ಹೊನ್ನಾವರ: ಯಕ್ಷಗಾನ ಕಾಶಿ ಎಂದು ಪ್ರಸಿದ್ಧಿ ಪಡೆದ ಗುಂಡಬಾಳ ಶ್ರೀ ಮುಖ್ಯಪ್ರಾಣ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಮಾರ್ಗಶಿರ ಮಾಸದ ಹುಣ್ಣಿಮೆ ಶನಿವಾರ ವನಭೋಜನ ಉತ್ಸವ ನಡೆಯಿತು. ಶ್ರೀ ದೇವರನ್ನು ಭಕ್ತರು ಅಲಂಕೃತಗೊಂಡ ಪಲ್ಲಕ್ಕಿಯಲ್ಲಿ ಕುಳಿಸಿ ಮೆರವಣಿಗೆಯಲ್ಲಿ ವನಕ್ಕೆ ತೆರಳಿ ಧಾತ್ರಿ ಹವನ, ಮಹಾ ನೈವೇದ್ಯ ಹಾಗೂ ಅನ್ನಸಂತರ್ಪಣೆ ನಡೆಯಿತು. ನೂರಾರು ಭಕ್ತರು ಶ್ರೀ ದೇವರ ಪ್ರಸಾದ ಸ್ವೀಕರಿಸಿ ಪುನೀತರಾದರು. ಶ್ರೀ ದೇವರಿಗೆ ವಿಶೇಷವಾಗಿ ಹೂವಿನಿಂದ ಅಲಂಕಾರಗೊಳಿಸಿ ಪೂಜಿಸಿದರು. ದೇವರಿಗೆ ಹಣ್ಣು ಕಾಯಿ, ಬಾಳೆಕೊನೆ ಪೂಜೆ, ಅಭಿಷೇಕ, ಮಂಗಲಾಷ್ಟಕ ಸೇವೆ, ಅಷ್ಟಾವಧಾನ ಸೇವೆ ನಡೆಯಿತು.
Leave a Comment