್ಮಪ್ಪ ನಾರಾಯನ ಗೌಡ, ರವಿ ಹುಲಿಯಪ್ಪ ಗೌಡ, ಶ್ರೀನಿವಾಸ ಶೆಟ್ಟಿ, ಬಾಬು ತಿಮ್ಮ ಗೌಡ, ನೀಲಪ್ಪ ವೆಂಕಟೇಷ ಗೌಡ, ಶಿವಾನಂದ ಗೌಡ ಸೇರಿದಂತೆ ಮೊದಲಾದವರು ಒತ್ತಾಯಿಸಿದ್ದಾರೆ.
****************************************
ಬಸ್ ಪ್ರಾರಂಬಿಸದಿದ್ದಲ್ಲಿ ಒಂದು ವಾರದೊಳಗಾಗಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುವದು. ವಿದ್ಯಾರ್ಥಿಗಳು ಪ್ರತಿ ನಿತ್ಯ ಅಪರಿಚಿತ ಲಾರಿಗಳನ್ನು ಏರಿ ಶಾಲೆಗೆ ತೆರಳುತ್ತಿರುವದು ಭಯದ ವಾತಾವರಣ ಗ್ರಾಮದಲ್ಲಿ ಮೂಡಿದೆ. ಆದ್ದರಿಂದ ಕೂಡಲೆ ಬಸ್ ಪ್ರಾರಂಭಗೊಳ್ಳುವಂತಾಗಬೇಕು.ಬಸ್ ಪ್ರಾರಂಬಿಸದಿದ್ದಲ್ಲಿ ಒಂದು ವಾರದೊಳಗಾಗಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುವದು. ವಿದ್ಯಾರ್ಥಿಗಳು ಪ್ರತಿ ನಿತ್ಯ ಅಪರಿಚಿತ ಲಾರಿಗಳನ್ನು ಏರಿ ಶಾಲೆಗೆ ತೆರಳುತ್ತಿರುವದು ಭಯದ ವಾತಾವರಣ ಗ್ರಾಮದಲ್ಲಿ ಮೂಡಿದೆ. ಆದ್ದರಿಂದ ಕೂಡಲೆ ಬಸ್ ಪ್ರಾರಂಭಗೊಳ್ಳುವಂತಾಗಬೇಕು.- ಯಶ್ವಂತ ತಿಮ್ಮಾ ಗೌಡಉಪಾಧ್ಯಕ್ಷರು ಗ್ರಾಪಂ ಅಗಸೂರು.
—————————————————————-
ನಾವು ಪ್ರತಿನಿತ್ಯ ಭಯದ ನೆರಳಿನಲ್ಲಿಯೆ ಶಾಲೆಗೆ ಸಾಗುವಂತಾಗಿದೆ. ಹಾಗೆ ಪ್ರತಿನಿತ್ಯ 50 ರೂಪಾಯಿ ಲಾರಿಗಳಿಗೆ ನೀಡಬೇಕು. ಇದರಿಂದ ನಮಗೆ ಏನು ಮಾಡಬೇಕು ಎಂದು ಅರ್ಥವಾಗುತ್ತಿಲ್ಲ. ಇದರಿಂದ ನಮಗೆ ವಿದ್ರ್ಯಾಜನೆಯಲ್ಲಿ ಆಸಕ್ತಿ ಕಳೆದುಕೊಳ್ಳುವಂತಾಗಿದೆ.- ರೂಪಾ ಗೌಡ ವಿದ್ಯಾರ್ಥಿನಿ
—————————————————————-
ಯಲ್ಲಾಪುರ – ಅಂಕೋಲಾ ಬಸ್ನಿಂದ ಇಲಾಖೆಗೆ ಆದಾಯ ಬರುತ್ತಿಲ್ಲ. ಕೇವಲ ಬಸ್ ಪಾಸ್ ವಿದ್ಯಾರ್ಥಿಗಳು ಬಸ್ನಲ್ಲಿ ತುಂಬಿರುತ್ತಾರೆ. ಈ ಹಿನ್ನಲೆಯಲ್ಲಿ ಬಸ್ನ್ನು ರದ್ದುಗೊಳಿಸಲಾಗಿದೆ.- ವ್ಯವಸ್ಥಾಪಕರುಸಾರಿಗೆ ಘಟಕ ಯಲ್ಲಾಪುರ
Leave a Comment