ಹೊನ್ನಾವರ, ವ್ಯಕ್ತಿಗಳು ಶಾಶ್ವತ ಅಲ್ಲ. ಸಂಘಟನೆ ಶಾಶ್ವತ. ಸಂಘಟನೆ ಒಡೆಯುವ ಕೆಲಸಕ್ಕೆ ಕೆಲವರು ಪ್ರಯತ್ನಿಸುತ್ತಿದ್ದಾರೆ. ಸಂಘಟನೆಯಲ್ಲಿ ಎನ್.ಪಿ.ಎಸ್ ಸಂಘ, ಪದವೀಧರ ಶಿಕ್ಷಕರ ಸಂಘ, ಮುಖ್ಯಾಧ್ಯಾಪಕರ ಸಂಘ, ದೈಹಿಕ ಶಿಕ್ಷಕರ ಸಂಘ, ಹೀಗೆ ಅನೇಕ ಸ್ವಘೋಷಿತ ಸಂಘಗಳು ಹುಟ್ಟಿಕೊಂಡು ಸಂಘಟನೆಯನ್ನು ಒಡೆಯುವ ದೂರ್ತ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಈ ಬಗ್ಗೆ ಶಿಕ್ಷಕರು ಎಚ್ಚರದಿಂದಿರಬೇಕು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ À ಬಸವರಾಜ ಗುರಿಕಾರ ಹೇಳಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆ ಇವರು ಹೊನ್ನಾವರದ ನ್ಯೂ ಇಂಗ್ಲೀಷ್ ಸ್ಕೂಲ್ ಸಭಾಭವನದಲ್ಲಿ ಜಿಲ್ಲಾ ಮಟ್ಟದ ವಿಶೇಷ ಸಾಮಾನ್ಯ ಸಭೆ ಹಾಗೂ ಸಂವಾದ ಕಾರ್ಯಕ್ರಮವನು ಉದ್ದಟಿಸಿಮಾತನಾಡುತ್ತಿದ್ದರು,
ಎನ್.ಪಿ.ಎಸ್ ಯನ್ನು ತೊಡೆದು ಹಾಕಿ ಎಲ್ಲರಿಗೂ ಸರಿಸಮಾನವಾದ ವೇತನ ಹಾಗೂ ಸೌಲಭ್ಯ ನೀಡುವಂತೆ ಸಂಘ ಪ್ರಾಮಾಣಿಕ ಹೋರಾಟ ಮಾಡುತ್ತಿದೆ. ಮುಖ್ಯಾಧ್ಯಾಪಕರಿಗೆ ಪ್ರತ್ಯೇಕ ವೇತನ ಶ್ರೇಣಿ. ಪದವೀಧರ ಶಿಕ್ಷಕರ ಅ/o ರೂಲ್ ಬದಲಾವಣೆ ಹಾಗೂ 50% ರಷ್ಟು ನೇಮಕಾತಿಯಲ್ಲಿ ಆಧ್ಯತೆ, ವರ್ಗಾವಣೆ ಹಾಗೂ ಹೆಚ್ಚುವರಿ ಮಾರ್ಗ ಸೂಚಿಯಲ್ಲಿ ಬದಲಾವಣೆ 6ನೇ ವೇತನ ಆಯೋಗದಲ್ಲಿ ಪ್ರಾ.ಶಾ.ಶಿಕ್ಷಕರ ವೇತನ ತಾರತಮ್ಯ ನಿವಾರಣೆ ಹಾಗೂ ಕೇಂದ್ರಕ್ಕೆ ಸರಿಸಮಾನವಾದ ವೇತನ ನೀಡುವ ಬಗ್ಗೆ ಈಗಾಗಲೇ ಸಂಘ ಸಶಕ್ತವಾದ ವಾದ ಮಂಡಿಸಿ ಅವು ಜಾರಿಯಾಗುವ ಹಂತದಲ್ಲಿದೆ ಎಂದರು. ಸಂಘದ ಪದಾಧಿಕಾರಿಗಳು