ಹಳಿಯಾಳ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ಬಗ್ಗೆ ಬಿಜೆಪಿ ಪಕ್ಷದ ಮುಖಂಡ ಹಾಗೂ ಮಾಜಿ ಸಚಿವ ಆರ್.ಎನ್.ನಾಯ್ಕ ನೀಡಿರುವ ಹೇಳಿಕೆಯನ್ನು ಖಂಡಿಸುವುದಾಗಿ ಹೇಳಿರುವ ಮಾಜಿ ಶಾಸಕ ಸುನೀಲ್ ಹೆಗಡೆ ಟಿಕೆ ಮಾಡೋ ಮೊದಲು ಆರ್.ಎನ್.ನಾಯ್ಕ ತಮ್ಮ ಹಿನ್ನಲೆಯನ್ನು ಅರಿತು ಗಂಭೀರತೆ ವಹಿಸಿ ಮಾತನಾಡಲಿ ಎಂದು ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದಲ್ಲಿ ಬಿಜೆಪಿ ಪಕ್ಷದವರು ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಹಿರಿಯ ನಾಯಕ ನಿರಂತರ ಗೆಲುವು ಸಾಧಿಸಿ ಕೇಂದ್ರದಲ್ಲಿ ಸಚಿವರಾಗಿರುವ ಅನಂತಕುಮಾರ ಹೆಗಡೆ ಅವರು ಸಮಯ ಸಂದರ್ಭಕ್ಕೆ ತಕ್ಕಂತೆ ಸಮಯೋಚಿತವಾಗಿ ಹೇಳಿಕೆ ನೀಡುತ್ತಾರೆ ಹೊರತು ಎಲ್ಲಿಯೂ ವಿವೇಚನಾ ರಹಿತ ಸಮಾಜ ಘಾತುಕ ಹೇಳಿಕೆ ನೀಡುವುದಿಲ್ಲ ಹಾಗೂ ಒಬ್ಬ ಭಾರತೀಯನಾಗಿ ತನ್ನ ವಿಚಾರಗಳನ್ನು ಹೆಳುತ್ತಾರೆ ಹೊರತು ಎಲ್ಲಿಯೂ ಅವರು ಧರ್ಮಗಳ ನಡುವೆ ಜಗಳ ಹಚ್ಚುವ ಕೆಲಸ ಹಾಗೂ ತಮ್ಮ ಅಧಿಕಾರ ಪ್ರಯೋಗ ಮಾಡಿಲ್ಲ ಎಂದ ಹೆಗಡೆ ಅಂತಹ ನಾಯಕನ ತೇಜೋವಧೆ ಮಾಡುತ್ತಿರುವ ಆರ್.ಎನ್.ನಾಯ್ಕ ಅವರ ಮೇಲೆ ಬಿಜೆಪಿ ಪಕ್ಷ ಹೈಕಮಾಂಡ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಾಂಗ್ಲಾ ದೇಶಿಗರು ಭಾರತದಲ್ಲಿ ಅಕ್ರಮ ವಲಸೆ ಬಂದು ಬೆಂಗಳೂರಿನಲ್ಲಿ ಸುಮಾರು 5 ಲಕ್ಷ ಜನ ಬಿಡುಬಿಟ್ಟು ಭಾರತದ ಪೌರತ್ವ ಇಲ್ಲದೆ ಅಕ್ರಮವಾಗಿ ವಾಸಿಸುತ್ತಿದ್ದು ನಕಲಿ ಗುರುತಿನ ಚಿಟಿ, ಆಧಾರ್ ಕಾರ್ಡಗಳನ್ನು ಪಡೆದಿದ್ದು ಸಮಾಜ ಘಾತುಕ ಕಾರ್ಯಗಳಲ್ಲಿ ತೊಡಗಿರುವ ಬಗ್ಗೆ ಹಾಗೂ ಇವರಿಂದ ಮುಂದೆ ವಿಧ್ವಂಸಕ ಕೃತ್ಯಗಳು ನಡೆಯುವ ಎಲ್ಲ ಸಾಧ್ಯತೆಗಳ ಬಗ್ಗೆ ಗುಪ್ತಚರ ಇಲಾಖೆ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಮೇಲಿಂದ ಮೇಲೆ ಎಚ್ಚರಿಕೆ ನೀಡಿದರೂ ಸಹ ಅವರು ಈ ಬಗ್ಗೆ ಗಂಭಿರತೆ ವಹಿಸಿ ಅವರನ್ನು ಹೊರಗಟ್ಟುವ ಕಾರ್ಯ ಮಾಡದೆ ಕೇವಲ ಮತಗಳಿಗಾಗಿ ಅವರಿಗೆ ರಕ್ಷಣೆ ನೀಡುತ್ತಿದ್ದು ಇದನ್ನು ಪ್ರಶ್ನೀಸಿ ಸಾರ್ವಜನೀಕ ಹಿತಾಸಕ್ತಿಗಾಗಿ ಸಿಎಂ ಸಿದ್ದರಾಮಯ್ಯ ವಿರುದ್ದ ಓಟಗಾಗಿ ಅವರು ಬೂಟನ್ನು ನೆಕ್ಕುತ್ತಾರೆ ಎಂದು ಅನಂತಕುಮಾರ ಹೆಗಡೆ ನೀಡಿರುವ ಹೇಳಿಕೆ ಸರಿಯಾಗಿದೆ ಎಂದು ಸಮರ್ಥನೆ ಮಾಡಿಕೊಂಡ ಸುನೀಲ್ ಹೆಗಡೆ ಈ ಹಿಂದೆ ಕಾಂಗ್ರೇಸ್ ಪಕ್ಷದ ಸಚಿವ, ಶಾಸಕರು ದೇಶದ ಪ್ರಧಾನ ಮಂತ್ರಿಗಳನ್ನು ಹೊಲಸು ಶಬ್ದಗಳಲ್ಲಿ ಬಾಯಿಗೆ ಬಂದ ಹಾಗೆ ಟಿಕಿಸಿದ್ದು ಆವಾಗ ಇವರಿಗೆ ಸಭ್ಯತೆ ಇರಲಿಲ್ಲವೇ ಎಂದು ಪ್ರಶ್ನೀಸಿದರು.
ಪಕ್ಷದವರು ಯಾರೇ ಆಗಲಿ ತಮ್ಮ ಯಾವುದೇ ಅಸಮಾಧಾನ ಇರಲಿ ಅಥವಾ ವಿಷಯ ಇರಲಿ ಪಕ್ಷದ ಚೌಕಟ್ಟಿನಲ್ಲಿ ಮಾತಾಡಿ ಬಗೆಹರಿಸಿಕೊಳ್ಳಬೇಕು ವಿನಃ ಸಾರ್ವಜನೀಕವಾಗಿ ಟಿಕಿಸುವ ಕಾರ್ಯ ಮಾಡಬಾರದು ಹಾಗೆ ಮಾಡಿದ್ದಲ್ಲಿ ಬಿಜೆಪಿ ಪಕ್ಷ ಅವರು ಯಾರೇ ಇರಲಿ ಅಂತಹವರ ವಿರುದ್ದ ಕ್ರಮ ಕೈಗೊಳ್ಳುವುದರಲ್ಲಿ ಸಂದೇಹವೆ ಇಲ್ಲವೆಂದ ಅವರು ವಿರೋಧ ಪಕ್ಷ ಕಾಂಗ್ರೇಸ್ನೊಡನೆ ಆರ್.ಎನ್.ನಾಯ್ಕ ಕೈಜೊಡಿಸುತ್ತಿದ್ದು ಅದಕ್ಕಾಗೆ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಅವರು ವಿರೋಧ ಪಕ್ಷದವರೇ ಆಗಲಿ ಅಥವಾ ಯಾರೇ ಆಗಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವಿರುದ್ದವಾಗಿ ಹಗುರವಾಗಿ ಮಾತನಾಡುವ ಮೊದಲು ಗಂಭೀರತೆ ವಹಿಸಿ ಮಾತನಾಡಲಿ ಇಲ್ಲದಿದ್ದರೇ ಪರಿಣಾಮ ಎದುರಿಸಬೇಕಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಸುದ್ದಿಗೊಷ್ಠಿಯಲ್ಲಿ ಜೋಯಿಡಾ ಅಧ್ಯಕ್ಷ ತುಕಾರಾಮ ಮಾಂಜ್ರೇಕರ, ಮುಖಂಡರಾದ ಎಸ್.ಎಶೆಟವಣ್ಣವರ, ಅನಿಲ ಮುತ್ನಾಳೆ, ಗಣಪತಿ ಕರಂಜೆಕರ, ವಾಸು ಪೂಜಾರಿ, ವಿಎಮ್ ಪಾಟೀಲ್, ಯಲ್ಲಪ್ಪಾ ಸಾಣಿಕೊಪ್ಪ, ಇಲಿಯಾಸ ಬಳಗಾರ, ಪ್ರದೀಪ ಹಿರೇಕರ ಇತರರು ಇದ್ದರು.
Leave a Comment