ಹೊನ್ನಾವರ : ತಾಲೂಕಿನ ನವಿಲಗೋಣ ಗ್ರಾಮ ಪಂಚಾಯತ ವ್ಯಾಪ್ತಿಯ ಬಾದಳ್ಳಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡ “ಮನೆಮನೆಗೆ ಕಾಂಗ್ರೆಸ್” ಕಾರ್ಯಕ್ರಮ ನಡೆಯಿತು.
ಗ್ರಾಮದ ನೂರಾರು ಮನೆಗಳಿಗೆ ಭೇಟಿ ನೀಡಿದ ಕಾಂಗ್ರೆಸ್ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ಧರಾಮಯ್ಯ ಸರಕಾರದ ನಾಲ್ಕುವರೆ ವರ್ಷಗಳ ಅವಧಿಯಲ್ಲಿ ಮಾಡಿದ ಸಾಧನೆಯ ಕಿರು ಪುಸ್ತಕವನ್ನು ಪ್ರತಿ ಮನೆ ಮನೆಗೆ ನೀಡಲಾಯಿತು. ಈ ಸಂದರ್ಭದಲ್ಲಿ ನವಿಲಗೋಣ ಕಾಂಗ್ರೆಸ್ ಘಟಕದ ಅಧ್ಯಕ್ಷ ಸತೀಶ ಹೆಬ್ಬಾರ, ಉಪಾಧ್ಯಕ್ಷೆ ಮಹಾದೇವಿ ನಾಯ್ಕ, ಸದಸ್ಯೆ ಹೇಮಾವತಿ ಗೌಡ, ಇಸ್ಮಾಯಿಲ್ ಸಾಬ, ಮಾರುತಿ ನಾಯ್ಕ, ಗಯೂರ ಸಾಬ್, ಕಿರಣ ಭಂಡಾರಿ ಮುಂತಾದವರು ಉಪಸ್ಥಿತರಿದ್ದರು.
Leave a Comment