ಪ್ರಾಮಾಣಿಕವಾಗಿ ಶಿಕ್ಷಕರ ಸಮಸ್ಯೆಗಳ ನೆರವಿಗೆ ಭಾವಿಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು. ಬೇರೆ ಬೇರೆ ಸಂದರ್ಭಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅನ್ಯಾಯವಾದಾಗ ಪ್ರತಿಭಟಿಸಿ ನ್ಯಾಯ ದೊರಕಿಸಿ ಕೊಡುವಲ್ಲಿ ಸಂಘ ಪ್ರಮುಖ ಪಾತ್ರವಹಿಸಿದೆ. ನೌಕರರ ಇತಿಹಾಸದಲ್ಲಿಯೇ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿಯೇ ಪ್ರತ್ಯೆಕ ವೇತನ ಶ್ರೇಣಿ ಹಾಗೂ ವಿಶೇಷ ಭತ್ಯೆ ಕೊಡಿಸಿದ ಕೀರ್ತಿಗೆ ಸಂಘಕ್ಕೆ ಸಲ್ಲಬೇಕಾಗಿದೆ. ಇವತ್ತಿನ ದಿನಗಳಲ್ಲಿ ಪ್ರಾ.ಶಾ.ಶಿಕ್ಷಕರು ಮನಶಾಂತಿಯಿಂದ, ಸಂತೋಷದಿಂದ ಕೆಲಸ ಮಾಡುವ ವಾತಾವರಣವನ್ನು ನಿರ್ಮಾಣ ಮಾಡುವಲ್ಲಿ ಸಂಘ ಪ್ರಮುಖ ಪಾತ್ರವಹಿಸಿದೆ. ಶಿಕ್ಷಕರ ವೇತನ, ವರ್ಗಾವಣೆ, ಸಿಗತಕ್ಕ ಸೌಲಭ್ಯಗಳು ಇವೆಲ್ಲವು ಕೂಡ ಕಾಲಕಾಲಕ್ಕೆ ಸಿಗುವಂತೆ ಮಾಡಲು ಸಂಘಟನೆ ಮಂಚೂಣಿಯಲ್ಲಿದೆ ಎಂದರು. ಕೇವಲ ಅರ್ಥಿಕ ಸೌಲಭ್ಯಗಳಿಗÀಷ್ಟೇ ಹೊರಾಡದೆ ಶಿಕ್ಷಣದ ಗುಣಮಟ್ಟ ಹೆಚ್ಚಿಸುವತ್ತ ಹಾಗೂ ಸರ್ಕಾರಿ ಶಾಲೆಗಳ ಸಬಲೀಕರಣ ದತ್ತ ಸಂಘ ತನ್ನದೇ ಆದ ರೀತಿಯಲ್ಲಿ ಶಿಕ್ಷಕರಿಗೆ ಉತ್ತೇಜನ, ಪ್ರೋತ್ಸಾಹ ನೀಡುತ್ತಾ ಬಂದಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಕಡಿಮೆಯಾಗುವ ಈ ಸಂದರ್ಭಗಳÀಲ್ಲಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಹಾಗೂ ಶಾಲೆಗಳು ಮುಚ್ಚದಂತೆ ಕ್ರಮವಹಿಸುವ ಬಗ್ಗೆ ಸಂಘ ತನ್ನದೇ ಆದ ಕಾರ್ಯಸೂಚಿಯನ್ನು ಹಾಕಿಕೊಂಡು ಈ ದಿಶೆಯಲ್ಲಿ ಯಶಸ್ಸನ್ನು ಕೂಡ ಸಾಧಿಸಿದೆ.
ಸರಿಸಮಾನವಾದ ವೇತನ ನೀಡುವ ಬಗ್ಗೆ ಈಗಾಗಲೇ ಸಂಘ ಸಶಕ್ತವಾದ ವಾದ ಮಂಡಿಸಿ ಅವು ಜಾರಿಯಾಗುವ ಹಂತದಲ್ಲಿದೆ ಎಂದರು. ಸಂಘದ ಪದಾಧಿಕಾರಿಗಳು ಪ್ರಾಮಾಣಿಕವಾಗಿ ಶಿಕ್ಷಕರ ಸಮಸ್ಯೆಗಳ ನೆರವಿಗೆ ಭಾವಿಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಪ್ರಾಸ್ತವಿಕ ಮಾತನಾಡಿದ ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಆನಂದು ಗಾಂವಕರ ಮಾತನಾಡಿ ನಮ್ಮ ಜಿಲ್ಲಾ ಸಂಘ ಅತ್ಯಂತ ಕ್ರಿಯಾತ್ಮಕವಾಗಿ ಕೆಲಸ ಮಾಡುತ್ತಿದೆ. ಜಿಲ್ಲಾ ಸಂಘದ ಇತಿಹಾಸದಲ್ಲಿಯೆ ರಾಜ್ಯಾಧ್ಯಾಕ್ಷರನ್ನು ಕರೆದು ವಿಶೇಷ ಸಭೆ ನಡೆಸಿದ್ದು ಇದೆ ಮೊದಲು. ಸಂಘ ಯಾವತ್ತು ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಮಂಚೂಣಿಯಲ್ಲಿದೆ. ಹಾಗೂ ತನ್ನ ಅವಧಿಯಲ್ಲಿ ಅನೇಕ ಸಮಸ್ಯೆಗಳನ್ನು ಇತ್ಯರ್ಥ ಪಡಿಸಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯ ಅಧ್ಯಕ್ಷರಾದ ನಾರಾಯಣ ನಾಯಕ ಹಾಗೂ ಭಟ್ಕಳ, ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ತಾಲ್ಲೂಕುಗಳ ಅಧ್ಯಕ್ಷರಾದ ಶಂಕರ ನಾಯ್ಕ, ರತ್ನಾಕರ ನಾಯ್ಕ, ಎನ್.ಎಸ್.ನಾಯ್ಕ, ಹೊನ್ನಾವರ ಸರಕಾರಿ ನೌಕರರ ಸಂಘದ ಆರ್.ಪಿ.ಭಟ್ಟ, ಜಿಲ್ಲಾ ಪದಾಧಿಕಾರಿಗಳಾದ ಚಂದ್ರಕಲಾ ನಾಯಕ, ನಾಯ್ಕ, ದಿವೇಶ ನಾಯ್ಕ, ಶೇಖರ ನಾಯ್ಕ, ಸುದೀಶ ನಾಯ್ಕ, ಎಂ.ಜಿ.ನಾಯ್ಕ ಉಪಸ್ಥಿತರಿದ್ದರು.
ಸುನಂದಾ ಭಟ್ಟ ಪ್ರಾರ್ಥಿಸಿದರು. ಹೊನ್ನಾವರ ತಾಲ್ಲೂಕಾ ಅಧ್ಯಕ್ಷರಾದ ಎನ್. ಎಸ್. ನಾಯ್ಕ ಸ್ವಾಗತಿಸಿದರು. ಎಂ.ಜಿ.ನಾಯ್ಕ ವಂದಿಸಿದರು. ಮೋಹನ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರ, ಭಟ್ಕಳ ತಾಲ್ಲೂಕಗಳು ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ಪ್ರತಿನಿಧಿಗಳು ನಾಮ ನಿರ್ದೇಶಿತ ಸದಸ್ಯರುಗಳು ಹಾಜರಿದ್ದರು. ಹಾಗೂ ಶಿಕ್ಷಕರ ಅನೇಕ ಸಮಸ್ಯೆಗಳ ಬಗ್ಗೆ ಸಂವಾದ ಕಾರ್ಯಕ್ರಮ ನಡೆಸಲಾಯಿತು.
Leave a Comment