ಹೊನ್ನಾವರ:
ಹೊನ್ನಾವರ: ಮಾಜಿ ಸಚಿವ ಆರ್.ಎನ್.ನಾಯ್ಕ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಭಟ್ಕಳದಲ್ಲಿ ಕೋಮುಗಲಭೆಯನ್ನು ಹತ್ತಿಕ್ಕದೇ, ಅಧಿಕಾರವನ್ನು ಸರಿಯಾಗಿ ಬಳಸದೇ ಜನರಿಂದ ತಿರಸ್ಕøತಗೊಂಡ ಅವರು ಚಲಾವಣೆಯಲ್ಲಿರದ ನಾಣ್ಯವಿದ್ದಂತೆ. ಕೇಂದ್ರ ಸಚಿವ ಅನಂತಕುಮಾರ ಹೆಗಡೆಯವರಿಗೆ ಸಂಸ್ಕಾರದ ಪಾಠ ಹೇಳುವ ನೈತಿಕತೆಯಿಲ್ಲ ಅವರಿಗಿಲ್ಲ ಎಂದು ತಾಲೂಕು ಬಿಜೆಪಿ ಮುಖಂಡರು ಹೇಳಿದರು.ಅವರು ಪಟ್ಟಣದ ಖಾಸಗಿ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಮುಖಂಡರು ಮಾತನಾಡಿ ಮಾಜಿ ಸಚಿವ ಆರ್.ಎನ್.ನಾಯ್ಕ ಅವರು ಬುಧವಾರ ಭಟ್ಕಳದಲ್ಲಿ ಅನಂತಕುಮಾರ ಹೆಗಡೆ ಅವರ ವಿರುದ್ಧ ಪತ್ರಿಕಾ ಹೇಳಿಕೆ ನೀಡಿದ್ದನ್ನು ಖಂಡಿಸಿದರು. ತಾಲೂಕು ಬಿಜೆಪಿ ಅಧ್ಯಕ್ಷ ಸುಬ್ರಾಯ ನಾಯ್ಕ ಮಾತನಾಡಿ, ಭಟ್ಕಳ ಗಲಭೆಯ ಕಾಲದಲ್ಲಿ ಜೀವದ ಹಂಗು ತೊರೆದು ಜನತೆಗಾಗಿ ಹೋರಾಟ ಮಾಡಿರುವ ಹಿಂದುತ್ವದ ರೂವಾರಿ ಅನಂತಕುಮಾರ ಹೆಗಡೆಯವರು ಕೇವಲ ಒಂದು ಸಮುದಾಯದ ನಾಯಕರಲ್ಲ. ಅವರು ಸಮಸ್ತ ಹಿಂದು ರಾಷ್ಟ್ರದ ಪ್ರತಿಪಾದಕರು ಎನ್ನುವುದು ಜಿಲ್ಲೆಯ ಪ್ರಜ್ಞಾವಂತ ನಾಗರಿಕರಿಗೆ ಗೊತ್ತು. ಡಾ. ಚಿತ್ತರಂಜನರವರು ಭಟ್ಕಳದ ಕಣ್ಮಿಣಿಯಾಗಿದ್ದು ಅವರ ಕುರಿತು ಮಾತನಾಡುವ ಹಕ್ಕು ಆರ್ ಎನ್ ನಾಯ್ಕರಿಗೆ ಏಲ್ಲಿದೆ? ಮಾಜಿ ಸಚಿವರು ಸರಿಯಾಗಿ ಕರ್ತವ್ಯ ನಿರ್ವಹಿಸಿದರೆ ಭಟ್ಕಳ ಗಲಭೆ ಹಾಗೂ ಚಿತ್ತರಂಜನ ಅವರ ಹತ್ಯೆಯಾಗುತ್ತಿರಲ್ಲಿಲ್ಲ. ಚುನಾವಣೆ ಹತ್ತಿರ ಬಂದಾಗ ಪ್ರತಿಕಾ ಹೇಳಿಕೆ ನೀಡಿ ಮತದಾರರಲ್ಲಿ ಗೊಂದಲ ಸಷ್ಟಿಸಲು ಸಾಧ್ಯವಿಲ್ಲ; ಮತದಾರರು ಪ್ರಬುದ್ದರಾಗಿದ್ದಾರೆ. ಅನಂತಕುಮಾರ ಹೆಗೆಡೆಯವರ ಮತದಾರರು ಐದು ಬಾರಿ ಸಂಸದರನ್ನಾಗಿ ಆಯ್ಕೆ ಮಾಡಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳೆ ನಾಲಾಯಕ್ ಎನ್ನುವ ಪದಬಳಸಿರುವುದು ಆರ್ ಎನ್ ನಾಯ್ಕರಿಗೆ ನೆನಪಾಗಲಿಲ್ಲವೆ? ಬೈಂದೂರಿನಲ್ಲಿ ಸಚಿವ ಅನಂತಕುಮಾರ ಹೆಗಡೆಯವರು ನೀಡಿದ ಹೇಳಿಕೆ ಅಲ್ಲಿಯ ಶಾಸಕ ಗೋಪಾಲ ಪೂಜಾರಿಯವರ ನಡವಳಿಕೆಗೆ ಸಂಬಂಧಿಸಿದೆ. ಆರ್.ಎನ್.ನಾಯ್ಕರು ಬಂಗಾರಪ್ಪನವರ ಅಲೆಯಲ್ಲಿ ಗೆದ್ದು ಸಚಿವರಾದವರು. ತಮ್ಮ ಅಧಿಕಾರಕ್ಕಾಗಿ ಮತ್ತು ಸ್ವಹಿತಾಸಕ್ತಿಗಾಗಿ ಮಾರ್ಗರೆಟ್ ಆಳ್ವಾ, ದೇಶಪಾಂಡೆ ಅವರನ್ನು ದೂಷಿಸುತ್ತ ಹೇಳಿಕೆ ನೀಡಿದರು. ಇವರು ಕೇಂದ್ರ ಸಚಿವರಿಗೆ ಪಾಠ ಹೇಳುವ ನೈತಿಕತೆಯಿಲ್ಲ. ಕೇಂದ್ರ ಸಚಿವ ಅನಂತ ಕುಮಾರ ಹೆಗಡೆಯವರ ಕುರಿತು ಮಾಜಿ ಸಚಿವ ಆರ್ ಎನ್ ನಾಯ್ಕರವರು ನೀಡಿದ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ನಮ್ಮ ಪಕ್ಷದ ಜಿಲ್ಲೆಯ ಉಪಾಧ್ಯಕ್ಷ ಗೋವಿಂದ ನಾಯ್ಕರವರು ಕಳೆದ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸಾಕಷ್ಟು ಮತಗಳಿಸಿದ್ದಾರೆ. ಕೆಜಿಪಿ ಮತ್ತು ಬಿಜೆಪಿ ಮತಗಳ ಹಂಚಿಕೆಯಿಂದ ಪಕ್ಷಕ್ಕೆ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆಯಾಗಿರಬಹುದು ಈ ಬಾರಿ ಭಟ್ಕಳದ ಕ್ಷೇತ್ರ ನಮ್ಮ ಪಕ್ಷದ ಪಾಲಾಗಲಿದೆ. ಗೋವಿಂದ ನಾಯ್ಕರು ಸಹ ಹಿಂದುತ್ವದ ರೂವಾರಿಗಳು ಎನ್ನುವುದು ಆರ್ ಎನ್ ನಾಯ್ಕ ಮರೆತಂತಿದೆ ಎಂದರು. ಬಿಜೆಪಿ ತಾಲೂಕಾ ಪ್ರಧಾನ ಕಾರ್ಯದರ್ಶಿ ರಾಜು ಭಂಡಾರಿ ಮಾತನಾಡಿ, ಆರ್ ಎನ್ ನಾಯ್ಕ ಅವರು ಪಕ್ಷ ವಿರೋಧವಾಗಿ ಮಾತನಾಡಿದ್ದಾರೆ. ಇಷ್ಟೇಲ್ಲ ಮಾತನಾಡುವ ಮಾಜಿ ಸಚಿವರು ಸದ್ಯ ಯಾವ ಪಕ್ಷದಲ್ಲಿದ್ದಾರೆ? ಮುಂದೆ ಏಲ್ಲಿಗೆ ವಲಸೆ ಹೋಗುವ ಸಿದ್ದತೆಯಲ್ಲಿದ್ದಾರೆ ಎನ್ನುವದನ್ನು ಪ್ರಶ್ನಿಸಬೇಕಾಗುತ್ತದೆ ಎಂದರು. ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ನಾಗರಾಜ ನಾಯಕ ತೊರ್ಕೆ, ವೆಂಕಟ್ರಮಣ ಹೆಗಡೆ, ಬಿಜೆಪಿ ತಾಲೂಕಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ನಾಯ್ಕ, ಖಜಾಂಚಿ ಗಣೇಶ ಪೈ, ಮುಕುಂದ ನಾಯ್ಕ ಭಟ್ಕಳ, ಎಂ.ಎಸ್.ಹೆಗಡೆ, ಗಣಪತಿ ನಾಯ್ಕ ಬಿ.ಟಿ., ಟಿ.ಎಸ್.ನಾಯ್ಕ, ಶ್ರೀಧರ ನಾಯ್ಕ ಮಂಕಿ, ಸುರೇಶ ಹರಿಕಾಂತ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಣಪತಿ ಗೌಡ ಚಿತ್ತಾರ, ಕಮಲಾಕರ ನಾಯ್ಕ, ವಿನಾಯಕ ಆಚಾರಿ ಉಪಸ್ಥಿತರಿದ್ದರು.
————————————-
ಮಂಕಿಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಗೌಡ ಗೆದ್ದೆತ್ತಿನ ಬಾಲ ಹಿಡಿಯುವ ರಾಜಕಾರಣಿ – ಬಿಜೆಪಿ ತಾಲೂಕು ಅಧ್ಯಕ್ಷ ಸುಬ್ರಾಯ ನಾಯ್ಕನಮ್ಮ ಸಚಿವ ಅನಂತಕುಮಾರ ಹೆಗಡೆ ಅವರನ್ನು ಇತ್ತೀಚೆಗೆ ಮನಬಂದಂತೆ ಟೀಕಿಸುತ್ತಿದ್ದಾರೆ. ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಂಕಿ ಬ್ಲಾಕ್ ಕಾಂಗ್ರಸ್ ಸಮಿತಿ ಅಧ್ಯಕ್ಷ ಚಂದ್ರಶೇಖರ ಗೌಡ ಮನೆಮನೆಗೆ ಕಾಂಗ್ರೆಸ್ ಎಂದು ಹೇಳಿಕೊಂಡು ಮನಬಂದಂತೆ ಮಾತನಾಡುತ್ತಿದ್ದಾರೆ. ಅವರು ಮಾಡುತ್ತಿರುವುದು ಮನೆಗೆ ಹೋಗುವ ಕಾಂಗ್ರೆಸ್. ಕರ್ನಾಟಕದ ರಾಜ್ಯದ ಬಜೆಟ್ ಎಷ್ಟೆಂದು ಗೊತ್ತಿಲ್ಲದ ನಿಮಗೆ ಭಟ್ಕಳ ಶಾಸಕ ಮಂಕಾಳ ವೈದ್ಯ ಸಾವಿರ ಕೋಟಿ ಅನುದಾನ ತಂದಿದ್ದಾರೆ ಎಂದು ಬೊಗಳೆ ಹೊಡೆಯುತ್ತಿದ್ದೀರಿ. ಸಂಸದರು ಮಾಡಿದ ಅಭಿವೃದ್ಧಿ ಸರಿಯಾದ ಮಾಹಿತಿ ಪಡೆದು ಮಾತನಾಡಿ” – ಸುಬ್ರಾಯ ನಾಯ್ಕ, ಬಿಜೆಪಿ ಹೊನ್ನಾವರ ತಾಲೂಕು ಅಧ್ಯಕ್ಷ
————————————-
Leave a Comment