ಹಳಿಯಾಳ:- ಪರ್ಯಾಯ ರಾಜಕೀಯ ದೊರಣೆಗಳಿಂದ ಮಾತ್ರ ರೈತ ಕಾರ್ಮಿಕರ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಲು ಹಾಗೂ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವೆಂದು ಸಿಪಿಐಎಮ್ ಪಕ್ಷದ ಕಾರ್ಯದರ್ಶಿ ಯಮೂನಾ ಗಾಂವಕರ ಹೇಳಿದರು.ಹಳಿಯಾಳ:- ಪರ್ಯಾಯ ರಾಜಕೀಯ ದೊರಣೆಗಳಿಂದ ಮಾತ್ರ ರೈತ ಕಾರ್ಮಿಕರ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಲು ಹಾಗೂ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವೆಂದು ಸಿಪಿಐಎಮ್ ಪಕ್ಷದ ಕಾರ್ಯದರ್ಶಿ ಯಮೂನಾ ಗಾಂವಕರ ಹೇಳಿದರು. ಪಟ್ಟಣದಲ್ಲಿ ನಡೆದ ಹಳಿಯಾಳ ತಾಲೂಕ ಸಮಿತಿ ಸಿ.ಪಿ.ಐ(ಎಂ)ನ ಸಮ್ಮೇಳನವನ್ನು ಉಧ್ಘಾಟಿಸಿ ಅವರು ಮಾತನಾಡಿದರು. ರೈತ ಕಾರ್ಮಿಕರ ಜನಸಾಮಾನ್ಯರ ಅತಿಕ್ರಮಗಳ ಪರಿಹಾರ, ರೈತರ ಫಸಲಿಗೆ ಬೆಂಬಲ ಬೆಲೆ, ದಾಂಡೇಲಿಯಲ್ಲಿ ಮುಚ್ಚಿದ ಉದ್ದಿಮೆಗಳನ್ನು ಪುನಚ್ಚೇತನÀಗೊಳಿಸಿ ಯುವಕರಿಗೆ ಉದ್ಯೋಗಾವಕಾಶ, ಪ್ರವಾಸೋಧ್ಯಮ ತರಬೇತಿ ಕೇಂದ್ರ ಸ್ಥಾಪಿಸಿ ಯುವಕರಿಗೆ ಪ್ರವಾಸೋಧ್ಯಮ ಅಭಿವೃದ್ಧಿಪಡೆಸಬೆಕೆಂದು ಒತ್ತಾಯಿಸಬೇಕು ಸೇರಿದಂತೆ ಹಲವಾರು ನಿರ್ಣಯಗಳನ್ನು ಕಾರ್ಯಕ್ರಮದಲ್ಲಿ ತೆಗೆದುಕೊಳ್ಳಲಾಯಿತು. ಪದಾಧಿಕಾರಿಗಳ ಆಯ್ಕೆ ಪಕ್ಷದ ನೂತನ ತಾಲೂಕ ಸಮಿತಿ ಸದಸ್ಯರಾಗಿ ಹರೀಶ ನಾಯ್ಕ , ಟಿಎಸ್ ನಾಯ್ಕ, ಆರ್ ಎಮ್ ಮುಲ್ಲಾ, ಉದಯ ನಾಯ್ಕ, ಜಯಶ್ರೀ ಹಿರೇಕರ, ಸರಿತಾ ಪಾವಲೇ, ಡಿ ಸ್ಯಾಮಸನ್, ಸಲೀಮ್ ಸೈಯದ್, ಠಕ್ಕಪ್ಪ ಗುರುಬನ್ನವರ ಆಯ್ಕೆಯಾಗಿದ್ದಾರೆ ಸಮಿತಿ ಕಾರ್ಯದರ್ಶಿಯಾಗಿ ಹರೀಶ್ ನಾಯ್ಕ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಪಕ್ಷದ ಜಿಲ್ಲಾ ಸಮ್ಮೇಳನವು ಇದೆ ಡಿಸೆಂಬರ 17 , 18 ರಂದು ದಾಂಡೇಲಿಯಲ್ಲಿ ಎರಡು ದಿನಗಳ ಕಾಲ ನಡೆಯಲಿದ್ದು ಸಮ್ಮೇಳನಕ್ಕೆ ಮಾರ್ಗದರ್ಶನ ನೀಡಲು ಪಕ್ಷದ ಕಾರ್ಯದರ್ಶಿಗಳಾದ ಯಮೂನಾ ಗಾಂವಕರ, ಕಾರ್ಯದರ್ಶಿ ಮಂಡಳಿಯ ಸದಸ್ಯ ಶಾಂತಾರಾಮ ನಾಯಕ ಹಳಿಯಾಳ ದಾಂಡೇಲಿ ಭೇಟಿ ಕೊಡುತ್ತಿದ್ದು ಜಿಲ್ಲಾ ಸಮ್ಮೇಳನ ಅಚ್ಚುಕಟ್ಟಾಗಿ ನಡೆಯಲು ಎಲ್ಲ ಪ್ರಯತ್ನ ನಡೆದಿದೆ ಎಂದು ಅವರು ತಿಳಿಸಿದ್ದಾರ,
Leave a Comment