ಹೊನ್ನಾವರ
ಬಳಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಶಂಭು ಬೈಲಾರ ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಗಣಪತಿ ನಾಯ್ಕ ಬಿ.ಟಿ. ಆಯ್ಕೆಯಾಗಿದ್ದಾರೆ.
ಬಳಕೂರು ವಿ.ಎಸ್ಎಸ್ಗೆ 11 ನಿರ್ದೇಶಕರ ಸ್ಥಾನಕ್ಕೆ ನವಂಬರ್ 19 ರಂದು ನಡೆದಿತ್ತು. ತಾ.ಪಂ. ಮಾಜಿ ಅಧ್ಯಕ್ಷ ಶಂಭು ಬೈಲಾರ ಹಾಗೂ ಬಳಕೂರು ಕೇಶವ ನಾಯ್ಕ ನೇತೃತ್ವದ ತಂಡ 7 ಸ್ಥಾನಗಳಲ್ಲಿ ಜಯಗಳಿಸಿತ್ತು. ಸೋಮವಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆಯಿತು.
ನಿರ್ದೆಶಕರಾಗಿ ಶಂಭು ಬೈಲಾರ, ಬಳಕೂರು ಕೇಶವ ನಾಯ್ಕ, ಜಿನ್ನೋಡದ ರಾಜೇಶ ಪೂಜಾರಿ, ತಲಗೋಡದ ಮಹೇಶ ಹೆಗಡೆ, ಇಡಗುಂಜಿಯ ಲಕ್ಷ್ಮೀ ಪಂಡಿತ, ಬಳಕೂರಿನ ಗಣಪತಿ ನಾಯ್ಕ ಬಿ.ಟಿ., ಕೃಷ್ಣ ಕರಿಮಣಿ, ಬಳಕೂರು ಧರ್ಮಾ ನಾಯ್ಕ, ಗಣಪತಿ ನಾಯ್ಕ (ಬಾಬು), ಕುಳಿಮನೆ ರಾಧಾ ನಾಯ್ಕ, ಬಳಕೂರು ಸುಬ್ರಾಯ ನಾಯ್ಕ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗುವಲ್ಲಿ ಭಟ್ಕಳದ ಬಿಜೆಪಿ ಧುರೀಣ ಸುನೀಲ ನಾಯ್ಕ, ಬಿಜೆಪಿ ತಾಲೂಕಾ ಅಧ್ಯಕ್ಷ ಸುಬ್ರಾಯ ನಾಯ್ಕ, ಸಿ. ಎಸ್. ನಾಯ್ಕ, ಬಳಕೂರು ಮಾಧವ ನಾಯ್ಕ ಸಹಕರಿಸಿದ್ದರು ಎಂದು ಶಂಭು ಬೈಲಾರ ತಿಳಿಸಿದ್ದಾರೆ.
ಫೋಟೋ ಇದೆ 27 ಹೆಚ್ ಎನ್ ಆರ್ 03: ಶಂಭು ಬೈಲಾರ
Leave a Comment