• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಗರಣಗಳ ಸರಮಾಲೆಯ ನಿರಾಧಾರ ಆರೋಪ ಹೊರಿಸಿ ತೇಜೊವದೆಗೆ ಯತ್ನಿಸಿದ್ದಾರೆ;ಪ.ಪಂ.ಅಧ್ಯಕ್ಷೆ ಜೈನಾಬಿ ಸಾಬ

November 29, 2017 by Gaju Gokarna Leave a Comment

 

ಹೊನ್ನಾವರ:

ಪಟ್ಟಣ ಪಂಚಾಯತದ 10 ಸದಸ್ಯರುಗಳು ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ ನನ್ನ ಮೇಲೆ ಹಗರಣಗಳ ಸರಮಾಲೆಯ ನಿರಾಧಾರ ಆರೋಪ ಹೊರಿಸಿ ನನ್ನ ತೇಜೊವದೆಗೆ ಯತ್ನಿಸಿದ್ದಾರೆ ಎಂದು ಪದಚ್ಯುತಿಗೊಂಡ ಪ.ಪಂ.ಅಧ್ಯಕ್ಷೆ ಜೈನಾಬಿ ಸಾಬ ಹೇಳಿದರು.ಪಟ್ಟಣ ಪಂಚಾಯತ ಸಭಾಭವನದಲ್ಲಿ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಏಕಪಕ್ಷೀಯ ನೀರ್ಣಯ ಕೈಗೊಳ್ಳುತ್ತಿದ್ದರು ಎಂದು ನನ್ನ ವಿರುದ್ಧ ಆರೋಪಿಸಿದ್ದಾರೆ. ಅವರು ಸಾಮಾನ್ಯ ಸಭೆಯಲ್ಲಿ ಕುಳಿತು ಏನು ಮಾಡುತ್ತಿದ್ದರು? ಸದಸ್ಯರ ಸಮ್ಮುಖದಲ್ಲಿ ಚರ್ಚಿಯಾಗಿ ನಿರ್ಣಯ ಕೈಗೊಂಡ ವಿಷಯಗಳು ಮಾತ್ರ ಮಂಜೂರಿ ನೀಡಲಾಗುತ್ತದೆ ಎಂಬ ಸಾಮಾನ್ಯ ಜ್ಞಾನವೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಸದಸ್ಯರುಗಳಿಗೆ ಇಲ್ಲವೇ? ಎಂದು ಪ್ರಶ್ನಿಸಿದರು. ಪಟ್ಟಣದಲ್ಲಿ ಹೂಳೆತ್ತುವ ಕಾಮಗಾರಿಗೆ ರೂ. 3 ಲಕ್ಷ 65 ಸಾವಿರ ರೂಪಾಯಿ ಪಾವತಿಸಿದ್ದೇನೆ ಎಂದು ಆರೋಪಿಸುವ ಇವರು ಮಳೆಗಾಲದ ಸಂದರ್ಭದಲ್ಲಿ ನಗರದ ಎಲ್ಲಾ ಮನೆ, ಗಟಾರ, ಮತ್ತು ರಸ್ತೆಗಳಲ್ಲಿ ನೀರು ತುಂಬಿ ಹರಿಯುತ್ತಿರುವ ಸಂದರ್ಭದಲ್ಲಿ ಎಲ್ಲಾ ಸದಸ್ಯರುಗಳ ಒಪ್ಪಿಗೆಯ ಮೇರೆಗೆ ತುರ್ತು ಕಾಮಗಾರಿ ಕೈಗೊಳ್ಳಲಾಗಿತ್ತು. ಮತ್ತು ಎಲ್ಲಾ ಸದಸ್ಯರುಗಳು ಕೂಡ ತಮ್ಮ ವಾರ್ಡಗಳಲ್ಲಿ ಖುದ್ದಾಗಿ ನಿಂತು ಹೂಳೆತ್ತುವ ಕಾಮಗಾರಿ ಮಾಡಿಸಿಕೊಂಡಿದ್ದಾರೆ. ಈ ಕುರಿತು ಕಾಮಗಾರಿಯ ಛಾಯಾ ಚಿತ್ರ ಪ. ಪಂ. ಕಾರ್ಯಾಲಯದಲ್ಲಿ ದಾಖಲೆ ಇದೆ. ಪೌರ ಕಾರ್ಮಿಕರ ದಿನಾಚರಣೆಯಂದು ನಾನೇ ಸ್ವತಃ ಕಾರ್ಯಕ್ರಮವನ್ನು ಉದ್ಘಾಟಸಿ, ಪೌರ ಕಾರ್ಮಿಕರೊಂದಿಗೆ ಬೆರೆತು, ಅವರ ಸಂತೋಷದಲ್ಲಿ ನಾನು ಪಾಲ್ಗೊಂಡು ಅವರೊಂದಿಗೆ ಸ್ವತಃ ಭೋಜನ ಸ್ವೀಕರಿಸಿದ್ದೆ. ಕಾರ್ಯಕ್ರಮದ ನಡುವೆ ತುರ್ತು ಬೇರೊಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೂ ಎಲ್ಲ ಪೌರ ಕಾರ್ಮಿಕರ ಅನುಮತಿ ಪಡೆದು ತೆರಳಿದ್ದೆ. ಮತ್ತೆ ಕೆಲವೇ ನಿಮಿಷದಲ್ಲಿ ಬಂದು ಅವರೊಂದಿಗೆ ಪಾಲ್ಗೊಂಡಿದ್ದೆ. ಆದರೆ ನನ್ನ ಮೇಲೆ ಆರೋಪಗಳ ಸುರಿಮಳೆ ಮಾಡುವವರ ಈ ರೀತಿಯ ವರ್ತನೆ ಸರಿಯಲ್ಲಾ ಎಂದು ಬೇಸರ ವ್ಯಕ್ತಪಡಿಸಿದ್ದರು. ಸ್ವಚ್ಛ ಭಾರತ ಯೋಜನೆಯ ಅನುಷ್ಠಾನಕ್ಕೆ 12.5 ಲಕ್ಷ ರೂಪಾಯಿ ಮೊತ್ತದಲ್ಲಿ ಪಟ್ಟಣದ ಮನೆ ಮನೆಗಳಿಗೆ ತಲಾ ಎರಡು ಬಕೆಟ್‍ನಂತೆ ಕಸ ಸಂಗ್ರಹಿಸಿ ನೀಡಲು 10 ಸಾವಿರ ಬಕೆಟ್ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ. ನಾವು ಸಭೆಯಲ್ಲಿ ನೀಲ್‍ಕಮಲ್ ತೋರಿಸಿ ಯಾವುದೋ ಹಾವೇರಿ ಕಂಪನಿಯ ಬಕೆಟ್ ಹಂಚಲು ಪ್ರಯತ್ನಿಸಿದ್ದಾರೆ ಎಂದು ಸುಳ್ಳು ಆರೋಪಿಸಿದ್ದಾರೆ. ಆದರೆ ಸಭೆಯಲ್ಲಿ ತೋರಿಸಿದ ನೀಲ್‍ಕಮಲ್ ಬಕೆಟ್‍ನ್ನೇ ಮುಂದಿನ ದಿನದಲ್ಲಿ ಎಲ್ಲ ಸದಸ್ಯರ ಒಪ್ಪಿಗೆಯ ಮೇರೆಗೆ ನಗರ ಜನತೆಗೆ ಹಂಚಿಕೆ ಮಾಡಲೂ ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ ಎನ್ನುವ ಸತ್ಯ. ನೀರು ಪೋಲಾಗದಂತೆ ತಡೆಯಲು ಪ್ರತಿ ಮನೆಗೆ ವಾಟರ್ ಮೀಟರ್ ಅಳವಡಿಕೆಗೆ 6 ಲಕ್ಷ 76 ಸಾವಿರ ರೂಪಾಯಿಗಳ ಕ್ರೀಯಾ ಯೋಜನೆ ರೂಪಿಸಿ ಮಂಜೂರಿ ಮಾಡಿತ್ತು. ಅದನ್ನು ನನ್ನ ಮನಸೇಚ್ಚೆ ಬದಲಾಯಿಸಿದ್ದೇನೆ ಎನ್ನುವುದು ಸತ್ಯಕ್ಕೆ ದೂರವಾಗಿದೆ. ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರುಗಳ ಸಮ್ಮುಖದಲ್ಲಿ ಠರಾಯಿಸಿದ ವಿಷಯಗಳನ್ನು ಬದಲಾಯಿಸಲು ಸಾಧ್ಯವೇ ಎನ್ನುವ ಸಣ್ಣ ಪರಿಜ್ಞಾನವೂ ಈ ಸದಸ್ಯರಿಗೆ ಬೇಡವೇ? ಪಟ್ಟಣದಲ್ಲಿ 28 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ಒಳಚರಂಡಿ ಯೋಜನೆ ಅನುಷ್ಠಾನದಲ್ಲಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಆರೋಪಿಸುವ ಸದಸ್ಯರು ಈ ಸದಸ್ಯರುಗಳಂತೆ ಕಾಮಗಾರಿ ನೀರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲಾ ಅನ್ನುವ ಅಭಿಪ್ರಾಯವು ಕೂಡಾ ನನ್ನದಾಗಿತ್ತು. ಆದರೆ ಈ ಕಾಮಗಾರಿ ನಡೆಸುವವರು ಅವರದೇ ಮಾರ್ಗ ಅನುಸರಿಸುತ್ತಿದ್ದರು. ಪ್ರತಿ ವಾರ್ಡಗಳಲ್ಲಿ ಗುಣಮಟ್ಟದ ಕಾಮಗಾರಿಯನ್ನು ಮಾಡಿಸಿಕೊಳ್ಳುವುದು ಆಯಾ ವಾರ್ಡಗಳ ಸದಸ್ಯರುಗಳ ಜವಾಬ್ದಾರಿಯೂ ಹೌದು. ಇವೆಲ್ಲವುಗಳನ್ನೂ ಕೂಡ ನನ್ನ ಮೇಲೆ ಗೂಬೆ ಕೂರಿಸುವುದು ಸರಿಯಲ್ಲಾ ಎಂದರು.ಪತ್ರಿಕಾಗೋಷ್ಠಿಯಲ್ಲಿ ಪಟ್ಟಣ ಪಂಚಾಯತ ಪ್ರಬಾರಿ ಅಧ್ಯಕ್ಷೆ ಶರಾವತಿ ಸುರೇಶ ಮೇಸ್ತ, ಸದಸ್ಯರುಗಳಾದ ಎಸ್.ಎಂ.ನಾಯ್ಕ, ಉಪಸ್ಥಿತರಿದ್ದರು.

 

 

 

 

 

 

 

 

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Honavar News Tagged With: 10 ಸದಸ್ಯರುಗಳು, 3 ಲಕ್ಷ 65 ಸಾವಿರ, ಆರೋಪ ಹೊರಿಸಿ, ಇತ್ತೀಚೆಗೆ, ಜೈನಾಬಿ ಸಾಬ, ತೇಜೊವದೆಗೆ ಯತ್ನಿಸಿದ್ದಾರೆ, ನಿರಾಧಾರ, ಪ.ಪಂ.ಅಧ್ಯಕ್ಷೆ, ಪತ್ರಿಕಾಗೋಷ್ಠಿ, ವಾಟರ್ ಮೀಟರ್ ಅಳವಡಿಕೆ, ಸರಮಾಲೆಯ, ಹಗರಣಗಳ, ಹಾವೇರಿ ಕಂಪನಿಯ ಬಕೆಟ್

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar