ಹಳಿಯಾಳ: – ಪಟ್ಟಣದಲ್ಲಿ ನಡೆದ ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಮರಾಠ ಸಮಾಜದ ಮುಖಂಡರಿಗೆ ಸೂಕ್ತ ಸ್ಥಾನಮಾನ ನೀಡಿಲ್ಲ ಎಂದು ತಾಲೂಕಾ ಕ್ಷತ್ರೀಯ ಮರಾಠಾ ಪರಿಷತ್ ನೀಡಿದ ಹೇಳಿಕೆಯು ಪೂರ್ಣ ಸುಳ್ಳಾಗಿದ್ದು, ಸಮಾಜದ ಹಿತದೃಷ್ಟಿಯ ಬದಲು ರಾಜಕೀಯ ದುರುದ್ದೇಶದಿಂದ ನೀಡಿದ ಈ ಹೇಳಿಕೆಯನ್ನು ನಾವು ಕಟುವಾಗಿ ಖಂಡಿಸುತ್ತೆವೆ ಎಂದು ಬಿಜೆಪಿ ಪಕ್ಷದ ಮರಾಠ ಮುಖಂಡರು ಹಾಗೂ ಜನಪ್ರತಿನಿಧಿಗಳು ಹೇಳಿದ್ದಾರೆ.ಹಳಿಯಾಳ: – ಪಟ್ಟಣದಲ್ಲಿ ನಡೆದ ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಮರಾಠ ಸಮಾಜದ ಮುಖಂಡರಿಗೆ ಸೂಕ್ತ ಸ್ಥಾನಮಾನ ನೀಡಿಲ್ಲ ಎಂದು ತಾಲೂಕಾ ಕ್ಷತ್ರೀಯ ಮರಾಠಾ ಪರಿಷತ್ ನೀಡಿದ ಹೇಳಿಕೆಯು ಪೂರ್ಣ ಸುಳ್ಳಾಗಿದ್ದು, ಸಮಾಜದ ಹಿತದೃಷ್ಟಿಯ ಬದಲು ರಾಜಕೀಯ ದುರುದ್ದೇಶದಿಂದ ನೀಡಿದ ಈ ಹೇಳಿಕೆಯನ್ನು ನಾವು ಕಟುವಾಗಿ ಖಂಡಿಸುತ್ತೆವೆ ಎಂದು ಬಿಜೆಪಿ ಪಕ್ಷದ ಮರಾಠ ಮುಖಂಡರು ಹಾಗೂ ಜನಪ್ರತಿನಿಧಿಗಳು ಹೇಳಿದ್ದಾರೆ. ಪಟ್ಟಣದಲ್ಲಿ ತಾಲೂಕ ಬಿಜೆಪಿ ಘಟಕದ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಘಟಕ ಅಧ್ಯಕ್ಷ ಶಿವಾಜಿ ನರಸಾನಿ ಮಾತನಾಡಿ ಬಿಜೆಪಿಯು ಎಲ್ಲ ಸಮಾಜ ಸಮುದಾಯ ಜಾತಿ ಧರ್ಮಗಳ ಪಕ್ಷವಾಗಿದ್ದು, ಎಲ್ಲರ ಅಭಿವೃದ್ಧಿ ಹಿತದೃಷ್ಟಿಯನ್ನು ಬಯಸುತ್ತಿದೆ. ಪರಿವರ್ತನಾ ಯಾತ್ರೆಯಲ್ಲಿ ಜಿ.ಆರ್.ಪಾಟೀಲ ಅವರನ್ನು ಅವಮಾನಿಸುವ ಘಟನೆಗಳು ಎಲ್ಲೂ ನಡೆದಿಲ್ಲ. ಮೇಲಾಗಿ ಅವರ ಸ್ಥಾನಮಾನಕ್ಕೆ ತಕ್ಕಂತೆ ವೇದಿಕೆಯಲ್ಲಿ ಸ್ಥಾನವನ್ನು ನೀಡಲಾಗಿದೆ. ಅದಲ್ಲದೇ ಜಿ.ಆರ್.ಪಾಟೀಲ ಅವರು ತಮ್ಮ ಬ್ಯಾನರ್ ಹರಿದು ಹಾಕಿದ ವಿಷಯವನ್ನು ಠಾಣೆಯಲ್ಲಿ ದಾಖಲಿಸಿದ್ದಾರೆ. ಜಿ.ಆರ್.ಪಾಟೀಲ ತಮ್ಮನ್ನು ಅವಮಾನಿಸಲಾಗಿದೆ ಎಂಬ ವಿಷಯವನ್ನು ನಮ್ಮ ಗಮನಕ್ಕೆ ತಂದಿಲ್ಲ ಹಾಗೂ ಜಿಲ್ಲಾ ವರಿಷ್ಠರ ಗಮನಕ್ಕೂ ತಂದಿಲ್ಲ ಅದರ ಬದಲು ತಾಲೂಕಾ ಕ್ಷತ್ರೀಯ ಮರಾಠಾ ಪರಿಷತ್ ಗಮನಕ್ಕೆ ಒಯ್ದಿದ್ದಾರೆ. ನಾನು ಸಹ ಮರಾಠ ಸಮಾಜದವನಾಗಿದ್ದು ಜಿ.ಆರ್.ಪಾಟೀಲ ನನ್ನ ಗಮನಕ್ಕೆ ಈ ಪ್ರಕರಣ ತಂದರೇ ಖಂಡಿತ ಪರಿಶೀಲಿಸುತ್ತೆವೆ ಎಂದರು. ತಾಲೂಕಾ ಕ್ಷತ್ರೀಯ ಮರಾಠ ಪರಿಷತ್ ಅಧ್ಯಕ್ಷರಾಗಿರುವ ಎಸ್.ಎಲ್.ಘೋಟ್ನೇಕರ ಕಾಂಗ್ರೆಸ್ ಪಕ್ಷದವರಾಗಿದ್ದು ಈ ರೀತಿ ಸಮಾಜದ ಹೆಸರಿನಲ್ಲಿ ನಮ್ಮ ಪಕ್ಷದ ಆಂತರಿಕ ವಿಷಯದಲ್ಲಿ ಕೈ ಹಾಕಬಾರದು ಎಂದು ಎಚ್ಚರಿಸಿದರು. ಬಿಜೆಪಿ ಜಿಲ್ಲಾ ಮುಖಂಡ ಗಣಪತಿ ಕರಂಜೇಕರ ಮಾತನಾಡಿ ಮರಾಠರಿಗೆ ಅನ್ಯಾಯವಾದರೇ ಸುಮ್ಮನಿರಲಾರೇವೂ ಎಂದು ಈಗ ಹೇಳಿಕೆ ನೀಡಿರುವ ತಾಲೂಕ ಕ್ಷತ್ರೀಯ ಮರಾಠ ಪರಿಷತ್ ಕೆಸರೊಳ್ಳಿ ಗ್ರಾ.ಪಂ ಅಧ್ಯಕ್ಷರು ಮರಾಠ ಸಮಾಜದ ಐದು ಮುಖಂಡರ ಮೇಲೆ ಸುಳ್ಳು ಅಟ್ರಾಸಿಟಿ ಪ್ರಕರಣ ದಾಖಲಿಸಿದ್ದಾಗ ಏಲ್ಲಿಗೆ ಹೋಗಿತ್ತು ಎಂದು ಪ್ರಶ್ನಿಸಿದರು. ರೈತ ಮೋರ್ಚಾದ ಜಿಲ್ಲಾ ಮುಖಂಡ ಎಸ್.ಎ ಶೆಟವಣ್ಣವರ, ಮಾತನಾಡಿ ಜಿ.ಆರ್.ಪಾಟೀಲ ಜಾತೀ ಧರ್ಮವನ್ನು ಮುಂದೇ ಮಾಡಿಕೊಂಡು ರಾಜಕೀಯ ಮಾಡುವುದು ಸರಿಯಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿಯ ಮರಾಠ ಮುಖಂಡರಾದ ಮಂಜುನಾಥ ಅಳ್ನಾವರಕರ, ಸೋನಪ್ಪ ಸುಣಕಾರ, ಮೋಹನ ರೆಡೆಕರ, ಗುರುನಾಥ ಗೌಡಾ, ಹನುಮಂತ ಸಾವಂತ, ಈಶ್ವರ ವಾಟ್ಲೇಕರ, ಶಾಂತಾರಾಮ ಘಾಡಿ, ವಿಷ್ಣು ಮಿರಾಶಿ, ನಾಮದೇವ ಮಿರಾಶಿ, ಗಂಗಾರಾಮ, ತುಕಾರಾಮ ಬೇಕನಿ, ದೇಮಣ್ಣ ಇತರರು ಇದ್ದರು.
Leave a Comment