ಹಳಿಯಾಳ:-
ಹಳಿಯಾಳ:- ಹಳಿಯಾಳದಲ್ಲಿ ಏರಟೆಲ್ ಕಂಪೆನಿಯ ನೇಟವರ್ಕ ಸಂಪರ್ಕ ಕಳಪೆಯಾಗಿದ್ದು ಗ್ರಾಹಕರಿಗೆ ಅತೀವ ತೊಂದರೆಯಾಗುತ್ತಿದ್ದು ಇದನ್ನು ಕೂಡಲೇ ಸರಿಪಡಿಸಿ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಬೇಕು ಇಲ್ಲದಿದ್ದಲ್ಲಿ ಹಳಿಯಾಳದ ಏರಟೆಲ್ ಕಚೇರಿಯ ಎದುರು ಪ್ರತಿಭಟನೆ ನಡೆಸುವುದಾಗಿ ಜಯ ಕರ್ನಾಟಕ ಸಂಘಟನೆ ಹಳಿಯಾಳ ಘಟಕ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸುವ ಮೂಲಕ ಎಚ್ಚರಿಕೆ ನೀಡಿದೆ. ಪ್ರತಿಭಟನಾ ಮೇರವಣಿಗೆಯ ಮೂಲಕ ಇಲ್ಲಿಯ ಮಿನಿ ವಿಧಾನಸೌಧಕ್ಕೆ ಆಗಮಿಸಿದ ಜಯ ಕರ್ನಾಟಕ ಸಂಘಟನೆಯವರು ಏರಟೆಲ್ ಟೆಲಿಕಾಂ ಸಂಸ್ಥೆಯಿಂದ ಹಳಿಯಾಳದಲ್ಲಿ ನೇಟವರ್ಕ ಸಮಸ್ಯೆ ವೀಪರಿತವಾಗಿದ್ದು ಗ್ರಾಹಕರಿಗೆ ತೀರಾ ಅನಾನೂಕೂಲತೆ ಉಂಟಾಗಿದೆ ಈ ಬಗ್ಗೆ ಏರಟೆಲ್ ಕಚೇರಿಗೆ ದೂರು ನೀಡಿದರು ಪ್ರಯೋಜನವಾಗುತ್ತಿಲ್ಲ ಕಾರಣ ತಾಲೂಕಾಡಳಿತ ಈ ಬಗ್ಗೆ ಕ್ರಮ ಕೈಗೊಂಡು ಗ್ರಾಹಕರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕಾಧ್ಯಕ್ಷ ವಿಲಾಸ ಕಣಗಲಿ, ಉಪಾಧ್ಯಕ್ಷ ಶಿರಾಜ ಮುನವಳ್ಳಿ ಪದಾಧಿಕಾರಿಗಳಾದ ಮಹೇಶ ಹುಲಕೊಪ್ಪ, ವಿನೋದ ಗಿಂಡೆ, ಮಹಾದೇವ, ನವೀನ ಕಣಗಲಿ, ಹನುಮಂತ ಇತರರು ಇದ್ದರು.
Leave a Comment