ಹೊನ್ನಾವರ : ಇಂದಿರಾಗಾಂಧಿಯವರು ಸ್ವತಂತ್ರ ಭಾರತದಲ್ಲಿ ಉಕ್ಕಿನ ಮಹಿಳೆಯೆಂದು ಪ್ರಖ್ಯಾತಿಯಾಗಿ 17 ವರ್ಷಗಳ ಕಾಲ ರಾಷ್ಟ್ರದ ಪ್ರಧಾನಮಂತ್ರಿಗಳಾಗಿದ್ದರು. ಬಡವರ, ಶೋಷಿತರ, ಮಹಿಳೆಯರ ಮತ್ತು ನಿರ್ಲಕ್ಷಿತ ವರ್ಗಗಳ ಅಭಿವೃದ್ಧಿಗಾಗಿ ಹಲವಾರು ದೂರಗಾಮಿ, ಪರಿಣಾಮಕಾರಿ, ಕ್ರಾಂತಿಕಾರಿ ಕಾರ್ಯಕ್ರಮಗಳನ್ನು ರೂಪಿಸಿ ಕಾನೂನುಗಳನ್ನು ರಚಿಸಿ ಬಡವರ ಕಣ್ಮಣಿಯೆಂದು ಪ್ರಖ್ಯಾತಿಯಾಗಿದ್ದರೂ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಹೇಳಿದರು.
ಅವರು ಇಂದು ಹೊನ್ನಾವರ ಶರಾವತಿ ವೃತ್ತದ ಬಳಿ ಬ್ಲಾಕ್ ಕಾಂಗ್ರೆಸ್ ಏರ್ಪಡಿಸಿದ “ಇಂದಿರಮ್ಮ 100-ದೀಪ ನಮನ” ಕಾರ್ಯಕ್ರಮದಲ್ಲಿ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಳೆದ ನವ್ಹೆಂಬರ 19 ರಂದು ದೇಶ ಶ್ರೀಮತಿ ಇಂದಿರಾ ಗಾಂಧಿಯವರ 100ನೇ ಜನ್ಮ ಶತಾಬ್ದಿ ಆಚರಿಸಿದ ಸಂದರ್ಭದಲ್ಲಿ ದೇಶಾದ್ಯಂತ ಕಾಂಗ್ರೆಸ್ ಪಕ್ಷ ನವ್ಹೆಂಬರ್ 1 ರಿಂದ 30 ವರೆಗೆ ಪ್ರತಿ ಗ್ರಾಮ ಮಟ್ಟದಲ್ಲಿಯೂ ಕೂಡ ಈ ಕಾರ್ಯಕ್ರಮವನ್ನು ಆಚರಿಸುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕೆ.ಪಿ.ಸಿ.ಸಿ. ಹಿಂದುಳಿದ ವರ್ಗ ವಿಭಾಗದ ಪ್ರಧಾನ ಕಾರ್ಯದರ್ಶಿ ರವಿಕುಮಾರ ಶೇಟ್ಟಿ ಮಾತನಾಡಿ ದಿ. ಇಂದಿರಾ ಗಾಂಧಿಯವರು ದೇಶದ ಬಡವರ, ಶೋಚಿತ ವರ್ಗದ ಧ್ವನಿಯಾಗಿದ್ದರು ಎಂದರು. ಬ್ಯಾಂಕ್ ರಾಷ್ಟ್ರೀಕರಣ, ಉಳುವವನೇ ಒಡೆಯ ಕಾರ್ಯಕ್ರಮವನ್ನು ದೇಶದಾದ್ಯಂತ ವಿಸ್ತರಿಸಿ ಬಡವರ ಆಶಾಕಿರಣವಾಗಿದ್ದರೂ ಎಂದರು.
ಕಾರ್ಯಕ್ರಮದಲ್ಲಿ ನೆರೆದ ಸಭಿಕರು ಇಂದಿರಮ್ಮನ ಬಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶೃದ್ದಾಂಜಲಿ ಸಲ್ಲಿಸಿದರು. ಕಾಂಗ್ರೆಸ್ ಕಾರ್ಯಕರ್ತರು “ನೂರು ದೀಪಗಳನ್ನು” ಬೆಳಗಿಸುವ ಮೂಲಕ ಇಂದಿರಮ್ಮ ನಮನ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದರು. ನೆರೆದ ಅಭಿಮಾನಿಗಳಿಗೆ ಸಿಹಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವಿನಾಯಕ ಶೇಟ್, ದಾಮೋದರ ನಾಯ್ಕ, ನಗರ ಘಟಕದ ಅಧ್ಯಕ್ಷ ಕೇಶವ ಮೇಸ್ತ, ಪಟ್ಟಣ ಪಂಚಾಯತ ಪ್ರಬಾರಿ ಅಧ್ಯಕ್ಷೆ ಶರಾವತಿ ಮೇಸ್ತ, ಸುರೇಶ ಮೇಸ್ತ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೇತ್ರಾವತಿ ಹೆಗಡೆ, ಉಮಾ ಮೇಸ್ತ, ಲೀನಾ ಫರ್ನಾಂಡಿಸ್, ನಿತ್ಯಾ ಪಾಲೇಕರ್, ಗಣಪತಿ ಮೇಸ್ತ, ಮಂಜುನಾಥ ಖಾರ್ವಿ, ಶ್ರೀಕಾಂತ ಮೇಸ್ತ, ಗಣೇಶ ನಾಯ್ಕ ಮುಗ್ವಾ, ಇಸ್ಮಾಯಿಲ್ ಸಾಬ್, ಗಯೂರ ಸೈಯದ್, ಮೋಹನ ಮೇಸ್ತ, ಪ್ರದೀಪ ಶೆಟ್ಟಿ ಇನ್ನು ಮುಂತಾದವರು ಪಾಲ್ಗೊಂಡಿದ್ದರು. ಬ್ಲಾಕ್ ಕಾಂಗ್ರೆಸ್ನ ಲಂಭೋಧರ ನಾಯ್ಕ ಕೊನೆಯಲ್ಲಿ ವಂದಿಸಿದರು.
Leave a Comment