ಕಾರವಾರ:
ಚಿಕ್ಕಮಗಳೂರಿನ ರೋಟರಿ ಕ್ಲಬ್ ಕಾಫಿಲ್ಯಾಂಡ್ರವರು “ಸ್ನೇಹಕ್ಕಾಗಿ ಸವಾರಿ” ಯಾತ್ರೆ ಆರಂಭಿಸಿದ್ದು, ಕಾರವಾರಕ್ಕೆ ಭೇಟಿ ನೀಡಿದ್ದ ಇವರನ್ನು ರೋಟರಿ ಕ್ಲಬ್ ಆಫ್ ಕಾರವಾರ ವತಿಯಿಂದ ಸ್ವಾಗತಿಸಲಾಯಿತು.
ಎರಡು ಕ್ಲಬ್ ಸದಸ್ಯರು ಪರಸ್ಪರ ಪರಿಚಯಿಸಿಕೊಂಡರು. ರೋಟರಿ ಸೀಸೈಡ್ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಹಿರೇಮಠ ಮತ್ತು ರೋಟರಿ ಕಾಫಿಲ್ಯಾಂಡ್ ಅಧ್ಯಕ್ಷ ರವಿಂದ್ರ ನಾಯ್ಡು ಧ್ವಜ ವಿನಿಮಯ ಮಾಡಿದರು. ಕ್ಲಬ್ ಸದಸ್ಯಾದ ಬಿ.ಎಸ್.ಪೈ, ಪ್ರಸನ್ನ ರೇವಣಕರ, ಎಂ. ಆರ್. ನಾಯ್ಕ, ಎಂ.ಜಿ.ಹೆಗಡೆ, ಕೃಷ್ಣಾನಂದ ಕೊಳ್ವೇಕರ, ಪ್ರಶಾಂತ ವೆರ್ಣೇಕರ, ದೀಪಕ ಅಣ್ವೇಕರ, ಗಣೇಶ ಆಚಾರಿ, ಚೇತನ ನಿಲಾವರ, ದೀಪಾ ಪೈ, ಅನು ಜಯಪ್ರಕಾಶ, ದೀಪಿಕಾ ವೆರ್ಣೇಕರ ಇತರರಿದ್ದರು. ಕ್ಲಬ್ ಸದಸ್ಯರಾದ ಚಂದ್ರಶೇಖರನ್ ನಿರ್ವಹಿಸಿದರು. ಜಯಪ್ರಕಾಶ ಜಿ.ಕೆ ಪ್ರಸ್ತಾಪಿಸಿದರು. ಕೆ. ಪರಶುರಾಮ ಕೊಳ್ವೇಕರ ವಂದಿಸಿದರು
Leave a Comment